ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ಶತಾಯುಷಿಗಳಿಂದ ಮತದಾನ ಜಾಗೃತಿ…

Share Below Link

ದಾವಣಗೆರೆ(ಹೊಸನಾವಿಕ): ಜಿಡಳಿತ, ಜಿಪಂ ಹಾಗೂ ಸ್ವೀಪ್ ಸಮಿತಿ ಯಿಂದ ಲೋಕಸಭಾ ಚುನಾವಣೆ ನಿಮಿತ್ತ ಹಿರಿಯ ನಾಗರಿಕರಿಂದ ಮತದಾನ ಜಾಗೃತಿ ಜಥ ಹಮ್ಮಿಕೊಳ್ಳಲಾಗಿತ್ತು.
ಜಾಥವು ಎಂಸಿಸಿಬಿ ಬ್ಲಾಕ್ ಚಿರ್ಲ್ಡನ್ ಪಾರ್ಕ್‌ನಿಂದ ಆರಂಭ ಗೊಂಡು, ಗುಂಡಿ ಸರ್ಕಲ್‌ನಲ್ಲಿ ಅಂತ್ಯವಾಯಿತು. ಮತದಾನ ಜಥಾದಲ್ಲಿ ಶತಾಯುಷಿಗಳಾದ ಶೇಕ್ ಮದರ್ ಸಾಬ್ (೧೦೩), ಕೆ ರಾಜು (೧೦೩), ಬಸಮ್ಮ (೧೦೧), ಹನುಮಂತಪ್ಪ (೧೦೩), ಹನುಮಮ್ಮ (೧೦೨) ಇವರುಗಳಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲ ನಾಯ್ಕ, ಜಿ ವಿಶೇಷಚೇತನರ ಹಾಗೂ ಹಿರಿಯ ನಾಗರಿಕ ಇಲಾಖೆ ಉಪನಿರ್ದೇಶಕ ಕೆ.ಕೆ. ಪ್ರಕಾಶ್, ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಗುರುಮೂರ್ತಿ, ನಿವೃತ್ತ ಸಂಘದ ಅಧ್ಯಕ್ಷ ಭರತ್‌ರಾಜ್, ನಿವೃತ್ತ ಎಸ್ಪಿ ರವಿ ನಾರಾಯಣ್, ಹಿರಿಯ ನಾಗರಿಕ ಮತದಾರರು ಮತ್ತು ಇನ್ನಿತರರು ಉಪಸ್ಥಿತರಿದ್ದರು.