ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರ ಸಲ್ಲದು: ಯೋಗೀಶ್
ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ಜನರಲ್ಲಿ ಅಪಪ್ರಚಾರ ಮಾಡಿ ಗೊಂದಲ ಸೃಷ್ಟಿಸುತ್ತಿzರೆ ಎಂದು ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿದ್ಯಾನಗರದ ಶಿಥಿಲಗೊಂಡಿರುವ ತುಂಗಾ ಸೇತುವೆ ಕುರಿತು ೨೦೧೮ ರಿಂದಲೇ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಕಾಂಗ್ರೆಸ್ ವತಿಯಿಂದ ಮಾಡಲಾಗಿದ್ದು, ಅಂದಿನ ಹಾಗೂ ಹಾಲಿ ಲೋಕೋ ಪಯೋಗಿ ಸಚಿವ ಸತೀಶ್ ಜಾರಕಿ ಹೊಳಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಅದರ ಪರಿಣಾಮವಾಗಿ ಸೇತುವೆ ಕಾಮಗಾರಿಗೆ ೪೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಸೇತುವೆ ಮಂಜೂರಾತಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಅವರ ಶ್ರಮವೂ ಇದೆ ಎಂಬುದನ್ನು ಒಪ್ಪಿಕೊಂಡ ಯೋಗೀಶ್, ಆದರೆ ಅನುದಾನ ಬಿಡುಗಡೆಯಾದ ನಂತರವೂ ರಾಜ್ಯ ಸರ್ಕಾರ ದಿವಾಳಿ ಯಾಗಿದೆ ಎಂದು ಹೇಳುವುದು ವಿರೋಧಾಬಾಸ ಎಂದು ಟೀಕಿಸಿದರು.
ಕಳೆದ ಒಂದು ತಿಂಗಳಲ್ಲಿ ರಾಜ್ಯ ಸರ್ಕಾರದಿಂದ ಜಿಗೆ ಸುಮಾರು ೨೦೦ ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ೨ನೇ ಬಾರಿ ಗುದ್ದಲಿ ಪೂಜೆ ನೆರವೇರಿಸಿರುವ ಶಾಸಕರು ಈಗ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಸೇತುವೆಗೆ ೪೦ ಕೋಟಿ ರೂ. ಬಿಡುಗಡೆಯಾಗಿದ್ದು, ೧೫ ಕೋಟಿಗಿಂತ ಹೆಚ್ಚಿನ ವೆಚ್ಚದ ಕಾಮಗಾರಿಗೆ ಸಂಪುಟದ ಅನುಮೋದನೆ ದೊರಕಬೇಕಾಗಿ ರುವ ಕಾರಣ ಸ್ವಲ್ಪ ವಿಳಂಬವಾ ಗುತ್ತಿದ್ದು, ನವೆಂಬರ್ ವೇಳೆಗೆ ಕಾಮಗಾರಿ ಆರಂಭವಾಗಲಿದೆ ಎಂದರು.
ರಾಜ್ಯದಲ್ಲಿ ಒಟ್ಟಿಗೆ ಸೇತುವೆ ಗಳಿಗೆ ೨೦೦೦ ಕೋಟಿ ರೂ. ಸರ್ಕಾರ ಬಜೆಟ್ನಲ್ಲಿ ಕಾಯ್ದಿರಿ ಸಿದ್ದು ಶಿವಮೊಗ್ಗದ ಸೇತುವೆಗೆ ಪ್ರಾಧಾನ್ಯತೆ ನಿಡಲಾಗಿದೆ. ಇದರ ಜೊತೆಗೆ ಯುಜಿಡಿಗೆ ಕಾಮಗಾರಿಗೆ ೪೦ ಕೋಟಿ ಹಾಗೂ ನಗರೋತ್ಥಾನದ ಅಡಿಯಲ್ಲಿ ೧೨೫ ಕೋಟಿ ನಿಗಽಪಡಿಸಲಾಗಿದ್ದು, ಈಗಾಗಲೇ ಅದಕ್ಕೆ ಗುದ್ದಲಿಪೂಜೆ ಆಗಿದೆ. ಆದರೆ ಶಾಸಕರು ಎ ಬಡಾವಣೆಗಳಲ್ಲಿ ಮತ್ತೊಮ್ಮೆ ಗುದ್ದಲಿಪೂಜೆ ಮಾಡುತ್ತಿzರೆ. ಹಾಗಾದರೆ ಸರ್ಕಾರ ಅನುದಾನ ನೀಡಿದಂತ್ತಲ್ಲವೇ? ಮತ್ಯಾಕೆ ಶಾಸಕರು ಜನರಲ್ಲಿ ಈ ಸರ್ಕಾರದಿಂದ ಅಭಿವೃದ್ಧಿಯಾಗಿಲ್ಲ ಎಂದು ತಪ್ಪು ಮಾಹಿತಿ ನೀಡುತ್ತಿzರೆ. ಸರ್ಕಾರದ ದುಡ್ಡು ಇವರಿಗೆ ಪ್ರಚಾರ. ಎ ಕಾರ್ಯಕ್ರಮಗಳಲ್ಲೂ ಶಿಷ್ಠಾಚಾರ ಉಲ್ಲಂಘನೆ ಮಾಡಿzರೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ವಿರುದ್ಧವೂ ವಾಗ್ದಾಳಿ ನಡೆಸಿದ ಯೋಗೀಶ್, ಉಡಾನ್ ಯೋಜನೆ ಹಾಗೂ ವಿಮಾನ ನಿಲ್ದಾಣದ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸುವ ಸಂಸದರು, ದೇಶಾದ್ಯಂತ ಚರ್ಚೆಯಾಗಿರುವ ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ಮನ ವಹಿಸಿzರೆ, ಪೈಲೆಟ್ಗಳಿಗೆ ಹೊಸ ನೀತಿ ಅಳವಡಿಸಿದ್ದರಿಂದ ಇಡೀ ದೇಶದಲ್ಲಿ ವಿಮಾನಯಾನ ಸಂಸ್ಥೆ ನಷ್ಟದಲ್ಲಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣವಾಗಿದ್ದು, ಈ ಬಗ್ಗೆ ಸಂಸದರ ಚಕಾರವೆತ್ತುತ್ತಿಲ್ಲ ಏರ್ ಇಂಡಿಯಾದ ೧೦೦ ವಿಮಾನ ಇಂಡಿಗೋ ಸಂಸ್ಥೆಯ ೮೦ ವಿಮಾನಗಳು ಹಾರಾಟ ನಿಲ್ಲಿಸಿದೆ. ಶಿವಮೊಗ್ಗದ ನೈಟ್ಲ್ಯಾಂಡಿಂಗ್ ಸಮಸ್ಯೆ ಬಗ್ಗೆ ಈಗಾಗಲೇ ಸರ್ಕಾರದಿಂದ ಏಳುಕೋಟಿ ಬಿಡುಗಡೆಯಾಗಿದ್ದು, ಜುಲೈ ಅಂತ್ಯದೊಳಗೆ ನೈಟ್ಲ್ಯಾಂಡಿಂಗ್ ಪ್ರಾರಂಭವಾಗಲಿದೆ ಎಂದರು.
ಪ್ರಮುಖರಾದ ಶಿವಕುಮಾರ್, ಚಂದ್ರಶೇಖರ್, ಪಾಲಾಕ್ಷಿ, ವಿಶ್ವನಾಥ್ ಕಾಶಿ, ಚಿನ್ನಪ್ಪ, ಹೆಚ್.ಕೆ.ಬಾಬು, ಪವನ್ಕುಮಾರ್, ರಾಜು ಮೊದಲಾದವರಿದ್ದರು.

