ಜಿಲ್ಲಾ ಸುದ್ದಿತಾಜಾ ಸುದ್ದಿ

ಡಿ.8: ಮಲೆನಾಡು ಮಠಾಧೀಶರರ ಪರಿಷತ್‌ನಿಂದ ಸಂಸದ ಬಿವೈಆರ್‌ರಿಗೆ ಅಭಿನಂದನೆ…

Share Below Link

ಶಿವಮೊಗ್ಗ, :ಮೂರು ಬಾರಿ ಸಂಸದರಾಗಿರುವ ಮತ್ತು ಜೀವನದ ೫೦ ವರ್ಷಗಳನ್ನು ಪೂರೈಸಿರುವ ಬಿ.ವೈ.ರಾಘವೇಂದ್ರ ಅವರಿಗೆ ಮಲೆನಾಡು ವೀರಶೈವ ಲಿಂಗಾಯಿತ ಮಠಾಧೀಶರರ ಪರಿಷತ್ತು ವತಿಯಿಂದ ಸಾರ್ಥಕ ಸುವರ್ಣ ಎಂಬ ಹೆಸರಲ್ಲಿ ಡಿ.೮ರಂದು ಸಂಜೆ ೫.೩೦ಕ್ಕೆ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಬೆಕ್ಕಿನ ಕಲ್ಮಠ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾ ಸ್ವಾಮಿಗಳು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೂಜ್ಯರು, ಬಿ.ವೈ. ರಾಘವೇಂದ್ರರವರ ಕೊಡುಗೆ ಜಿಲ್ಲೆಗೆ ಬಹಳಷ್ಟಿದೆ. ಅಭಿವೃದ್ಧಿಯ ಹರಿಕಾರ ಎಂದೇ ಜನಪ್ರಿಯರಾಗಿದ್ದಾರೆ. ಸಿಗಂದೂರು ಸೇತುವೆ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳು, ನೀರಾವರಿ, ವಿಮಾನ ನಿಲ್ದಾಣ ಹೀಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮಠಮಂದಿರಗಳಿಗೆ ಅನುದಾನ, ಸರ್ವ ಜನಾಂಗದವರ ಕಲ್ಯಾಣ ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ಕೊಡುಗೆ ನೀಡಿರುವ ಬಿ.ವೈ. ರಾಘವೇಂದ್ರರವರನ್ನು ಸನ್ಮಾನ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ತಮ್ಮ ಸಾನಿಧ್ಯದಲ್ಲಿ ಜರುಗುವ ಸಮಾರಂಭದಲ್ಲಿ ಹೊಂಬುಜ ಹುಂಚಾ ಜೈನಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿ, ಆದಿಚುಂಚನಗಿರಿ ಮಹಾಸಂಸ್ಥಾನದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಮಹಾಸ್ವಾಮೀಜಿ, ನಿಟ್ಟೂರು ಶ್ರೀ ನಾರಾಯಣಗುರು ಸಂಸ್ಥಾನದ ಶ್ರೀ ರೇಣುಕಾನಂದ ಮಹಾಸ್ವಾಮಿ ಅವರು ಪಾಲ್ಗೊಂಡು ಆಶೀರ್ವಾದ ನೀಡಲಿದ್ದಾರೆ ಎಂದರು.
ಶರಣ ಸಾಹಿತ್ಯ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಡಾ. ಸೋಮ ಶೇಖರ್ ಉಪನ್ಯಾಸ ನೀಡಲಿದ್ದಾರೆ. ರಾಯಚೂರಿನ ಹಿಂದೂಸ್ತಾನಿ ಗಾಯಕ ಪಂಡಿತ್ ಅಂಬಯ್ಯನುಲಿ ಅವರಿಂದ ವಚನ ಸಂಗೀತವಿದೆ ಎಂದರು.
ಆನಂದಪುರಂ ಮಠದಲ್ಲಿ ಶರಣ ಸಾಹಿತ್ಯ ಸಮ್ಮೇಳನ : ಡಿ.೧೨ರಂದು ಆನಂದ ಪುರಂನ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಮಹಾಸಂಸ್ಥಾನ ಮಠ ದಲ್ಲಿ ಶರಣ ಸಾಹಿತ್ಯ ಸಮ್ಮೇಳನ ಮತ್ತು ಭಾವೈಕ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಅಂದು ಬೆಳಿಗ್ಗೆ ೯.೩೦ಕ್ಕೆ ಶರಣ ಸಾಹಿತ್ಯದ ೫೭೩ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಆರೋಗ್ಯ ಶಿಬಿರ ನಡೆಯಲಿದೆ. ೧೦ಕ್ಕೆ ಶರಣ ಸಾಹಿತ್ಯ ಸಮ್ಮೇಳನವನ್ನು ಗೋಣಿಬೀಡಿನ ಶೀಲಸಂಪಾದನ ಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು ಉದ್ಘಾಟಿಸುವರು. ಹಲವು ಸ್ವಾಮೀಜಿಗಳು ಇದರಲ್ಲಿ ಭಾಗವಹಿಸುವರು. ಅಂದು ಸಂಜೆ ೪.೩೦ಕ್ಕೆ ಭಾವೈಕ್ಯ ಸಮ್ಮೇಳನ ನಡೆಯಲಿದೆ. ಹುಂಚಾ ಜೈನ ಮಠದ ಶ್ರೀಗಳ ಸಮ್ಮುಖದಲ್ಲಿ ಬಸವಕೇಂದ್ರದ ಡಾ. ಬಸವ ಮರುಳ ಸಿದ್ಧ ಮಹಾ ಸ್ವಾಮಿಗಳು ಉಪನ್ಯಾಸ ನೀಡುವರು. ಸಚಿವ ಮಧುಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು ಎಂದು ವಿವರಣೆ ನೀಡಿದರು.
ಇದೇ ಸಂದರ್ಭದಲ್ಲಿ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಪದ್ಮಶ್ರೀ ಮಂಜಮ್ಮಜೋಗತಿಗೆ ನೀಡಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಶಾಸಕರುಗಳು, ವಿವಿಧ ಮುಖಂಡರು ಭಾಗವಹಿಸುವರು. ಕಾಗೋಡು ತಿಮ್ಮಪ್ಪ ಹಾಗೂ ನಟ ದೊಡ್ಡಣ್ಣರವರನ್ನು ಸನ್ಮಾನಿಸಲಾಗು ವುದು. ಹಾಗೂ ಹಲವರಿಗೆ ಸಮಾಜ ಸೇವಾ ರತ್ನಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಜಡೆಶ್ರೀಗಳಾದ ಮಹಂತಸ್ವಾಮಿ, ಬಿಳಕಿ ಶ್ರೀಗಳಾದ ರಾಚೋಟೇಶ್ವರ ಸ್ವಾಮಿ, ತೊಗರ್ಸಿಯ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ ಹಾಗೂ ಸಮಾಜದ ಮುಖಂಡರುಗಳಾದ ಡಾ. ಧನಂಜಯ ಸರ್ಜಿ, ಜ್ಯೋತಿಪ್ರಕಾಶ್, ಮಹೇಶ್ ಮೂರ್ತಿ ಸಿ. ಶಾಂತ ವೀರಪ್ಪ, ರುದ್ರೇಶ್, ಇ. ವಿಶ್ವಾಸ್ ಮೊದಲಾದವರು ಇದ್ದರು.