ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಎಲ್ಲರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪುಟಿದೇಳುವಂತೆ ಮಾಡುವೆ: ಸಚಿವ ಮಧು ಬಂಗಾರಪ್ಪ ಶಪಥ…

Share Below Link

ಶಿವಮೊಗ್ಗ: ಜಿಯಲ್ಲಿ ಮುಂಬರುವ ಎ ಚುನಾವಣೆಗಳ ಜವಾಬ್ದಾರಿಯನ್ನು ನಾನು ವಹಿಸಿ ಕೊಂಡು ಕಾಂಗ್ರೆಸ್ ಪಕ್ಷ iತ್ತೆ ವಿಜೃಂಭಿಸುವಂತೆ ಮಾಡುತ್ತೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ಜಿ ಕಾಂಗ್ರೆ ಸ್ ಸಮಿತಿ ವತಿಯಿಂದ ಆಯೋ ಜಿಸಿದ್ದ ಅಭಿನಂದನಾ ಕಾರ್‍ಯಕ್ರಮ ದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಸಚಿವನಾಗಿ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಈ ಜವಾಬ್ದಾರಿ ಯನ್ನು ಪ್ರಾಮಾಣಿಕವಾಗಿ ನಿಭಾ ಯಿಸುವೆ. ಶಿಕ್ಷಣ ಇಲಾಖೆ ಒಂದು ಛಾಲೆಂಜಿಂಗ್ ಖಾತೆ. ಇದೊಂದು ದೊಡ್ಡ ಜವಾಬ್ದಾರಿ ಎಂದೇ ಭಾವಿ ಸಿದ್ದೇನೆ. ರಾಜ್ಯದಲ್ಲಿ ೧ಕೋಟಿ ೨೦ ಲಕ್ಷ ವಿದ್ಯಾರ್ಥಿಗಳು ಹಾಗೂ ೩.೫ ಲಕ್ಷ ಶಿಕ್ಷಕರಿzರೆ. ಈಗಾಗಲೇ ಬಿಜೆಪಿ ಅಪಪ್ರಚಾರ ಶುರು ಮಾಡಿದೆ. ಮುಖ್ಯಮಂತ್ರಿಗಳು ಈಗಾಗಲೇ ಗ್ಯಾರಂಟಿ ಘೋಷಣೆ ಮಾಡಿ ಬಿಜೆಪಿಯವರ ಬಾಯಿ ಮುಚ್ಚಿಸಿzರೆ. ಮತದಾರರು ಈಗಾಗಲೇ ಬಿಜೆಪಿಯ ವಾರಂಟಿ ಯನ್ನು ತೆಗೆದಿzರೆ ಎಂದರು.


ನರೇಂದ್ರ ಮೋದಿಯವರು ಶ್ರೀಮಂತರ ೧೭ಲಕ್ಷ ಕೋಟಿ ಸಾಲ ಮನ್ನಾ ಮಾಡಿzರೆ. ಹಾಗಿರು ವಾಗಿ ಗ್ಯಾರಂಟಿ ಕೊಡುವುದು ದೊಡ್ಡ ವಿಷಯವೇನಲ್ಲ. ಅವರೇ ಈ ಕೆಲಸ ಮಾಡಬಹುದಿತ್ತು. ಮುಂಬರುವ ಲೋಕಸಭಾ ಚುನಾ ವಣೆಗೆ ನಾವು ಸಿದ್ಧವಾಗಬೇಕಾಗಿದೆ. ಸೋತವರಿಗೆ ಪಕ್ಷ ಬೆನ್ನೆಲುಬಾಗಿ ನಿಲ್ಲುತ್ತದೆ.ಬಿಜೆಪಿಯವರು ಏನನ್ನೂ ಮಾಡಿಲ್ಲ. ಅನ್ನಭಾಗ್ಯ, ಆಶ್ರಯ, ಭೂಹಕ್ಕು ನೀಡಿದ್ದು ಎಲ್ಲವೂ ಕಾಂಗ್ರೆಸ್ ಪಕ್ಷ. ಈ ವರ್ಷ ಪೂರ್ತಿ ಚುನಾವಣೆಗಳಿವೆ. ಮಲೆ ನಾಡು ಹಕ್ಕು ಹೋರಾಟ ಸಮಿತಿ ಮೂಲಕ ಹಕ್ಕುಪತ್ರಕ್ಕಾಗಿ ಬೇಡಿಕೆ ಇಟ್ಟಿzವು. ಈಗ ನಮ್ಮದೇ ಸರ್ಕಾರ ಇದೆ. ಅರಣ್ಯ ಮಂತ್ರಿಯ ಜೊತೆಗೆ ಮಾತುಕತೆ ನಡೆಸಿ ಅಗತ್ಯವಿದ್ದಲ್ಲಿ ಕಾನೂನು ತಿದ್ದುಪಡಿ ಮಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ. ಕೇಂದ್ರ ಸರ್ಕಾರ ಕೂಡ ಸಹಕರಿಸುವ ವಿಶ್ವಾಸವಿದೆ. ಗ್ಯಾರಂಟಿಗಳ ಬಗ್ಗೆ ಯಾವುದೇ ಅವಿಶ್ವಾಸ ಬೇಡ, ಒಳ್ಳೆಯ ರೀತಯಲ್ಲಿ ಅನುಷ್ಠಾನ ಮಾಡುತ್ತೇವೆ ಎಂದರು.
ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿ, ಮಧು ಬಂಗಾ ರಪ್ಪನವರು ಶಿಕ್ಷಣ ಸಚಿವರಾಗಿ ರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಈ ಹುzಯನ್ನು ಅವರು ಸದ್ಬಳಕೆ ಮಾಡಿಕೊಳ್ಳ ಬೇಕು. ಸಣ್ಣ ಪುಟ್ಟ ಜತಿಗಳನ್ನು ಗುರುತಿಸಬೇಕು. ತುಳಿತಕ್ಕೆ ಒಳ ಗಾದವರ ಬಗ್ಗೆ ಅನುಕಂಪವಿರಲಿ. ಶೋಷಣೆ ತಪ್ಪಿಸಲು ಪ್ರಯತ್ನಿಸ ಬೇಕು. ಮೀಸಲಾತಿ ಕಡೆ ಗಮನ ಹರಿಸಬೇಕು. ಮುಖ್ಯವಾಗಿ ಕಾಂಗ್ರೆ ಸ್ ಸಿದ್ಧಾಂತವನ್ನು ಪ್ರತಿಪಾದಿಸ ಬೇಕು. ಅವರು ನನಗಿಂತ ಚಿಕ್ಕವರು. ಶಿಕ್ಷಣ ಸಚಿವನಾಗಿನನಗೆ ಗೊತ್ತಿರುವುದನ್ನು ನಾನು ಕೂಡ ಅವರಿಗೆ ತಿಳಿಸುತ್ತೇನೆ. ಕಾಂಗ್ರೆಸ್‌ನ ಈ ಅಲೆಯನ್ನು ನೋಡಿದರೆ ಮುಂದೊಂದು ದಿನ ಮಧು ಬಂಗಾರಪ್ಪ ಕೂಡ ತಂದೆಯಂತೆ ಸಿಎಂ ಆಗಬಹುದು ಎಂದರು.
ಸನ್ಮಾನ ಸ್ವೀಕರಿಸಿ ಮಾತ ನಾಡಿ ದ ಸಾಗರ ಕ್ಷೇತ್ರದ ಶಾಸಕ ಬೇಳೂ ರು ಗೋಪಾಲಕೃಷ್ಣ ಮಧು ಬಂಗಾ ರಪ್ಪ ಅವರು, ನಮ್ಮ ಜಿ ಯಿಂದ ಶಾಸಕರಾಗಿ ಆಯ್ಕೆಯಾಗಿ zರೆ. ಉಸ್ತುವಾರಿ ಸಚಿವರು ಕೂಡ ಆಗು ತ್ತಾರೆ. ಇದು ಹೆಮ್ಮೆಯ ವಿಷಯ. ಅವರು ಸಮರ್ಥವಾಗಿ ಸಮಸ್ಯೆ ಗಳನ್ನು ನಿಭಾಯಿಸಬ ಲ್ಲರು. ಆದರೆ ಜಿಯಲ್ಲಿ ನೂರಾರು ಸಮಸ್ಯೆಗ ಳಿವೆ. ಅದು ಕೂಡ ಸವಾಲಾಗಿದೆ ಎಂದರು.


ಜಿಯಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು ಬಿಜೆಪಿಯ ವಕ್ತಾರ ರಂತೆ ಕೆಲಸ ಮಾಡಿzರೆ. ಅಭಿ ವೃದ್ಧಿ ಸೇರಿದಂತೆ ಅನೇಕ ವಿಷಯ ಗಳಲ್ಲಿ ತೊಡಕಾಗಿದ್ದರು. ಇವರ ನ್ನೆಲ್ಲ ವರ್ಗಾವಣೆ ಮಾಡಬೇಕಾ ಗಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಜನರು ಬಿಜೆಪಿ ಸರ್ಕಾ ರವನ್ನು ದೂರ ಮಾಡಿzರೆ. ಅವರಿಗೆ ಅಭಿನಂದನೆ. ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಂ ಡಿದೆ.
ಮುಂದೆ ಬರಲಿರುವ ಜಿ.ಪಂ/ತಾಪಂ ಚುನಾವಣೆಯನ್ನು ಕೂಡ ನಾವು ಸಮರ್ಥವಾಗಿ ನಿಭಾಯಿ ಸುತ್ತೇವೆ ಎಂದರು.
ಜಿ ಕಾಂಗ್ರೆಸ್ ಅಧ್ಯಕ್ಷ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖ ರಾದ ಆರ್. ಪ್ರಸನ್ನಕುಮಾರ್, ಆರ್.ಎಂ. ಮಂಜುನಾಥ ಗೌಡ, ಹೆಚ್.ಸಿ ಯೋಗೇಶ್, ರೇಖಾ ರಂಗನಾಥ್, ಜಿ.ಡಿ.ಮಂಜು ನಾಥ್, ಎಸ್.ಕೆ.ಮರಿಯಪ್ಪ, ವೇದಾ ವಿಜಯಕುಮಾರ್, ಅನಿತಾ ಕುಮಾರಿ, ಬಲ್ಕಿಷ್ ಭಾನು, ಶ್ರೀನಿವಾಸ ಕರಿಯಣ್ಣ, ವಿಜಯ್, ಮಧು, ಶಂಕರಘಟ್ಟ ರಮೇಶ್. ಎಸ್.ಪಿ. ಶೇಷಾದ್ರಿ, ದೇವೇಂದ್ರಪ್ಪ, ಹೆಚ್.ಪಿ. ಗಿರೀಶ್. ಸಿದ್ದಪ್ಪ, ವಿಜಯಲಕ್ಷ್ಮಿ ಪಾಟೀಲ್ ಸೇರಿದಂತೆ ಹಲವರಿದ್ದರು.