ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರಾಗಿ ಕಡಿದಾಳ್ ಗೋಪಾಲ್ ಪದಗ್ರಹಣ…

Share Below Link

ಶಿವಮೊಗ್ಗ: ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ಕಟ್ಟಿ ಬೆಳಿಸಿದ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸದೃಢ ವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಭೋಜೇಗೌಡ ಹೇಳಿದರು.
ಅವರು ಇಂದು ಶುಭಮಂಗಳ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ.ಕಡಿದಾಳ್ ಗೋಪಾಲ್ ರವರ ಪದಗ್ರಹಣ ಸಮಾರಂಭವನ್ನು ಅಡಿಕೆ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಸಾರಥ್ಯದಲ್ಲಿ ಪಕ್ಷ ಸದೃಢವಾಗಿದ್ದು, ಅನೇಕ ನಾಯಕರು ಪ್ರಾದೇಶಿಕ ಪಕ್ಷವನ್ನು ರಚಿಸಿದ್ದು, ಅವು ಈಗ ಉಳಿದಿಲ್ಲ. ಆದರೆ ಜೆಡಿಎಸ್ ಪಕ್ಷ ಮಾತ್ರ ಉಳಿದಿದೆ ಎಂದರು.
ಬದಲಾದ ಸಂದರ್ಭದಲ್ಲಿ ಬಿಜೆಪಿ ಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದು, ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಈ ಹೊಂದಾಣಿಕೆಗೆ ಪ್ರಯತ್ನಿಸಿಲ್ಲ. ಆದರೆ ಪಕ್ಷದ ಸಭೆಯಲ್ಲಿ ಪಕ್ಷದ ಎಲ್ಲಾ ನಾಯಕರ ತೀರ್ಮಾನದಂತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದ ಅವರು, ೧೯೮೪ರಿಂದಲೂ ರಾಜ್ಯದಲ್ಲಿ ಪಕ್ಷಾಂತರ ಪರ್ವ ನಡೆಯುತ್ತಿದೆ. ಈಗಿನದ್ದೇನು ಹೊಸದಲ್ಲ ಎಂದರು.
ಎರಡು ಬಾರಿ ಮುಖ್ಯಮಂತ್ರಿ ಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಯವರು ರೈತಾಪಿ, ಹಿಂದುಳಿದವರ, ಬಡವರ ಪರ ಕೆಲಸ ಮಾಡಿದ್ದು, ಈಗಲೂ ಸಹ ಅವರ ಆಡಳಿತವನ್ನು ಜನರು ಮೆಚ್ಚುತ್ತಿದ್ದಾರೆ ಎಂದರು.
ನೂತನ ಜೆಡಿಎಸ್ ಜಿಲ್ಲಾಧ್ಯಕ್ಷ ಡಾ| ಕಡಿದಾಳ್ ಗೋಪಾಲ್ ಅವರು ಮಾತನಾಡಿ, ತಮ್ಮ ಮೇಲೆ ಪಕ್ಷ ಗುರುತರ ಜವಾಬ್ದಾರಿ ನೀಡಿದೆ. ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದು, ಆರು ತಿಂಗಳಾದರೂ ಸಹ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ವಿಫಲವಾಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸದೆ ಬೇರೆ ಪಕ್ಷದ ಶಾಸಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವಲ್ಲಿ ಕಾಲಕಳೆಯುತ್ತಿದೆ ಎಂದರು.
ಪಕ್ಷ ಅಧಿಕಾರ ಇಲ್ಲದ ಸಂದರ್ಭ ದಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ಡಾ.ಕಡಿದಾಳ್ ಗೋಪಾಲ್‌ರವರು ಅಧಿಕಾರ ವಹಿಸಿಕೊಂಡಿದ್ದು, ಜಿಲ್ಲೆಯಲ್ಲಿ ಪಕ್ಷವನ್ನು ಪ್ರಬಲವಾಗಿ ಕಟ್ಟಲು ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗೂಡಿ ಪಕ್ಷವನ್ನು ಕಟ್ಟೋಣ ಎಂದರು.
ವೇದಿಕೆಯಲ್ಲಿ ಶಾಸಕಿ ಶಾರದಾ ಪೂರ್‍ಯನಾಯ್ಕ್, ಮುಖಂಡರಾದ ಶಾರದ ಅಪ್ಪಾಜಿಗೌಡ, ದಾದಾಪೀರ್, ರಾಕೇಶ್ ಡಿಸೋಜ, ಎಸ್.ಎಲ್. ನಿಖಿಲ್, ಪ್ರೇಮ್ ಕುಮಾರ್, ಕೆ.ಎನ್. ರಾಮಕೃಷ್ಣ, ದೀಪಕ್‌ಸಿಂಗ್ ಗೋವಿಂದಪ್ಪ, ಗೀತಾ ಸತೀಶ್, ಚಾಬೂಸಾಬ್, ಕಾಂತರಾಜ್, ಎಸ್.ಎನ್. ಮಹೇಶ್, ಸಿದ್ದಪ್ಪ, ಹೆಚ್.ಆರ್. ತ್ಯಾಗರಾಜ್, ಅಲ್ತಾಬ್, ಅಬ್ದುಲ್‌ವಾಜೀದ್, ಸತೀಶ್, ನಾಗೇಶ್, ನರಸಿಂಹ ಗಂಧದಮನೆ, ರಾಜರಾಮ್, ಲೋಕೇಶ್, ಮಧುಕುಮಾರ್, ವಿನಯ್, ಕರುಣಾಮೂರ್ತಿ ಇನ್ನಿತರರಿದ್ದರು.