ಜಿಲ್ಲಾ ಸುದ್ದಿತಾಜಾ ಸುದ್ದಿ

ಮಹಿಳೆಯರಿಗೆ ಸನ್ಮಾನಿಸುವುದರಿಂದ ಅವರ ವ್ಯಕ್ತಿತ್ವಗಳಿಗೆ ಮನ್ನಣೆ ನೀಡಿದಂತಾಗಿದೆ : ಡಾ| ವಿಜಯಶ್ರೀ

Share Below Link

ಶಿವಮೊಗ್ಗ: ಜೆಸಿಐ ಇಂಡಿಯಾದಿಂದ ರೇಸ್, ರಿಪ್ಲೆಕ್ಷನ್ ಆಫ್ ವುಮನ್ ಎನ್ನುವ ವಿಷಯ ಕುರಿತು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಮಾಡಲು ತಿಳಿಸಲಾಗಿತ್ತು. ಅದರಂತೆ ಮಲೆನಾಡಿನ ನಾಲ್ವರು ಮಹಿಳೆಯರಿಗೆ ಸನ್ಮಾನ ಹಾಗೂ ಸೆಲಿಬ್ರಿಟಿ ಮೇಕ್‌ಓವರ್ ಆರ್ಟಿಸ್ಟ್ ಆಗಿರುವ ಸೌಮ್ಯ ಪಂಚಾಕ್ಷರಿ ಅವರಿಂದ ಬ್ಯೂಟಿಷಿಯನ್ ತರಬೇತಿ ಕಾರ್ಯಗಾರ ಆಯೋಜಿಸಲಾಗಿದೆ ಎಂದು ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಕಾರ್ಯಕ್ರಮದ ಛೇರ್ ಪರ್ಸನ್ ಆಗಿದ್ದ ಡಾ.ವಿಜಯಶ್ರೀ ಅವರು ತಿಳಿಸಿದರು.
ಮಹಿಳೆಯರು ಎ ರಂಗ ಗಳಲ್ಲಿಯೂ ಇzರೆ. ಅತ್ಯುನ್ನತ ಸಾಧನೆ ಕೂಡ ಮಾಡಿzರೆ ಹೀಗಾಗಿ ಇದನ್ನು ಸ್ಮರಿಸಬೇಕಾದ ಆದ್ಯ ಕರ್ತವ್ಯ ನಮ್ಮದಾಗಿದೆ. ವೇದಿಕೆಗಳು ಅನೇಕ ಆದರೆ ಮಹಿಳೆಯರಿಗಾಗಿ ಮೀಸಲಾಗಿ ರುವ ವೇದಿಕೆಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗೌರವಿಸಲು ಅಂತರ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತೇವೆ. ಈ ಆಚರಣೆಯು ತಮ್ಮದೇ ಆದ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳಾ ವ್ಯಕ್ತಿತ್ವಗಳಿಗೆ ಮನ್ನಣೆ ನೀಡಿದಂತಾ ಗಿದೆ, ಇಂತಹದೊಂದು ಅವಕಾಶ ಜೆಸಿಐ ಶಿವಮೊಗ್ಗ ಶರಾವತಿ ಘಟಕಕ್ಕೆ ಬಂದಿರುವುದು ಬಹಳ ಸಂತಸದ ಸಂಗತಿಯಾಗಿದೆ ಎಂದರು.
ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಅಧ್ಯಕ್ಷ ಜೆಎಫ್‌ಡಿ ಸ್ವಪ್ನ ಸಂತೋಷ್ ಗೌಡ ಅವರು ಮಾತನಾಡಿ, ಮಹಿಳಾ ದಿನಾಚರಣೆಗೂ ಒಂದು ದಿನ ಖಾಯ್ದಿರಿಸಬೇಕು ಎಂದು ಬಹಳ ವರ್ಷಗಳ ಹೋರಾಟಗಳ ತರುವಾಯ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಸ್ತುತಗೊಂಡಿದೆ, ಹೀಗೆ ಈ ಕಾಲಘಟ್ಟದಲ್ಲಿ ಅಂತಹದೊಂದು ಹೋರಾಟಗಳು ಇಲ್ಲದೆ ಹೋದರು, ಮಹಿಳಾ ಪ್ರಾಧನ್ಯತೆ ಎ ರಂಗಗಳಲ್ಲಿಯೂ ಲಭಿಸಿದೆ, ಅಲ್ಲದೆ ಅಗ್ರಮುಖಿಯಾಗಿ ಮಹಿಳೆಯರು ತಮ್ಮ ಪ್ರಭುತ್ವವನ್ನು ಸಾಧಿಸಿzರೆ ಎಂದರು
ಕಾರ್ಯಕ್ರಮದಲ್ಲಿ ಡಾ.ಸೋನಾಲಿ, ಕಿರುತೆರೆ ನಟಿ ದೀಪಾ, ಸಿರಿ ಮೇಕ್‌ಓವರ್ ಸ್ಟುಡಿಯೋ ಆಗಿರುವ ಸೌಮ್ಯ ಪಂಚಾಕ್ಷರಿ, ನತ್ಯ ಸಂಯೋಜಕಿ, ಸಿನಿಮಾ ಕಲಾವಿದೆ ಮಾಧುರಿ, ಅವರುಗಳಿಗೆ ಘಟಕದಿಂದ ಸನ್ಮಾನಿಸಲಾಯಿತು.
ಪ್ರಮುಖರಾದ ಅಶ್ವಿನಿ ಆನಂದ್, ಸೌಮ್ಯ ಅರಳಪ್ಪ, ಮಮತಾ ಶಿವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.