ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶ್ರೀ ಮಡಿವಾಳ ಮಾಚಿದೇವರು ಅರಿವೇ ಗುರು ಎಂಬುದಕ್ಕೆ ನಿದರ್ಶನವಾಗಿದ್ದಾರೆ: ಶಾಸಕ ಚನ್ನಬಸಪ್ಪ

Share Below Link

ಶಿವಮೊಗ್ಗ : ಅರಿವು ಇದ್ದರೆ ಗುರು ಆಗಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ ಶ್ರೀ ಮಡಿವಾಳ ಮಾಚಿದೇವರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಡಳಿತ, ಜಿ.ಪಂ, ನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿ ಮಡಿವಾಳ ಸಮಾಜ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
೧೨ನೇ ಶತಮಾನದಲ್ಲಿ ಜತಿ ಪದ್ದತಿ, ಅಸಮಾನತೆ ಪೆಡಂಭೂತ ದಂತೆ ಇತ್ತು. ದಾರ್ಶನಿಕರ, ಶರಣರ ಹೋರಾಟ ಪ್ರತಿಭಟನೆಯಿಂದ, ಆ ಧ್ವನಿಯಿಂದಾಗಿ ಇಂದು ನಾವು ನೆಮ್ಮದಿಯಿಂದ ಇದ್ದೇವೆ. ಒಬ್ಬ ವ್ಯಕ್ತಿಯ ಸನ್ನಡತೆ, ಉತ್ತಮ ವ್ಯಕ್ತಿತ್ವ ದಿಂದ ಮಾನ್ಯನಾಗುತ್ತಾನೆ. ಮಾಚಿದೇವರ ಸನ್ನಡತೆಯಿಂದ ಬಿಜ್ಜಳ ಮಹಾರಾಜರೇ ಸ್ವತಃ ಅವರ ಮನೆಗೆ ಬರುತ್ತಾರೆ. ಎಷ್ಟೇ ಕಷ್ಟವಾದರೂ ನುಡಿದಂತೆ ನಡೆದ ಶ್ರೇಷ್ಠ ಪರಂಪರೆ ಮಾಚಿದೇವರದು. ಅಕ್ಕಮಹಾದೇವಿಯವರು ಸಹ ಮಾಚಿದೇವರನ್ನು ತಮ್ಮ ತಂದೆ ಎನ್ನುತ್ತಾರೆ. ಇದು ನಮ್ಮ ಸಂಸ್ಕೃತಿಯ ಹೆಗ್ಗಳಿಕೆ ಎಂದರು.
ಆದಿಚುಂಚನಗಿರಿ ಶಾಲಾ ಶಿಕ್ಷಕ ಮಧುಕುಮಾರ್ ಎಂ.ಎನ್ ವಿಶೇಷ ಉಪನ್ಯಾಸ ನೀಡಿ , ೧೨ನೇ ಶತಮಾನದ ದಾರ್ಶನಿಕರು ಮಡಿವಾಳ ಮಾಚಿದೇವರು. ಎಲ್ಲ ಮಹಾಪುರುಷರ ಜನ್ಮದ ಹಿಂದೆ ಒಂದು ಪೌರಾಣಿಕ ಹಿನ್ನೆಲೆ ಇರುತ್ತದೆ. ಹಾಗೆಯೇ ಮಾಚಿದೇವರ ಜನ್ಮದ ಹಿಂದೆ ಪೌರಾಣಿಕ ಹಿನ್ನೆಲೆ ಇದೆ. ಬಿಜಪುರ ಜಿಯ ದೇವರ ಹಿಪ್ಪರಗಿಯಲ್ಲಿ ತಂದೆ ಪರ್ವತಯ್ಯ, ತಾಯಿ ಸುeನವ್ವರಿಗೆ ೧೧೧೧ರಲ್ಲಿ ಇವರು ಜನಿಸುತ್ತಾರೆ. ಮುಂದೆ ಅವರು ಕಲ್ಯಾಣದಲ್ಲಿ ಶಿವಶರಣರ ಗಣ ಸೇರಿ ಕಾಯಕದಲ್ಲಿ ತೊಡಗುತ್ತಾರೆ. ಭವಿ, ಭೋಗಿಗಳ ಬಟ್ಟೆ, ವಸಗಳನ್ನು ಶುದ್ದ ಮಾಡುವುದಿಲ್ಲವೆಂದು ಕಟ್ಟಪ್ಪಣೆ ಹಾಕಿಕೊಳ್ಳುತ್ತಾರೆ. ಕೆಲವರು ಅನೇಕ ಕುಚೇಷ್ಟೆ, ತೊಂದರೆಗಳನ್ನು ನೀಡುತ್ತಾರೆ. ಇದರ ನಡುವೆಯೂ ಸತ್ಯನಿಷ್ಠೆ ಯಿಂದ ಕಾಯಕದಲ್ಲಿ ತೊಡಗಿ ಕೊಂಡು ಜನರ ಮನಸಿನ ಕೊಳೆ ಯನ್ನು ಸಹ ಶುಭ್ರಗೊಳಿಸುತ್ತಾರೆ.
ಅನುಭವ ಮಂಟಪ ಕಟ್ಟುವಲ್ಲಿ ಮಾಚಿದೇವರ ಕಾಯಕ ಅತಿ ಮಹತ್ವzಗಿದ್ದು, ವೀರಗಣಾಚಾರಿ ಹಾಗೂ ವೀರಭದ್ರನ ದೇವಾಂಶ ಸಂಭೂತ, ಅವತಾರ ಪುರುಷ ಎಂದು ಕರೆಯಲಾಗುತ್ತಿತ್ತು. ಬಸವಣ್ಣನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಇವರು ವಚನಗಳ ಸಂರಕ್ಷಕರಾಗಿzರೆ.
ಮಾಚಿದೇವರು ಸುಮಾರು ೩.೩೦೦ ಕೋಟಿ ವಚನ ರಚಿಸಿz ರೆಂದು ಹೇಳಲಾಗುತ್ತದೆ. ಆದರೆ ೫೧೧ ವಚನಗಳು ಮಾತ್ರ ಲಭ್ಯವಿದೆ. ಕಾರಿಮನೆಯಲ್ಲಿ ಮಾಚಿದೇವರ ಗದ್ದುಗೆ ಇದ್ದು, ದೇವರ ಹಿಪ್ಪರಗಿ ಯನ್ನು ಮಾಚಿದೇವರ ಹಿಪ್ಪರಗಿ ಎಂದು ಹೆಸರಿಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದ ಅವರು, ಲಿಂಗಪೂಜೆ ಹಾಗೂ ಶರಣರ ತತ್ವಗಳನ್ನು ಮೈಗೂಡಿಸಿ ಕೊಂಡು ಬದುಕೋಣ ಎಂದರು.
ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಮಡಿ ಬಟ್ಟೆಗಳನ್ನು ಗಂಟೆ ಬಾರಿಸುತ್ತಾ ತಲೆ ಮೇಲೆ ಹೊತ್ತು ತರುವ ಮೂಲಕ ಅತ್ಯಂತ ಶ್ರzಯಿಂದ ಶ್ರೇಷ್ಟ ಕಾಯಕವೆಂದು ಅವರು ಮಾಡುತ್ತಿದ್ದರು. ಅನುಭವ ಮಂಟಪಕ್ಕೆ ಬರುವವರನ್ನು ಪರೀಕ್ಷಿಸಿ, ನೆಲದ ಮೇಲೆ ಬಟ್ಟೆ ಹಾಸಿ ಅತಿಥಿಗಳನ್ನು ಬರ ಮಾಡಿ ಕೊಳ್ಳುತ್ತಿದ್ದ ಶ್ರೇಷ್ಟರು ಅವರು. ಮಡಿವಾಳ ಸಮಾಜ ಸಹ ಅತ್ಯಂತ ಪ್ರೀತಿ, ವಿಶ್ವಾಸ ತೋರುವ ಸಮಾಜವಾಗಿದೆ ಎಂದರು.
ಮಡಿವಾಳ ಸಮಾಜ ಸಂಘದ ಜಿಧ್ಯಕ್ಷ ಸದಾಶಿವಪ್ಪ ಮಾತನಾಡಿ, ಶೂದ್ರರಿಗೆ ವಿದ್ಯೆ ಸಿಗುವುದು ಕಷ್ಟವಾಗಿದ್ದ ಕಾಲದಲ್ಲಿ ಕ್ರಾಂತಿಕಾರಿ ಗುಣದ ಗುರುಗಳಾದ ಮಲ್ಲಿಕಾರ್ಜುನ್ಯನವರಲ್ಲಿ ಮಾಚಿದೇವರು ವಿದ್ಯೆ ಪಡೆದು, ಮುಂದೆ ಕಲ್ಯಾಣದ ಅನುಭವ ಮಂಟಪದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಒದಗಿಸುವ ಕ್ರಾಂತಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್ ಉಮೇಶ್ ಸ್ವಾಗತಿಸಿದರು. ಪಾಲಿಕೆ ಆಡಳಿತಾಧಿಕಾರಿ ತುಷಾರ್ ಗಿರಿನಾಥ್, ಸಮಾಜ ಸಂಘದ ಇತರೆ ಪದಾಧಿಕಾರಿಗಳು, ಸದಸ್ಯರು, ಸಮಾಜದ ಮುಖಂಡರು ಹಾಜರಿದ್ದರು.