ಯುಪಿಎಸ್ಸಿ ಪರೀಕ್ಷೆ ಸಿದ್ಧತೆಗೆ ಅಭ್ಯರ್ಥಿಗಳಲ್ಲಿ ನಿಖರವಾದ ಗುರಿ ಇರಬೇಕು…
ಶಿವಮೊಗ್ಗ: ಯುಪಿಎಸ್ಸಿ ಪರೀಕ್ಷೆಗೆ ಸಿದ್ಧಗೊಳ್ಳುವ ಅಭ್ಯರ್ಥಿ ಗಳಲ್ಲಿ ನಿಖರವಾದ ಗುರಿ ಇರಬೇ ಕು ಮತ್ತು ಸುತ್ತಲಿನ ಜೊತೆಗಾರ ರನ್ನು ಮೊದಲು ನಮ್ಮ ಸಾಧನೆಗೆ ಪೂರಕವಾಗಿ ನೋಡಿಕೊಳ್ಳಬೇಕು. ಇಲ್ಲವಾದರೆ ಗುರಿ ತಲುಪಲು ಕಷ್ಟ ವಾಗುತ್ತದೆ ಎಂದು ಜಿಧಿಕಾರಿ ಡಾ. ಆರ್. ಸೆಲ್ವಮಣಿ ಹೇಳಿzರೆ.
![](https://i0.wp.com/hosanavika.com/wp-content/uploads/2023/10/00-mca-644-1-copy-1.gif?resize=800%2C988&ssl=1)
ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಮಹಾನಗರ ಪಾಲಿಕೆಯ eನ ದಸರಾ ಅಂಗವಾಗಿ ಪದವಿ ವಿದ್ಯಾ ರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸಮನ್ವಯ ಟ್ರಸ್ಟ್ ಶಿವ ಮೊಗ್ಗ ವತಿಯಿಂದ ಸಂಯೋಜಿ ಸಲ್ಪಟ್ಟ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಿಂತ ಸಾಂಸ್ಕೃ ತಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುತ್ತಿzರೆ. ಬೇರೆ ರಾಜ್ಯ ಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿವಿಧ ಸಂಘ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಪೂರ್ವಸಿದ್ಧತೆ ಬಗ್ಗೆ ತರಬೇತಿ ನೀಡುತ್ತವೆ. ಪಾಲಿ ಕೆಯ ಈ ಕಾರ್ಯಕ್ರಮ ಅತ್ಯ ಮೂಲ್ಯವಾಗಿದೆ. ಇದರ ಸದುಪ ಯೋಗಪಡಿಸಿಕೊಳ್ಳಿ ಎಂದರು.
ಪದವಿ ಮುಗಿದ ತಕ್ಷಣ ಕೆಲಸಕ್ಕೆ ಸೇರಲಿ ಎಂಬ ಅಭಿಪ್ರಾಯವನ್ನು ಕುಟುಂಬಸ್ಥರು ಮತ್ತು ನೆರೆಹೊರೆ ಯವರು ವ್ಯಕ್ತಪಡಿಸುತ್ತಾರೆ ಆದರೆ ನಿಮಗೆ ನಿರ್ದಿಷ್ಟ ಉನ್ನತ ಶಿಕ್ಷಣದ ಗುರಿ ಇದ್ದರೆ ನೀವು ಯಾವುದೇ ಕೋಚಿಂಗ್ ಸೆಂಟರ್ಗೆ ಹೋಗದೆ ಸಂಬಂಧಪಟ್ಟ ಪುಸ್ತಕಗಳನ್ನು ನಿರಂತರ ಓದುವುದರ ಮೂಲಕ ಯಶಸ್ಸು ಗಳಿಸಬಹುದು. ಪರೀಕ್ಷೆ ಬಂದಾಗ ಮಾತ್ರ ಪುಸ್ತಕ ಓದುವು ದಲ್ಲ. ನಾವು ಯಾವ ಉದ್ದೇಶ ಇಟ್ಟುಕೊಂಡಿದ್ದೇವೆ ಮತ್ತು ಏನಾ ಗಬೇಕೆಂದು ತಿರ್ಮಾನ ಮಾಡಿದ್ದೇ ವೆ ಆ ವಿಷಯದ ಬಗ್ಗೆ ಹೆಚ್ಚಿನ ಓದುವಿಕೆ ಅವಶ್ಯವಿದೆ ಎಂದರು.
ಸಾಮೂಹಿಕ ಅಧ್ಯಯನಕ್ಕಿಂತ ನಮಗೆ ಪೂರಕ ವಾತಾವರಣ ಇರುವ ಕೆಲವೇ ಸ್ನೇಹಿತರ ಜೊತೆ ವಿಚಾರ ವಿನಿಮಯ ಮಾಡಿಕೊಂ ಡು ಓದುವುದು ಸೂಕ್ತ ಎಂಬುದು ನನ್ನ ಭಾವನೆ. ಸುತ್ತಲಿನ ಗೆಳೆಯರ ವಿಭಿನ್ನ ಅಭಿಪ್ರಾಯಗಳು ಕೂಡ ಕೆಲವೊಮ್ಮೆ ನಮ್ಮ ಉದ್ದೇಶಕ್ಕೆ ಅಡ್ಡಿ ಬರುವ ಸಾಧ್ಯತೆ ಇರುತ್ತದೆ. ಮೊದ ಲು ನಮ್ಮ ಮುಂದಿನ ಜೀವನದ ಬಗ್ಗೆ ಸೂಕ್ತ ಯೋಜನೆಗಳನ್ನು ಮಾಡಿ ಅದಕ್ಕೆ ಬೇಕಾದ ಯೋಚನೆ ಗಳನ್ನು ಮಾಡಬೇಕು ಎಂದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಹು zಗಳು ಮತ್ತು ವಿವಿಧ ಕೋರ್ಸ್ ಗಳು, ಗೌರವ ಧನದ ಬಗ್ಗೆ ಮಾ ಹಿತಿ ಪಡೆದುಕೊಳ್ಳಬೇಕು ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ನವರಾತ್ರಿಯ ಶಾರದಾ ಪೂಜೆ ದಿನದಂದೇ eನ ದಸರಾ ಹಮ್ಮಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ತರಬೇತಿ ನೀಡುವ ವಿಶೇಷ ಆಲೋಚನೆ ಯನ್ನು ಸಮನ್ವಯ ಟ್ರಸ್ಟ್ ಸಹ ಯೋಗದಲ್ಲಿ ಈ ಬಾರಿ ಹಮ್ಮಿಕೊಂ ಡಿದ್ದೇವೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಳ್ಳೆಯ ನಾಯಕರು, ಅಧಿಕಾರಿಗಳು. ಒಳ್ಳೆಯ ಪ್ರಜೆಗ ಳಾಗಿ ದೇಶ ಕಟ್ಟುವಲ್ಲಿ ಕಾರ್ಯೋ ನ್ಮುಖರಾಗೋಣ. ಈ ನಿಟ್ಟಿನಲ್ಲಿ ಈ ಕಾರ್ಯಾಗಾರ ಸಹಕಾರಿಯಾ ಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಮೇಯರ್ ಎಸ್. ಶಿವಕುಮಾರ್, ಉಪಮೇ ಯರ್ ಲಕ್ಷ್ಮಿ ಶಂಕರ ನಾಯಕ್, ಕಲಾದಸರಾ ಸಮಿತಿ ಅಧ್ಯಕ್ಷೆ ಸುರೇಖಾ ಮುರುಳೀಧರ್, ಪಾಲಿಕೆ ಸದಸ್ಯರಾದ ಮಂಜು ನಾಥ್, ಆರತಿ ಆ.ಮಾ. ಪ್ರಕಾಶ್, ಸುವರ್ಣಾ ಶಂಕರ್, ಭಾನುಮತಿ ವಿನೋದ್ಕುಮಾರ್, ಜಿ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಸಂಪ ನ್ಮೂಲ ವ್ಯಕ್ತಿಗಳಾಗಿ ಪ್ರಶಾಂತ್ ಎಸ್., ಅಕ್ಷರ ದಾಮ್ಲೆ, ಸಯ್ಯದ್ ಸಾದತ್, ಬಾಬು ಸಂದೀಪ್, ಶಿವ ಮೊಗ್ಗ ಡಿಸಿಎಫ್ ಶಿವಶಂಕರ್ ಇ. ಪಾಲ್ಗೊಂಡಿದ್ದರು.
![](https://i0.wp.com/hosanavika.com/wp-content/uploads/2023/10/DASARA-20-copy.gif?resize=401%2C1024&ssl=1)
![](https://i0.wp.com/hosanavika.com/wp-content/uploads/2023/10/SALE.gif?resize=655%2C1024&ssl=1)