ಜಿಲ್ಲಾ ಸುದ್ದಿತಾಜಾ ಸುದ್ದಿ

ವಿದ್ಯುತ್ ದರ ಹೆಚ್ಚಳ ಆದೇಶ ಹಿಂಪಡೆಯಲು ಆಗ್ರಹ…

Share Below Link

ಶಿವಮೊಗ್ಗ: ವಿದ್ಯುತ್ ದರ ಹೆಚ್ಚಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯ ಬೇಕು. ಕೈಗಾರಿಕೆಗಳಿಗೆ ಆಗುವ ತೊಂದರೆಯನ್ನು ತಪ್ಪಿಸುವಂತೆ ಸಿಎಂ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕೆಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಆಗ್ರಹಿಸಿದೆ.
೨೦೨೩ನೇ ಸಾಲಿನಲ್ಲಿ ಅವೈe ನಿಕವಾಗಿ ವಿದ್ಯುತ್ ದರ ಪರಿಷ್ಕರಿಸಿ ರುವುದಕ್ಕೆ ವಿರೋಧವಿದೆ. ವಿದ್ಯು ತ್ ದರ ಹೆಚ್ಚಳಕ್ಕೆ ರಾಜದ್ಯಂತ ಕೈಗಾರಿಕಾ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ದರ ಹೆಚ್ಚ ಳದಿಂದ ಕೈಗಾರಿಕೆಗಳಿಗೆ ಹಾಗೂ ಜನಸಾಮಾನ್ಯ ಗ್ರಾಹಕರಿಗೆ ಅತಿ ಯಾದ ಹೊರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಸಣ್ಣ ಮತ್ತು ಮಧ್ಯಮ ಕೈಗಾ ರಿಕಾ ವಲಯದ ಕೈಗಾರಿಕಾ ಘಟಕ ಗಳು ತುಂಬಾ ರೋಗಗ್ರಸ್ಥ ಘಟಕ ಗಳಾಗಿ ಅಭಿವೃದ್ಧಿ ಕುಂಠಿತವಾಗಿವೆ. ನಿರುದ್ಯೋಗ ಸಮಸ್ಯೆಯ ಉದ್ಭ ವಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಕೈಗಾರಿಕೆಗಳು ಹಣಕಾಸು ಸಂಸ್ಥೆ ಗಳಿಂದ, ಬ್ಯಾಂಕ್‌ಗಳಿಂದ ಸಾಲ ಪಡೆದು ಉದ್ಯಮವನ್ನು ನಡೆಸುತ್ತಿ ರುವವರಿಗೆ ಆರ್ಥಿಕತೆ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರಿ ಉದ್ಯಮವನ್ನು ಮುಚ್ಚುವ ಪರಿಸ್ಥಿತಿಗೆ ಬರಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ತಿಳಿಸಿzರೆ.
ಕೈಗಾರಿಕೋದ್ಯಮಿಗಳು ಮತ್ತು ಸಾಮಾನ್ಯ ಗೃಹೋಪ ಯೋಗಿ ಗ್ರಾಹಕರು ತಮ್ಮ ಅಸ್ಥಿತ್ವ ವನ್ನು ಉಸಿಕೊಳ್ಳಲು ಅನಿವಾ ರ್ಯವಾಗಿ ಪ್ರತಿಭಟನೆಗೆ ಇಳಿ ಯುವ ಪ್ರಸಂಗ ಬರಬಹುದು. ನಾಗರೀಕ ಸಂಘಟನೆಗಳು ಕೂಡ ದರ ಹೆಚ್ಚಳದ ವಿರುದ್ಧ ಧ್ವನಿ ಎತ್ತಿವೆ. ತೈಲಬೆಲೆಗಳು ಈಗಾಗಲೆ ಗಗನಕ್ಕೇ ರಿದ್ದು, ವಿದ್ಯುತ್ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮನವಿ ಪತ್ರದಲ್ಲಿ ಉಖಿಸಿzರೆ.
ವಿದ್ಯುತ್ ದರ ಹೆಚ್ಚಳ ಆದೇ ಶವು ಎ ವರ್ಗದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲಿದ್ದು, ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಕೈಗಾರಿ ಕೆಯ ಕಚ್ಛಾವಸ್ತುಗಳ ಬೆಲೆಯ ಮೇಲೆಯೂ ಕೂಡ ಪರಿಣಾಮ ಆಗಲಿದೆ. ಕೈಗಾರಿಕೆಗಳು ಮೂಲೆ ಗುಂಪಾಗುವುದರಲ್ಲಿ ಸಂಶಯವಿಲ್ಲ ಎಂದು ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಅಭಿಪ್ರಾಯಪಟ್ಟಿ zರೆ.
ಜನಸಾಮಾನ್ಯರ ಆರ್ಥಿಕ ಹೊರೆ ತಪ್ಪಿಸಲು, ರಾಜ್ಯದ ಅಭಿ ವೃದ್ಧಿಯಲ್ಲಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ನೆಲೆಯಲ್ಲಿ ವಿದ್ಯುತ್ ದರ ಪರಿಷ್ಕರಣೆಯ ಹೆಚ್ಚುವರಿ ಹೊರೆಯ ಆದೇಶವನ್ನು ಕೂಡಲೇ ವಾಪಾಸ್ಸು ಪಡೆಯು ವಂತೆ ಸಂಘವು ಸರ್ಕಾರವನ್ನು ಒತ್ತಾಯಿಸುತ್ತದೆ.