ಜಿಲ್ಲಾ ಸುದ್ದಿತಾಜಾ ಸುದ್ದಿ

ಸಹಕಾರಿ ಕ್ಷೇತ್ರ ಸದೃಢಗೊಳಿಸುವ ಮೂಲಕ ಅನ್ನದಾತರ ಬೆನ್ನೆಲುಬಾಗಿ ನಿಲ್ಲುವುದು ತಮ್ಮ ಮೊದಲ ಆದ್ಯತೆ: ಆರ್‌ಎಂಎಂ

Share Below Link

ಶಿವಮೊಗ್ಗ: ಜಿಲ್ಲೆಯ ಪ್ರತಿ ಹೋಬಳಿಯಲ್ಲೂ ಡಿಸಿಸಿ ಬ್ಯಾಂಕ್ ನ ಹೊಸ ಶಾಖೆಗಳನ್ನು ಆರಂಭಿಸು ವುದಾಗಿ ಸಹಕಾರಿ ಧುರೀಣ ಹಾಗೂ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಎರಡೂವರೆ ವರ್ಷಗಳ ನಂತರ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ದ್ದೇನೆ. ಆಡಳಿತ ಮಂಡಳಿ ಸೇರಿದಂತೆ ಸಹಕಾರಿ ವಲಯದಿಂದ ನಿರೀಕ್ಷೆಗೂ ಮೀರಿ ದ ಪ್ರೀತಿ, ವಿಶ್ವಾಸ, ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.
ಸಹಕಾರ ಕ್ಷೇತ್ರದ ಶಕ್ತಿ ಅನಾ ವರಣ ಆಗಿದೆ. ಬಹಳಷ್ಟು ಜನರು ಆರ್.ಎಂ. ಮಂಜುನಾಥಗೌಡ ಅವರನ್ನು ಸಹಕಾರ ಕ್ಷೇತ್ರದಿಂದ ತೆಗೆಯಬೇಕೆಂದು ಪ್ರಯತ್ನ ನಡೆಸಿದ್ದರು. ಆದರೆ, ಸಹಕಾರಿಗಳು ತೋರಿದ ಪ್ರೀತಿ ವಿಶ್ವಾಸದಿಂದ ಮತ್ತೆ ಅಧ್ಯಕ್ಷನಾಗಿದ್ದೇನೆ. ನನ್ನ ಜವಾಬ್ದಾರಿ ಹೆಚ್ಚಾಗಿದ್ದು, ಅದನ್ನು ನಿಭಾಯಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಮುಂದಿನ ಐದು ವರ್ಷಗಳ ಅವಧಿಗೆ ಡಿಸಿಸಿ ಬ್ಯಾಂಕ್ ಜೊತೆಗಿ ರುವ ಒಂದು ಸಾವಿರಕ್ಕೂ ಅಧಿಕ ಸಹಕಾರ ಸಂಘಗಳು, ೧೭೪ ಪ್ರಾಥಮಿಕ ಸಹಕಾರ ಸಂಘ ಗಳು, ಹಾಲು ಉತ್ಪಾದಕರ ಸಂಘಗಳು, ಆದ್ಯತಾ ಕ್ಷೇತ್ರವಾದ ಸ್ವಸಹಾಯ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ೫ ದಿನಗಳಲ್ಲಿ ಯೋಜನಾ ವರದಿ ಯನ್ನು ನಿಮ್ಮ ಮುಂದಿ ಡುತ್ತೇನೆ. ಸಹಕಾರಿ ಕ್ಷೇತ್ರದಲ್ಲಿ ಎಲ್ಲಾ ರಂಗ ದಲ್ಲಿಯೂ ಕೆಲಸ ಮಾಡಬಹು ದಾದ ಯೋಜನೆಗಳನ್ನು ರೂಪಿಸು ವುದಾಗಿ ತಿಳಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಗಳು ಪ್ರಾಥಮಿಕ ಸಹಕಾರ ಸಂಘ ಗಳನ್ನು ಸಾಮಾನ್ಯ ಸೇವಾ ಕೇಂದ್ರ ಗಳಾಗಿ ಪರಿವರ್ತಿಸಲು ಕ್ರಮ ಕೈಗೊಂಡಿವೆ. ಪ್ರಾಥಮಿಕ ಸಹಕಾರ ಕೇಂದ್ರಗಳನ್ನು ಬಹುಉದ್ದೇಶಿತ ಸೇವಾ ಕೇಂದ್ರಗಳಾಗಿ ಬದಲಾವಣೆ ಮಾಡಲಿದ್ದು, ಒಂದೇ ಸೂರಿನಡಿ ರೈತರಿಗೆ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯವಾದ ಎಲ್ಲಾ ಸೇವೆಗಳು ಲಭ್ಯ ಇರುತ್ತವೆ. ಗೊಬ್ಬರ, ಬೀಜ, ಸಿಮೆಂಟ್, ಪರಿ ಕರಗಳು, ಬೆಳೆ ಮಾರಾಟ ವ್ಯವಸ್ಥೆ ಮೊದಲಾದವುಗಳನ್ನು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕಲ್ಪಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ಕೂಡ ಸಹ ಕಾರ ಕ್ಷೇತ್ರಕ್ಕೆ ಅಗತ್ಯ ನೆರವು ಕಲ್ಪಿಸಿ ದೆ. ಪ್ರಾಥಮಿಕ ಸಹಕಾರ ಸಂಘ ಗಳಿಗೆ ಗ್ಯಾಸ್ ಏಜೆನ್ಸಿ, ಪೆಟ್ರೋಲ್ ಬಂಕ್ ತೆರೆಯಲು ಅವಕಾಶ ಕಲ್ಪಿಸು ತ್ತಿದೆ. ಸಾಮಾನ್ಯ ಸೇವಾ ಕೇಂದ್ರ ಗಳಾಗಿ ಪರಿವರ್ತಿಸಲು ಮುಂದಾ ಗಿದೆ. ಜನ ಔಷಧಿ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾ ಗಿದೆ. ಸೂಪರ್ ಮಾರ್ಕೆಟ್‌ಗಳ ರೀತಿಯೂ ಪ್ರಾಥಮಿಕ ಸಹಕಾರ ಸಂಘಗಳು ಕಾರ್‍ಯನಿರ್ವಹಿಸಲಿ ದ್ದು, ಕಡಿಮೆ ಬೆಲೆಗೆ ಗುಣಮಟ್ಟದ ವಸ್ತುಗಳು ಲಭ್ಯ ಇರುತ್ತವೆ ಎಂದರು.
ಅದಕ್ಕಿಂತ ಮೊದಲು ಕಟ್ಟಡ ಗಳು ಇಲ್ಲದ ಪ್ರಾಥಮಿಕ ಸಹಕಾರ ಸಂಘಗಳಿಗೆ ಸರ್ಕಾರದಿಂದ ನೆರವು ಪಡೆಯದೆ ಕಟ್ಟಡ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗು ವುದು. ಇನ್ನೂ ಐದು ವರ್ಷಗಳಲ್ಲಿ ನಮ್ಮ ವರ್ಕಿಂಗ್ ಕ್ಯಾಪಿಟಲ್ ೫೦೦೦ ಕೋಟಿ ರೂಪಾಯಿ ಮುಟ್ಟಿ ದರೆ ಜಿಲ್ಲೆಯಲ್ಲಿ ಬೇರೆ ವಾಣಿಜ್ಯ ಬ್ಯಾಂಕುಗಳಿಂದ ನಾವು ಮುಂದಿರು ತ್ತೇವೆ ಎಂದು ತಿಳಿಸಿದರು.
೧೯೯೪ -೯೫ರ ಅವಧಿಯಲ್ಲಿ ೩೦ ಕೋಟಿ ರೂ. ಇದ್ದ ವರ್ಕಿಂಗ್ ಕ್ಯಾಪಿಟಲ್ ಈಗ ೨೦೦೦ ಕೋಟಿ ರೂ. ಇದೆ. ಸಹಕಾರ ಕ್ಷೇತ್ರ ರಾಜ ಕೀಯ ದಿಂದ ಹೊರತಾಗಿರಬೇಕು. ಈ ನಡುವೆ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ನುಸುಳಿದ್ದು, ಮತ್ತೆ ರಾಜಕೀಯ ಜತಿ ಹೊರತುಪ ಡಿಸಿದ ಸಹಕಾರಿ ವ್ಯವಸ್ಥೆಯನ್ನು ರೂಪಿಸುತ್ತೇವೆ. ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡು ತ್ತೇವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಹಳ ವರ್ಷಗಳ ನಂತರ ಬರಗಾಲ ಉಂಟಾಗಿದ್ದು ರೈತರಿಗೆ ೧೭೪ ಪ್ರಾಥಮಿಕ ಸಹ ಕಾರ ಸಂಘಗಳ ಮೂಲಕ ಅಗತ್ಯನೆರವು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಸಹಕಾರಿ ವ್ಯವಸ್ಥೆಯಲ್ಲಿ ೨.೬೦ ಲಕ್ಷ ರೈತ ಸದಸ್ಯರಿದ್ದಾರೆ ಎಲ್ಲರಿಗೂ ಆರ್ಥಿಕ ನೆರವು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ೧೯೯೪ -೯೫ರಲ್ಲಿ ೧೧,೦೦೦ ರೈತರಿಗೆ ೨೧ ಕೋಟಿ ರೂ. ನಷ್ಟು ಸಾಲ ಒದಗಿಸ ಲಾಗಿತ್ತು. ಈಗ ೧.೨೦ ಲಕ್ಷ ರೈತರಿಗೆ ೧೦೦೦ ಕೋಟಿ ರೂ.ಗೂ ಅಧಿಕ ಸಾಲ ಒದಗಿಸಲಾಗಿದೆ ಎಂದರು.
ಕಳೆದ ಮೂರು ವರ್ಷದಿಂದ ಸ್ವಸಹಾಯ ಸಂಘ ಗುಂಪುಗಳಿಗೆ ೧೬೦ ರೂ. ನಷ್ಟು ಸಾಲ ನೀಡಲಾ ಗಿತ್ತು. ಅದು ಶೇ.೭೦ಕ್ಕೆ ಕುಸಿದಿತ್ತು. ಈಗ ಮತ್ತೆ ಸ್ತ್ರೀಶಕ್ತಿ ಗುಂಪುಗಳಿಗೆ ಸಾಲು ಸೌಲಭ್ಯ ಕಲ್ಪಿಸ ಲಾಗು ವುದು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಡಿಸಿಸಿ ಬ್ಯಾಂಕ್ ಶಾಖೆಗಳ ಮೂಲಕವೂ ಅವರ ಖಾತೆಗೆ ಹಣ ಜಮಾ ಮಾಡಲಾ ಗುವುದು. ಹಾಲು ಉತ್ಪಾದಕರ ಸಂಘಗಳಿಗೂ ಅಗತ್ಯ ಸಹಕಾರ ನೀಡಲಾಗುವುದು. ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಅವ್ಯವಹಾರ ಆಗಿದ್ದರೆ ತನಿಖೆ ಮಾಡಲಿ. ನಾನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಮೊದಲು ೩೨ ಕೋಟಿ ರೂ. ನಷ್ಟು ಲಾಭ ಇತ್ತು. ಎಂದು ಆರ್‌ಎಂಎಂ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾ ಧ್ಯಕ್ಷ ಷಡಕ್ಷರಿ, ಪ್ರಮುಖರಾದ ಪರಮೇಶ್, ದುಗ್ಗಪ್ಪಗೌಡ, ಶ್ರೀಪಾದ ಹೆಗಡೆ ನಿಸರಾಣಿ, ಸುಧೀರ್, ಜೆ.ಪಿ. ಯೋಗೇಶ್ ವ್ಯವ ಸ್ಥಾಪಕ ನಿರ್ದೇಶಕ ವಾಸುದೇವ್ ಇನ್ನಿತರರು ಉಪಸ್ಥಿತರಿದ್ದರು.