ಜಿಲ್ಲಾ ಸುದ್ದಿತಾಜಾ ಸುದ್ದಿ

ಅಧಿಕಾರಿಗಳು ಕುಂದು ಕೊರತೆ ಆಲಿಸಿ ಪರಿಹಾರ ನೀಡುವರು:ಡಿಸಿ

Share Below Link

ಹೂವಿನಹಡಗಲಿ: ಜನತಾ ದರ್ಶನ ವಿಶೇಷ ಹಾಗೂ ವಿಶಿಷ್ಠ ಕಾರ್ಯಕ್ರಮವಾಗಿದ್ದು ಜನರ ಕುಂದು ಕೊರತೆಗಳನ್ನ ಭಾಗವ ಹಿಸಿದ ಜಿ ಹಾಗೂ ತಾಲೂಕಿನ ಅಧಿಕಾರಿಗಳು ನಿಯಮಾನುಸಾರ ಪರಿಹಾರದೊಂದಿಗೆ ಸೂಕ್ತ ಸೌಲಭ್ಯ ಕಲ್ಪಸುವುದಾಗಿ ಡಿಸಿ ಎಂ.ಎಸ್ ದಿವಾಕರ ತಿಳಿಸಿದರು.
ಹೂವಿನ ಹಡಗಲಿ ತಾಲೂಕು ಆಡಳಿತದ ಸಹಯೋಗದೊಂದಿಗೆ ಪ್ರವಾಸಿ ಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಜನತಾದರ್ಶನ ಕಾರ್ಯಕ್ರಮವನ್ನು ಜಿಧಿಕಾರಿಗಳಾದ ಎಂ.ಎಸ್ ದಿವಾಕರ ಮಾನ್ಯ ಶಾಸಕರಾದ ಕೃಷ್ಣಾನಾಯಕ್ ಉದ್ಘಾಟಿಸಿದರು. ಇಲ್ಲಿ ನಿಮ್ಮ ಸಮಸ್ಯೆಗಳನ್ನ ಮುಕ್ತವಾಗಿ ಹೇಳಿ ಕೊಳ್ಳಲು ಸದಾವಕಾಶ. ಕಾರ್‍ಯ ಕ್ರಮದ ಸದ್ಬಳಕೆಗೆ ಸಾರ್ವಜನಿಕರು ಮದಾಗ ಬೇಕು.ಇಲಾಖಾವಾರು ಸುಮಾರು ೨೪ ಕೌಂಟರ್ ತೆರೆಯ ಲಾಗಿದ್ದು ನಿಮ್ಮ ದೂರನ್ನು ಅವರ ಲ್ಲಿ ಸಲ್ಲಿಸಿದಲ್ಲಿ ಪರಿಶೀಲಿಸಿ ಪರಿ ಹಾರ ನೀಡಲಾಗುವುದೆಂದರು.


ಕೃಷ್ಣಾನಾಯಕ್ ರವರು ಮಾತ ನಾಡುತ್ತ,ನಾನು ಈಗಾಗಲೇ ನ್ನ ಕ್ಷೇತ್ರದ ಬಹುತೇಕ ಹಳ್ಳಿಗಳಿಗೆ ಬೇಟಿ ನೀಡಿ ಸಮಸ್ಯೆಗಳನ್ನು ಆಲಿಸಿರುವೆ.ಆ ಕುರಿತು ಜಿಧಿಕಾರಿಗಳ ಗಮನಕ್ಕೆ ತರುವೆ.ನಮ್ಮ ತಾಲೂಕಿನ ಆಡಳಿತ ವ್ಯವಸ್ಥೆ ಸಮ ಸೆಗೆ ಸಿಬ್ಬಂದಿ ಕೊರತೆ ಕಾರಣ.ಈ ವಿಷಯ ಸರ್ಕಾರದ ಗಮನಕ್ಕೂ ತಂದಿರುವೆ. ಜಿಧಿಕಾರಿಗಳು ಸಿಬ್ಬಂದಿ ಅನುಕೂಲ ಕಲ್ಪಸುವಲ್ಲಿ ಸರ್ಕಾರದ ಗಮನಕ್ಕೆ ತರಲು ಆಶಿಸಿ ದರು.ಇದು ಜನರ ಕಾರ್ಯಕ್ರಮ ಇದರ ಸದುಪಯೋಗ ಪಡೆದು ಕೊಳ್ಳುವಂತೆ ಒತ್ತಾಯಿಸಿದರು.
ನೇರ ಅಹವಾಲುಗಳ ಸ್ವೀಕರಿ ಸುವ ಸಂದರ್ಭದಲ್ಲಿ ಪ್ರಥಮದಲ್ಲಿ ಮಾನಿಹಳ್ಳಿಯ ಅಂಗವಿಕಲೆ ರಾಜೇಶ್ವರಿಯಅಳಲು ಆಲಿಸಿದ ಜಿಧಿಕಾರಿಗಳು.೨೦೦೬ ರಿಂದ ನಿರಂತರವಾಗಿ ವಾಸಿಸಲು ಸೂರು ಕೋರಿ ಮನವಿ ಸಲ್ಲಿಸುತ್ತಾ ಬಂದರೂ ಪರಿಹಾ ಇಲ್ಲ.ಎಂದಾಗ ಜಿಧಿಕಾರಿಗಳು ಬಹು ಬೇಗ ಪರಿಹಾರ ಕಲ್ಪಿಸುವ ಭರವಸೆ ನೀಡಿ ಅನುಕಂಪ ಮೆರೆದರು. ಪಟ್ಟಣದ ಪ್ರತಿಷ್ಠಿತ ಸೊಪ್ಪಿನ ಕಾಳಮ್ಮ ಬಡಾ ವಣೆ ನಿವಾಸಿ ಕೊಟ್ರಯ್ಯನವರ ಅವೈಜನಿಕ ಚರಂಡಿ ವ್ಯವಸ್ಥೆ ,ಅದರಿಂದಾಗುವ ದುಷ್ಪರಿಣಾಮ ಗಳು ,ವಿಷ ಜಂತು ಹಾವುಗಳು ಮನೆ ಮಾಡಿರುವ ವಿಷಯ ಅಲ್ಲದೆ ಪುರಸಭೆಯ ಸಾರ್ವಜನಿಕ ಸೌಲ ಭ್ಯಕ್ಕಾಗಿ ಕೃಷಿ ಭೂಮಿಯಲ್ಲಿ ರಸ್ತೆ ನಿರ್ಮಾಣಕ್ಕೆ ನೀಡಿದ್ದು ಪರ್ಯಾ ಯವಾಗಿ ಪುರಸಭೆ ನಿವೇಶನ ೨೦೧೨ ರಲ್ಲಿ ಸಭಾನಡವಳಿಕೆಯ ನ್ವಯ ನೀಡಿದ್ದು ಇದುವರೆಗೂ ನಮ್ಮ ಹೆಸರಿಗೆ ದಾಖಲೆ ನೀಡದಿ ರುವ ಬಗ್ಗೆ ವಿಚಾರಿಸಲಾಗಿ ಶಾಸ ಕರು ಈಗಾಗಲೇ ಚರಂಡಿ ವ್ಯವಸ್ಥೆ ಬಗ್ಗೆ ಹಣ ಮಂಜೂರು ಸಹ ಆಗಿದೆ ಪರಿಹಾರ ಮಾಡುವ ಭರವಸೆ ನೀಡಿದರು.(೩ನೇ ಪುಟಕ್ಕೆ)