ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ವೈನ್ ಉದ್ಯಮಕ್ಕೆ ಮಹಿಳೆಯರು ಬರುತ್ತಿರುವುದು ಸ್ವಾಗತಾರ್ಹ : ಸುಷ್ಮಾ ಸಂಜಯ್

Share Below Link

ಶಿವಮೊಗ್ಗ: ವೈನ್ ಉದ್ಯಮಕ್ಕೆ ಮಹಿಳೆಯರು ಬರುತ್ತಿರುವುದು ಸ್ವಾಗತಾರ್ಹ ಎಂದು ವೈನ್ ಉದ್ಯ ಮಿ ಸುಷ್ಮಾ ಸಂಜಯ್ ಹೇಳಿದರು.
ಅವರು ಶಿವಮೊಗ್ಗ ಭಾವಸಾರ ವಿಜನ್ ಇಂಡಿಯಾ ಸಂಸ್ಥೆ ವತಿ ಯಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ವೈನ್ ಉದ್ಯಮ ನಡೆಸುವುದು ಸುಲಭದ ಮಾತಲ್ಲ. ಅದರಲ್ಲೂ ಗ್ರಾಮೀಣ ಭಾಗದಲ್ಲಿದ್ದುಕೊಂ ಡು, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸು ವಂತಹ ಉದ್ಯಮ ನಡೆಸುವುದು ತೀರ ಕಷ್ಟಕರ. ಆದರೂ ಛಲ ಬಿಡದೇ ನಾನು ಈ ಸಂಸ್ಥೆ ನಿರ್ವ ಹಿಸುತ್ತಿದ್ದೇನೆ. ಮಹಿಳಾ ವೈನ್ ಉದ್ಯಮಿಯಾಗಿ ಇಡೀ ರಾಜ್ಯದಲ್ಲಿ ನಾನೇ ಪ್ರಥಮ ಎಂಬುದು ನನಗೆ ಹೆಮ್ಮೆ ಎಂದರು.
ಈ ಉದ್ಯಮಕ್ಕೆ ಅಬಕಾರಿ ಇಲಾಖಾ ಧಿಕಾರಿಗಳ ಸಹಕಾರ ಮರೆಯುವ ಹಾಗೇ ಇಲ್ಲ ಎಂದ ಅವರು, ಪ್ರಸ್ತುತ ಹಲವಾರು ಯುವ ಉದ್ಯೋಗಾಕಾಂಕ್ಷಿಗಳು, ತಮಗೆ ಕೆಲಸ ಸಿಗಬೇಕೆಂಬ ನಿಟ್ಟಿನಲ್ಲಿ ಹಲವಾರು ವರ್ಷಗಳ ಕಾಲ ಕಾಲಹರಣ ಮಾಡಿ ನಿರಾಸೆ ಹೊಂದುತ್ತಾರೆ.


ಅದರ ಬದಲು, ತಮ್ಮದೇ ಸ್ವಂತ ಉದ್ಯಮವನ್ನು, ತಮಗೆ ಇಷ್ಟವಾದ ಕ್ಷೇತ್ರದಲ್ಲಿ ಆಯ್ಕೆ ಮಾಡಿಕೊಂಡು ನಡೆಸಿಕೊಂಡು ಹೋಗಬೇಕು. ಆಗ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ ಎಂದು ಉದ್ಯೋಗಕಾಂಕ್ಷಿಗಳಿಗೆ ಕಿವಿ ಮಾತು ಹೇಳಿದರು.
ವೈನ್ ಉದ್ಯಮದ ಕುರಿತು ಮಾತನಾಡಿದ ಅವರು, ಬೇರೆ ಉತ್ಪನ್ನಗಳಿಗಿಂತ ತಮ್ಮ ಸಂಸ್ಥೆಯ ಉತ್ಪನ್ನ ಎಷ್ಟು ಭಿನ್ನ ಎಂದು ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಶಿವಮೊಗ್ಗದ ಪರಿಸರ ಪ್ರೇಮಿ, ಕೇವಲ ಪಕ್ಷಿಗಳಿಗಾಗಿಯೇ ತಮ್ಮ ೧ ಎಕರೆ ಪ್ರದೇಶದಲ್ಲಿ ಈಶ್ವರವನ ನಿರ್ಮಾಣ ಮಾಡಿರುವ ನವ್ಯಶ್ರೀ ನಾಗೇಶ್ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿ ಸಚಿನ್ ಬೇದ್ರೆ, ನಿರ್ದೇಶಕರಾದ ಸ್ವಪ್ನಾ ಹರೀಶ್, ಮಮತಾ ಕಮಲಾಕರ್, ಸ್ವಪ್ನ ಪ್ರಭಾಕರ್, ವಾಣಿ ತೇಲ್ಕರ್, ವಿನಯ್ ಕುಂಟೆ, ಕೀರ್ತಿ ಕಿರಣ್, ದಿನೇಶ್ ಕುಂಠೆ, ಕಮಲಾಕರ್, ಕಿರಣ್ ಉಪಸ್ಥಿತರಿದ್ದರು.
ಕಾರ್‍ಯಕ್ರಮದ ಅಧ್ಯಕ್ಷತೆ ಯನ್ನು ಸಂಸ್ಥೆ ಅಧ್ಯಕ್ಷ ಪ್ರಭಾಕರ್ ವಂಡ್ಕರ್ ವಹಿಸಿದ್ದರು.