ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಜ್ಯ ಭೂಪಟದಲ್ಲಿ ದಾವಣಗೆರೆ ಹೆಸರು ಛಾಪು ಮೂಡಿಸಿದ ಸಚಿವ ಮಲ್ಲಿಕಾರ್ಜುನ್…

Share Below Link

ಹೊನ್ನಾಳಿ: ಕರ್ನಾಟಕದ ಭೂಪಟದಲ್ಲಿ ದಾವಣಗೆರೆಯ ಹೆಸರು ಛಾಪು ಮೂಡಲು ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಶಾಮನೂರು ಶಿವಶಂಕರಪ್ಪ ನವರು ಕಾರಣೀಭೂತ ರಾಗಿzರೆ ಎಂದು ಜಿ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಬಣ್ಣಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ೫೬ನೇ ಹುಟ್ಟುಹಬ್ಬದ ಪ್ರಯುಕ್ತ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಬ್ರೆಡ್ ವಿತರಿಸಿ ಮಾತನಾಡಿದ ಅವರು, ಆಕಸ್ಮಿಕ ವಾಗಿ ರಾಜಕೀಯಕ್ಕೆ ಧುಮುಕಿದ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಮ್ಮ ತಂದೆಯ ಜೊತೆಗೂಡಿ ದಾವಣಗೆರೆ ಜಿಯ ಸರ್ವಾಂಗೀಣ ಅಭಿವೃದ್ದಿಗಾಗಿ ಕಂಕಣ ಬದ್ಧರಾಗಿ ಕಾರ್ಯನಿರ್ವಹಿ ಸುತ್ತಾ ತಾವೊಂದು ವ್ಯಕ್ತಿಯಲ್ಲ ಶಕ್ತಿಯಾಗಿ ಜಿಯ ನೊಂದವರ ಆಸರೆಯಾಗಿ ಹೊರಹೊಮ್ಮಿzರೆ ಎಂದು ಗುಣಗಾನ ಮಾಡಿದರು.


ಈ ಹಿಂದೆಯೂ ಸಚಿವರಾಗಿ zಗ ರಾಜ್ಯದ ಕೃಷಿ ಮಾರುಕಟ್ಟೆ ಗಳಿಗೆ ಕಾಯಕಲ್ಪ, ದಾವಣಗೆರೆ ನಗರದ ಶಾಶ್ವತ ಕುಡಿಯುವ ನೀರಿನ ಯೋಜನೆ, ಏಷ್ಯಾದಲ್ಲಿಯೇ ಅತೀ ದೊಡ್ಡ ಗಾಜಿನ ಮನೆ, ಎಸ್. ಎಸ್.ಎಂ. ಅವರ ದೂರದೃಷ್ಟಿ ಯೋಜನೆಯಿಂದ ಕೊಳಚೆ ಪ್ರದೇಶವಾಗಿದ್ದ ಕುಂದುವಾಡದ ಕೆರೆಯನ್ನು ಜನರ ಸೇವೆಗಾಗಿ ಅಭಿವೃದ್ಧಿಪಡಿಸಿ ಅದಕ್ಕಾಗಿ ಸ್ವಂತ ಹಣವನ್ನೂ ಬಳಸಿ ಅವರು ಮಾಡಿದ ಸಾಧನೆಯನ್ನು ಜನತೆ ಇಂದಿಗೂ ಮರೆತಿಲ್ಲವೆಂದು ತಿಳಿಸಿದರು.
ಕೊರೋನಾ ಸಂದರ್ಭದಲ್ಲಿ ಕೋವಿಡ್ ಲಸಿಕೆಗಾಗಿ ತಮ್ಮ ಸ್ವಂತ ೭ ಕೋಟಿ ಹಣವನ್ನು ವಿನಿಯೋಗಿಸಿ ಜನರ ಸಂಕಷ್ಟಗಳಿಗೆ ಮಿಡಿದ ಮಾನವೀಯತೆಯ ಸಾಕಾರ ಮೂರ್ತಿ ಎಂದು ಅವರ ಕೊರೋನಾ ಸಂದರ್ಭದ ಸೇವೆಯನ್ನು ಶ್ಲಾಸಿದರು.
ಜಿಯ ಜನರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಕಲ್ಪಿಸುವ ಉದ್ದೇಶದಿಂದ ಅವರ ಹುಟ್ಟುಹಬ್ಬದ ಪ್ರಯುಕ್ತ ಬಾಪೂಜಿ ಸಂಸ್ಥೆಯ ಸಮೂಹ ಆಸ್ಪತ್ರೆಗಳಿಂದ ಬಾಪೂಜಿ ಆರೋಗ್ಯ ಕಾರ್ಡ್‌ನ ಮೂಲಕ ಆರೋಗ್ಯದ ಸೇವೆಯನ್ನೂ ಮಾಡುತ್ತಿದೆ. ತಮ್ಮ ಸಂಸ್ಥೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೂ ಶುಲ್ಕ ರಿಯಾಯಿತಿ ನೀಡಿ ಬಡ ವಿದ್ಯಾರ್ಥಿ ಗಳ ಶಿಕ್ಷಣಕ್ಕೂ ಆಸರೆಯಾಗಿzರೆ. ಕೋಟಿಗಟ್ಟಲೇ ಹಣ ಠೇವಣಿ ಯಿಟ್ಟು ಜನಕಲ್ಯಾಣ ಟ್ರಸ್ಟ್ ಮೂಲಕವು ಜಿಯ ಆರ್ಥಿಕ ಅಶಕ್ತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವ ಮೂಲಕ ತಮ್ಮ ಇಡೀ ಕುಟುಂಬವೇ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಾ ಎಡಗೈಯಲ್ಲಿ ಕೊಟ್ಟದ್ದು ಬಲಗೈಗೆ ಗೊತ್ತಾಗದ ಹಾಗೇ ಸಾಕಷ್ಟು ದಾನ- ಧರ್ಮಗಳನ್ನು ಮಾಡುತ್ತಾ ಬಂದಿರುವ ಅಪರೂಪದ ವ್ಯಕ್ತಿತ್ವವುಳ್ಳ ಸರಳ-ಸಜ್ಜನಿಕೆಯ ವ್ಯಕ್ತಿ ಸಚಿವ ಎಸ್.ಎಸ್.ಎಂ.ಅವರು ದೀರ್ಘಾಯುಷಿಗಳಾಗಿ ಜನಸೇವೆ ಮಾಡುವಂತಾಗಲಿ ಎಂದು ಅವರು ಶುಭ ಹಾರೈಸಿದರು.
ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ನಾಗಪ್ಪ ಅವರು ಮಾತನಾಡಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ವ್ಯಕ್ತಿತ್ವ ವನ್ನು ನೋಡಿ ಜನತೆ ಮತ್ತೊಮ್ಮೆ ಅವಕಾಶ ನೀಡಿದ್ದು ಅವರು ದಾವಣಗೆರೆ ಜಿದ್ಯಂತ ಸಂಚರಿಸಿ ಪಕ್ಷದ ಬಲವರ್ಧನೆ ಮಾಡುವುದರ ಕಡೆಗೆ ವಿಶೇಷ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಮಾಜಿ ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನ ಗೌಡ ಮಾತನಾಡಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ದಾವಣಗೆರೆಯಲ್ಲಿ ರಕ್ತ ನಿಽ ಸ್ಥಾಪಿಸಿ ಅವಶ್ಯಕತೆಯಿರುವವರಿಗೆ ಉಚಿತ ರಕ್ತದ ವ್ಯವಸ್ಥೆ ಮಾಡುತ್ತಾ ಕಿಡ್ನಿ ಸಮಸ್ಯೆಯಿರುವ ಬಡವರಿಗೆ ಉಚಿತ ಡಯಾಲಿಸಿಸ್ ಕೇಂದ್ರವನ್ನು ತೆರೆಯುವ ಮೂಲಕ ಮಾನವೀಯತೆ ಮೆರೆದಿzರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ರಾಜೇಂದ್ರ, ಮೈಲಪ್ಪ, ಮಾಜಿ ಸದಸ್ಯ ಎಚ್.ಬಿ.ಅಣ್ಣಪ್ಪ, ಸಿಂಗಟಗೆರೆ ಗ್ರಾಪಂ ಸದಸ್ಯ ಅಣ್ಣಪ್ಪ, ಕಾಂಗ್ರೆಸ್ ಮುಖಂಡರಾದ ಎಚ್.ಡಿ. ವಿಜೇಂದ್ರಪ್ಪ, ಕೆ.ಆರ್. ವಸಂತನಾಯ್ಕ್, ಬಿ.ಕೆ.ಮಾದಪ್ಪ, ಅರಕೆರೆ ಮಧುಗೌಡ, ಬಸವರಾಜ್ ಮಾರಜೋಗಿ, ಬಾಹುಬಲಿ, ಸ್ವರೂಪ್ ಬಣ್ಣಜ್ಜಿ, ಪದ್ಮಾನಾಯ್ಕ, ಮಂಜು ಬಂತಿ, ತೊಳಕಿ ಮಾದೇಶ, ಸಿದ್ದು, ರಘು ಕವಳಿ, ಗೋಪಾಲಪ್ಪ, ಮಶ್, ಮೇಘರಾಜ್, ರಾಮು ಮತ್ತಿತರರು ಉಪಸ್ಥಿತರಿದ್ದರು.