ಜಿಲ್ಲಾ ಸುದ್ದಿಲೇಖನಗಳು

ಏ.11: ಹೊಸೂಡಿಯ ಶ್ರೀ ವೀರಭದ್ರಸ್ವಾಮಿಯ ಕೆಂಡಾರ್ಚನಾ ಮಹೋತ್ಸವ…

Share Below Link

ಕೌಟುಂಬಿಕ ಸಮಸ್ಯೆ, ಮಕ್ಕಳಲ್ಲಿ ಬುದ್ದಿ ಮಾಂದ್ಯತೆ ಇದ್ದರೆ, ಕೃಷಿ ಭೂಮಿಯಲ್ಲಿ ಏನಾದರೂ ತೊಂದರೆ ತೊಡಕುಗಳುಂಟಾದರೆ, ಮದುವೆ ವಯಸ್ಸು ಬಂದರೂ ಕಂಕಣ ಬಲ ಬಾರದಿದ್ದರೆ, ಕುಡಿಯುವ ನೀರಿನ ಬಾವಿ ತೋಡಿಸುವುದ್ದಿದ್ದರೆ, ಎದರೂ ಬೋರ್‌ವೆಲ್ ಪಾಯಿಂಟ್ ಹಾಕಿಸುವುದಿದ್ದರೆ, ಮಕ್ಕಳಿಗೆ ಅನಾರೋಗ್ಯ, ನೌಕರಿ ವಿಳಂಬತೆ ಕಾಡುತ್ತಿದ್ದರೆ ಹೀಗೆ ಕುಟುಂಬದ ಹತ್ತು ಹಲವಾರು ಸಮಸ್ಯೆಗಳಿಗೆ ವಿಶೇಷವಾಗಿ ಗುರುತಪ್ಪಣೆ ಖಟ್ಲೆ-ಕರಾರುಗಳ ಮೂಲಕ ಪರಿಹಾರ ಪಡೆದುಕೊಳ್ಳುವ ಶಕ್ತಿ ಕೇಂದ್ರ ಇದಾಗಿದೆ.
ಮೊದಲು ಈ ದೇವಸ್ಥಾನ ಹಳೆ ಕೈ ಹಂಚಿನ ಮೇಲ್ಚಾವಣಿ ಹೊಂದಿದ್ದು ಗರ್ಭ ಗುಡಿಯಲ್ಲಿ ಒಂದು ಭಿನ್ನವಾದ ಶ್ರೀ ವೀರಭದ್ರನ ಶಿಲಾ ವಿಗ್ರಹವಿತ್ತು. ಈಗ ಸದ್ಭಕ್ತರ, ದಾನಿಗಳ ಸಹಕಾರದಿಂದ ಕಣ್ಮನ ಸೆಳೆಯುವ ಕರ್ನಾಟಕದ್ದೇ ಆದ ಅಪರೂಪದ ವೇಸರ ಶೈಲಿಯ ಶಿಖರವನ್ನು ಹೊಂದಿದ ಶಿಲಾಮಯ ದೇವಾಲಯ ತಲೆ ಎತ್ತಿ ನಿಂತಿದೆ.
ದೇವಸ್ಥಾನದ ಪ್ರಾಕಾರದಲ್ಲಿ ಈಗ ಭಕ್ತರ ದೇಣಿಗೆಯೊಂದಿಗೆ ೨೭ ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಗುಡಿ, ೪ಲಕ್ಷ ರೂ.ವೆಚ್ಚದಲ್ಲಿ ನಾಗರ ಕಟ್ಟೆ, ೬ ಲಕ್ಷ ರೂ.ವೆಚ್ಚದಲ್ಲಿ ಗರುಡ ಗಂಬ ಸ್ಥಾಪನೆ ಕಾರ್ಯಗಳು ಭರದಿಂದ ಸಾಗುತ್ತಿವೆ. ದಾನಿಗಳು ಹೊಸೂಡಿ ಕೆನರಾ ಬ್ಯಾಂಕ್ ಶಾಖೆಯ ಎಸ್.ಬಿ.ಖಾತೆ ಸಂಖ್ಯೆ ೩೭೯೫೧೦೧೦೦೦೦೦೧ರ ಮೂಲಕವೂ ಉದಾರ ದೇಣಿಗೆ ನೀಡಬಹುದಾಗಿದೆ ಎಂದು ದೇವಸ್ಥಾನದ ಸೇವಾ ಸಮಿತಿ ವಿನಂತಿಸುತ್ತಿದೆ.
ಸಾಹಿತ್ಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅತೀವ ಆಸಕ್ತಿ-ಶ್ರದ್ಧೆ ಹೊಂದಿದ್ದ ಹೊಸೂಡಿ ವೆಂಕಟಶಾಸ್ತ್ರಿಗಳು ಭಿನ್ನವಾದ ಮೂರ್ತಿಯನ್ನು ಬದಲಾಯಿಸಿ ಅಲ್ಲಿ ನೂತನ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದರು. ಆ ಪ್ರಕಾರ ಅಂದಿನ ಪ್ರಸಿದ್ಧ ಶಿಲ್ಪಕಾರರಾಗಿದ್ದ ಕಾರ್ಕಳ ಗೋಪಾಲಕೃಷ್ಣ ಶೆಣೈ ಅವರಿಂದ ಹೊಸ ಮೂರ್ತಿ ಕೆತ್ತಿಸಿ ಸ್ಥಳೀಯರ ಹಾಗೂ ಸುತ್ತಮುತ್ತಲಿನ ಸದ್ಭಕ್ತರ ಸಹಕಾರದೊಂದಿಗೆ ಆ ಮೂರ್ತಿ ಪ್ರತಿಷ್ಠಾಪಿಸಲಾಗಿದೆ
ದೇವಸ್ಥಾನದಲ್ಲಿ ಹಾಲಿ ಇರುವ ಮೂರ್ತಿ ಅದೇ ಆಗಿದ್ದು ಕಪ್ಪು ಶಿಲೆಯಿಂದ ಮಾಡಿದ ಮೂರ್ತಿ ಅತ್ಯಂತ ಮನಮೋಹಕವಾಗಿದೆ. ಸಾಗರದ ವರದಹಳ್ಳಿಯ ಭಗವಾನ್ ಶ್ರೀ ಶ್ರೀಧರಸ್ವಾಮಿಗಳು ಹಿಂದಿನ ಅಷ್ಟಗ್ರಹಯೋಗದ ಸಂದರ್ಭದಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡಿ ಆಧ್ಯಾತ್ಮದ ಸಿಂಚನ ನೀಡಿzರೆ. ಶ್ರೀ ಸ್ವಾಮಿಯ ಉಗ್ರತೆಯನ್ನು ಹೋಗಲಾಡಿಸಿ ಸೌಮ್ಯ ರೂಪವನ್ನು ನೀಡಿzರೆ ಎಂಬುದು ಸ್ಥಳೀಯರ ಮಾಹಿತಿಯಾಗಿದೆ.
ಶಿವಮೊಗ್ಗ ಜಿಯ ಭಕ್ತರಷ್ಟೇ ಅಲ್ಲದೆ ನೆರೆಯ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ದೂರದ ಬೆಂಗಳೂರು ಜಿಯ ಹಲವರು ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ. ಪ್ರತಿ ವರ್ಷ ಮಾರ್ಚದಲ್ಲಿ ಶ್ರೀ ದೇವರಿಗೆ ಶತ ರುದ್ರಾಭಿಶೇಕ, ಚೈತ್ರ ಬಹುಳ ಎರಡನೆ ಮಂಗಳವಾರ ಕೆಂಡಾರ್ಚನೆ, ದಸರಾ ವಿಜಯೋತ್ಸವ, ಪಲ್ಲಕ್ಕಿ ಉತ್ಸವ ಹೀಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಅನೂಚಾನವಾಗಿ ನಡೆದುಕೊಂಡುಬರುತ್ತಿದೆ. ಯಾವುದೇ ಜತಿ, ಧರ್ಮ, ಮತ, ಪಂಥಗಳ ಬೇಧ- ಭಾವವಿಲ್ಲದೆ ಎಲ್ಲ ಸಮುದಾಯದವರೂ ಈ ದೇವರಿಗೆ ನಡೆದುಕೊಳ್ಳುತ್ತಾರೆ. ಹೊತ್ತ ಹರಕೆ ತೀರಿಸುತ್ತಾರೆ.
ಈ ದೇವಸ್ಥಾನದ ವಿಶೇಷತೆಯೆಂದರೆ ಗುರುತಪ್ಪಣೆ ಕೊಡಿಸುವುದು. ಅಂದರೆ ಸಮಸ್ಯೆ ಇದ್ದವರು ದೇವಸ್ಥಾನಕ್ಕೆ ಬರಬೇಕು. ವಿಷಯದ ಬೇಕು- ಬೇಡಗಳ ಕುರಿತು ಒಂದು ಚೀಟಿಯಲ್ಲಿ ಬರೆದು ಯಾರಿಗೂ ಗೊತ್ತಾಗದ ಹಾಗೆ ಅವನ್ನು ಬೇರೆ ಬೇರೆ ಜಗದಲ್ಲಿ ಇಡುತ್ತಾರೆ. ಕೆಲವೊಂದು ಧಾರ್ಮಿಕ ಪ್ರಕ್ರಿಯೆ ನಡೆದ ನಂತರ ಪಲ್ಲಕ್ಕಿಯಿಂದ ಅಪ್ಪಣೆ ಕೊಡಿಸುತ್ತಾರೆ. ಪಲ್ಲಕ್ಕಿ ಹೊರುವವರಿಗೆ ಚೀಟಿ ಯಾವ ಜಗದಲ್ಲಿದೆ ಎಂದು ತಿಳಿದಿರುವುದಿಲ್ಲ. ಆದರೆ ಪಲ್ಲಕ್ಕಿ ತನ್ನನ್ನು ಹೊತ್ತವರೊಂದಿಗೆ ಚೀಟಿ ಇದ್ದಲ್ಲಿಗೇ ಹೋಗಿ ತೋರಿಸುತ್ತದೆ. ಆ ಚೀಟಿಯಲ್ಲಿ ಏನು ಬರೆದಿರುತ್ತೋ ಅದೇ ಸಮಸ್ಯೆಗೆ ಉತ್ತರವಾಗುತ್ತದೆ. ಯಂತ್ರ- ಮಂತ್ರ ಕಟ್ಟಿಸುವ ಪರಿಪಾಠವೂ ಇಲ್ಲಿದೆ.
ಹಿರಿಯರಾದ ದಿ.ಶಂಕರನಾರಾಯಣ ಭಟ್ಟರು ಇದನ್ನು ನಡೆಸಿಕೊಡ್ಡುತ್ತಿದ್ದರು. ಈಗ ಸಮಿತಿಯ ಸದಸ್ಯರೇ ಈ ಕಾರ್ಯವನ್ನು ನಡೆಸಿಕೊಂಡು ಬರುತ್ತಿzರೆ. ಇದೆಲ್ಲ ನಂಬಿಕೆ ಮೇಲೆ ಅವಲಂಬಿತವಾಗಿದೆ ಎಂಬುದು ಅಲ್ಲಿಗೆ ಬಂದು ಪರಿಹಾರ ಕಂಡುಕೊಂಡ ಹಲವರ ಅಭಿಪ್ರಾಯ.
ಈ ದೇವಸ್ಥಾನದ ಪೂಜೆ ಕೈಂಕರ್ಯಗಳಿಗಾಗಿ ಹೊಸೂಡಿ ವೆಂಕಟಶಾಸ್ತ್ರಿಗಳು ದೇವಸ್ಥಾನಕ್ಕೆಂದೇ ಸುಮಾರು ೦೪ ಎಕರೆ ಮುಕ್ಕಾಲು ಗುಂಟೆ ಜಮೀನನ್ನು ಬಿಟ್ಟುಕೊಟ್ಟಿzರೆ. ಪೂಜೆ ಮಾಡುವ ಅರ್ಚಕರು ಆ ಜಮೀನಿನ ವಹಿವಾಟು ಮಾಡಿ ಅದರಿಂದ ಬಂದ ಆದಾಯದಲ್ಲಿ ದೇವಸ್ಥಾನದ ಖರ್ಚು-ವೆಚ್ಚ ಭರಿಸಬೇಕು ಎಂಬ ನಿಯಮವಿದೆಯಂತೆ.
ಅಲ್ಲದೆ ಈಗಿರುವ ದೇವಸ್ಥಾನಕ್ಕೆ ಹೊಂದಿದಂತೆ ಎರಡು ಎಕರೆ ಒಂದು ಗುಂಟೆ ಜಗವನ್ನು ವೆಂಕಟಶಾಸ್ತ್ರಿಯವರ ಪುತ್ರ ದತ್ತಾತ್ರೇಯ ಶಾಸ್ತ್ರಿ ಎಂಬುವವರು ದಾನ ಪತ್ರದ ಮೂಲಕ ದೇವಸ್ಥಾನಕ್ಕೆ ಬಿಟ್ಟುಕೊಟ್ಟಿzರೆ. ದೇವಸ್ಥಾನದ ನಂದಾದೀಪ ಸದಾ ಕಾಲ ಬೆಳಗುತ್ತಿರಬೇಕು ಎಂಬುದು ಅವರ ಆಶಯವಾಗಿತ್ತಂತೆ. ಹೊಸೂಡಿ ಪಂಚಾಯತಿ ಇರುವ ಭೂಮಿಯೂ ವೆಂಕಟಶಾಸ್ತ್ರಿಯವರ ಮನೆತನದವರು ದೇವಸ್ಥಾನಕ್ಕೆ ಬಿಟ್ಟುಕೊಟ್ಟಜಗವೇ ಆಗಿದೆ.
ಹೊಸೂಡಿ ಈ ಮೊದಲು ಪ್ರಸಿದ್ಧ ಜೈನ ಕೇಂದ್ರವಾಗಿತ್ತು. ಈ ಗ್ರಾಮದಲ್ಲಿ ಕಂಡು ಬರುವ ಜೈನರ ಶಾಸನೋಕ್ತ ವೀರಗಲ್ಲುಗಳು, ನಿಷಧಿಗಲ್ಲುಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಆದರೆ ಕಾಲಾನಂತರದಲ್ಲಿ ಶೈವ ಧರ್ಮ ಪ್ರವರ್ಧಮಾನಕ್ಕೆ ಬಂದಂತಿದೆ. ದೇವಸ್ಥಾನದ ಸೇವಾ ಸಮಿತಿಯು ಎಲ್ಲರ ಸಹಕಾರದೊಂದಿಗೆ ಉಸ್ತುವಾರಿ ನೊಗವನ್ನು ಹೊತ್ತು ಕೆಲಸ ಮಾಡುತ್ತಿದೆ. ಉತ್ಸವದ ದಿನ ಮಧ್ಯಾಹ್ನ ಬಂದ ಭಕ್ತಾದಿಗಳಿಗೆ ಮಧ್ಯಾಹ್ನದ ಪ್ರಸಾದ ವಿನಿಯೋಗವೂ ಇರುತ್ತದೆ.
ಶಿವಮೊಗ್ಗದಿಂದ ಹೊಸೂಡಿಗೆ ನಿತ್ಯ ಬೆಳಿಗ್ಗೆ ೭-೧೫ರಿಂದ ರಾತ್ರಿ ೯ರವರೆಗೆ ನಿರಂತರ ಸರಕಾರಿ ಬಸ್ಸಿನ ಸಂಚಾರವಿದೆ. ಖಾಸಗಿ ಆಟೊ ರಿಕ್ಷಾ ಸೌಲಭ್ಯಗಳೂ ಇವೆ. ಒಟ್ಟಿನಲ್ಲಿ ಶ್ರೀ ವೀರಭದ್ರಸ್ವಾಮಿ ದೇವಸ್ಥಾನವು ಆಸ್ತಿಕರಿಗೆ ತುಂಬಾ ಕಾರ್ಣಿಕ ಶಕ್ತಿ ಹೊಂದಿರುವ ಸ್ಥಳವೂ ಹಾಗೂ ಇಷ್ಟಾರ್ಥ ಸಿದ್ಧಿಸುವ ಸ್ಥಳವೂ ಆಗಿದೆ ಎಂಬುದು ಹಲವು ಭಕ್ತರ ಅಭಿಪ್ರಾಯವಾಗಿದೆ.
ವಿಶೇಷ ಲೇಖನ:
ಡಾ.ಬಾಲಕೃಷ್ಣ ಹೆಗಡೆ,
ಇತಿಹಾಸ ಪ್ರಾಧ್ಯಾಪಕರು,
ಕಮಲಾ ನೆಹರು ಮಹಿಳಾ ಕಾಲೇಜು, ಶಿವಮೆಗ್ಗ
ಮೊ.೯೪೪೮೧೮೧೪೯೨