ತಾಜಾ ಸುದ್ದಿದೇಶಲೇಖನಗಳು

ಗಣರಾಜ್ಯೋತ್ಸವ ಫರೇಡ್‌ನಲ್ಲಿಂದು ಕರೂರ್ ಕಾಲೇಜ್ ವಿದ್ಯಾರ್ಥಿನಿಯರಿಂದ ವೀರಗಾಸೆ

Share Below Link

೨೦೨೪ ಜನವರಿ ೨೬ ರಂದು ಭಾರತವು ೭೫ನೇ ವರ್ಷದ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಹೆಮ್ಮಯಾಗಿದೆ. ಈ ಬಾರಿ ಭಾರತವು ೭೫ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಭಾರತದ ಸಂವಿಧಾನವನ್ನು ೧೯೪೯ರ ನವೆಂಬರ್ ೨೬ರಂದು ಅಂಗೀಕರಿಸಲಾಗಿತ್ತು. ಹೀಗಾಗಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸವಿನೆನಪಿಗಾಗಿ ಭಾರತವು ಪ್ರತಿವರ್ಷ ನವೆಂಬರ್ ೨೬ರಂದು ಸಂವಿಧಾನ ದಿನವನ್ನು ಆಚರಿಸುತ್ತದೆ.
ಭಾರತ ಸರ್ಕಾರದ ಸಾಂಸ್ಕೃತಿಕ ಸಚಿವಾಲಯದ ಸಂಗೀತ ಮತ್ತು ನಾಟಕ ವಿಭಾಗದ ಆಹ್ವಾನದ ಮೇರೆಗೆ ರಾಣೆಬೆನ್ನೂರು ತಾಲೂಕಿನ ಕರೂರಿನ ಎಜು ಏಷಿಯಾ ಕಾಲೇಜಿನ ವಿದ್ಯಾರ್ಥಿನಿಯರು ೭೫ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಜನಪದ ಸಂಸ್ಕೃತಿಯ ವೀರಗಾಸೆ ನೃತ್ಯವನ್ನು ಪ್ರದರ್ಶಿಸಲಿದ್ದು, ಈ ವೀರಗಾಸೆ ಪ್ರದರ್ಶನದ ಮೂಲಕ ಕರ್ನಾಟವನ್ನು ಪ್ರತಿನಿಧಿಸಲಿzರೆ.
ದಾವಣಗೆರೆಯ ಹಿರಿಯ ಜನಪದ ಕಲಾವಿದರಾದ ಶ್ರೀಮತಿ ಶೋಭಾರಾಣಿ ಅವರು ಎಜು ಏಷಿಯಾ ಸಂಸ್ಥೆಯ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಂಡರು. ಸ್ವತಃ ಕಲಾವಿದರು ಹಾಗೂ ಜನಪದ ಪ್ರೋತ್ಸಾಹಕರಾಗಿರುವ ಶ್ರೀ ಮಾಗಾನಹಳ್ಳಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಹನಗವಾಡಿ ರವಿ, ತಿಪ್ಪೇಶ್ ಎಂ. ಲಕ್ಕಿಕೊನಿ ಮತ್ತು ಚಂದ್ರಪ್ಪ ಇವರಿಂದ ಮಕ್ಕಳಿಗೆ ತರಬೇತಿ ಕೊಡಿಸಿ, ಶ್ರೀಮತಿ ಶೋಭಾರಾಣಿ ಇವರ ನೇತೃತ್ವದಲ್ಲಿ ದೆಹಲಿಯ ೭೫ನೇ ವರ್ಷದ ರಿಪಬ್ಲಿಕ್ ಡೇ ಪೆರೇಡ್‌ನಲ್ಲಿ ಎಜು ಏಷಿಯಾ ಸಂಸ್ಥೆಯ ೧೭ ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಾಂಸ್ಕೃತಿಕ ತೇಜಸ್ಸನ್ನು ಪ್ರದರ್ಶಿಸಲಿzರೆ ಎಂದು ಸಂತಸ ವ್ಯಕ್ತಪಡಿಸಿದರು.
ಸತತ ಒಂದು ತಿಂಗಳು ಕೊರೆಯುವ ಚಳಿಯನ್ನು ಲೆಕ್ಕಿಸದೆಮಕ್ಕಳುತರಬೇತಿಯಲ್ಲಿ ಪಾಲ್ಗೊಂಡು ನವದೆಹಲಿಯ ರಾಜಪಥದಲ್ಲಿ ನಡೆಯುವ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಕಲಾತ್ಮಕ ಸಾಮರ್ಥ್ಯದ ಗಮನಾರ್ಹ ಪ್ರದರ್ಶನದಲ್ಲಿ ವೀರಗಾಸೆಯನ್ನು ಜನವರಿ ೨೬, ೨೦೨೪ರ ಇಂದು ಪ್ರದರ್ಶಿಸಲಿzರೆ.
ಕರ್ನಾಟಕದಿಂದ ಹುಟ್ಟಿಕೊಂಡ ಸಾಂಪ್ರದಾಯಿಕ ನೃತ್ಯ ರೂಪ ಶೈವ ಸಂಪ್ರದಾಯದ ವೀರ ರಸಪ್ರಧಾನ ಧಾರ್ಮಿಕ ಕುಣಿತ ವೀರಗಾಸೆಯನ್ನು ವರ್ಣರಂಜಿತ ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದು, ತಮ್ಮ ರೋಮಾಂಚಕ ಮತ್ತು ಲಯಬದ್ಧ ಪ್ರದರ್ಶನದಿಂದ ಪ್ರೇಕ್ಷಕರನ್ನು ಆಕರ್ಷಿಸಲಿzರೆ. ವಿದ್ಯಾರ್ಥಿಗಳ ಈ ವೀರಗಾಸೆಯ ಪ್ರದರ್ಶನವು, ಭಾರತವನ್ನು ವ್ಯಾಖ್ಯಾನಿಸುವ ಸಾಂಸ್ಕೃತಿಕ ಚಿತ್ರಣಕ್ಕೆ ನಾಂದಿ ಹಾಡಲೆಂದು ಆಶಿಸುತ್ತೇವೆ.
ಎಜು ಏಷಿಯಾ ಶಾಲೆ ಹಾಗೂ ಕಾಲೇಜ್, ಸಮಗ್ರ ಶಿಕ್ಷಣದ ಬದ್ಧತೆಗೆ ಹೆಸರುವಾಸಿಯಾಗಿದ್ದು, ಗಣರಾಜ್ಯೋತ್ಸವ ಫರೇಡ್ ಮೂಲಕ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮೆಚ್ಚುಗೆಯ ಪ್ರeಯನ್ನು ಬೆಳೆಸುವಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತಿದೆ. ಈ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮಾತ್ರವಲ್ಲದೆ ನಮ್ಮ ರಾಷ್ಟ್ರದ ವೈವಿಧ್ಯಮಯಕಲೆಯನ್ನು ಒಂದು ಗೂಡಿಸುವ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಆಚರಿಸಲು ರಾಷ್ಟ್ರೀಯ ವೇದಿಕೆಯನ್ನು ಒದಗಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸಂಸ್ಥೆಯ ಕಾರ್ಯದರ್ಶಿ ಸಂತೋಷ್‌ಕುಮಾರ್ ಮಾರ್ಗದರ್ಶನದಲ್ಲಿ ಹಾಗೂ ಸಹನಾ ಸಂತೋಷ್ ಕುಮಾರ್ ಒಂದೇ ಶಾಲೆಯಿಂದ ೧೭ ವಿದ್ಯಾರ್ಥಿನಿಯರು ಗಣರಾಜ್ಯೋತ್ಸವದ ದಿನದಂದು ಭಾಗವಹಿಸುತ್ತಿರುವುದು ಒಂದು ಐತಿಹಾಸಿಕ ಸಾಧನೆ ಎಂದು ಸಂತಸವನ್ನು ವ್ಯಕ್ತಪಡಿಸಿzರೆ. ಶಾಲೆಯ ಮತ್ತು ಕಾಲೇಜಿನ ಪ್ರಾಂಶುಪಾಲರು ಹಾಗೂ ಎ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿನಿಯರ ಪೋಷಕರು, ವಿದ್ಯಾರ್ಥಿಗಳ ಸಾಧನೆಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿzರೆ, ನಾವು ಶೈಕ್ಷಣಿಕ ಉತ್ಕೃಷ್ಟತೆ ಮಾತ್ರವಲ್ಲದೆ ನಮ್ಮ ಸಾಂಸ್ಕೃತಿಕ ಬೇರುಗಳಿಗೆ ಆಳವಾದ ಸಂಪರ್ಕವನ್ನು ಬೆಳೆಸುವುದರಲ್ಲಿ ನಂಬಿಕೆ ಇಟ್ಟಿದ್ದೇವೆ. ಇಂದು, ನಮ್ಮ ವಿದ್ಯಾರ್ಥಿಗಳು ಎಜು ಏಷಿಯಾ ಸಂಸ್ಥೆಯನ್ನು ಪ್ರತಿನಿಧಿಸುತಿರುವುದು ಮಾತ್ರವಲ್ಲದೆ, ಭಾರತದ ರಾಯಭಾರಿಗಳೂ ಆಗಿzರೆ.
ಗಣರಾಜ್ಯೋತ್ಸವದ ಪರೇಡ್‌ನಲ್ಲಿ ವೀರಗಾಸೆಯನ್ನು ಸೇರಿಸುವುದು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಲಿದ್ದು, ಆಧುನಿಕ ಯುಗದಲ್ಲಿ ಅವು ಅಭಿವೃದ್ಧಿ ಹೊಂದುವುದನ್ನು ಖಚಿತಪಡಿಸಲಿದೆ. ಈ ಅಪ್ರತಿಮ ಸಮಾರಂಭದಲ್ಲಿ ಎಜು ಏಷಿಯಾ ವಿದ್ಯಾರ್ಥಿಗಳ ಭಾಗವಹಿಸುವಿಕೆಯು, ರಾಷ್ಟ್ರದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಭೂದೃಶ್ಯಗಳೆರಡಕ್ಕೂ ಕೊಡುಗೆ ನೀಡುವ ಸುಸಜ್ಜಿತ ವ್ಯಕ್ತಿಗಳನ್ನು ರೂಪಿಸುವ ಶಾಲೆಯ ಮತ್ತು ಕಾಲೇಜಿನ ಬದ್ಧತೆಯನ್ನು ಬಲಪಡಿಸುತ್ತದೆ.
ಈ ವೀರಗಾಸೆ ನೃತ್ಯದಲ್ಲಿ ಸೌಮ್ಯ ಎಸ್. ನೇಹಾ ಬಿ., ಮೋನಿಕಾ ಬಿ., ಭಾವನಾ ಜೆ.ಎಸ್., ಅನುಷಾ ಎಂ., ಗೌತಮಿ ಕೆ., ಚಂದನ ಎನ್. ಎಸ್., ಪಲ್ಲವಿ ಎ., ಶ್ರೀಗೌರಿ ಡಿ, ಎಚ್., ಪೂಜ ಎನ್.ಎಂ., ಎಮೆನ್ ಕಲಿಕ್, ದಿವ್ಯಾ ಕೆ.ಎಸ್., ಉಷಾ ಆರ್., ಜನ್ನು, ಜಯಶ್ರೀ, ಎಸ್.ಕೆ. ಸಂಜನಾ, ಹರ್ಷಿತಾ ಪಿ.ಎಚ್., ಲಿಖಿತಾ ಎಚ್.ಎಸ್., ವೀರಗಾಸೆ ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ಜನಪದರ ಪೌರಾಣಿಕ ಕಥೆಯಿರುವ ಈ ವೀರಗಾಸೆಯಲ್ಲಿ ತಾಳ, ಶ್ರುತಿ, ಚಮಾಳ (ಸಮ್ಮೇಳ ಸಂಬಾಳ), ಓಲಗ ಅಥವಾ ಮರಿ, ಕರಡೆವಾದ್ಯ- ಈ ಪಂಚವಾದ್ಯಗಳು ಇಲ್ಲಿ ಬಳಕೆಯಾಗುತ್ತವೆ. ಕರ್ನಾಟಕದ ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ವಿಜಯನಗರ ಹಾಗೂ ಬಳ್ಳಾರಿ ಜಿಗಳಲ್ಲಿ ಈ ನೃತ್ಯ ಹೆಚ್ಚು ಪ್ರಚಲಿತವಿದೆ.
ಪೌರಾಣಿಕ ಹಿನ್ನೆಲೆಯಲ್ಲಿ ತಂದೆಯ ಮಾತನ್ನು ಮೀರಿದ ಪಾರ್ವತಿ ಶಿವನನ್ನು ವರಿಸುತ್ತಾಳೆ. ಈ ಕಾರಣದಿಂದಾಗಿ ಪಾರ್ವತಿಯ ತಂದೆಯಾದ ದಕ್ಷಬ್ರಹ್ಮ ಶಿವನನ್ನು ದ್ವೇಷಿಸುತ್ತಾನೆ. ಹೀಗಿರುವಾಗ ದಕ್ಷಬ್ರಹ್ಮ ಆಚರಿಸಿದ ಯಾಗಕ್ಕೆ ಶಿವನೊಬ್ಬನನ್ನು ಹೊರತುಪಡಿಸಿ ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿzನೆಂದು ಭಾವಿಸಿದ ಪಾರ್ವತಿ ಉಗ್ರಳಾಗುವಳು. ನ್ಯಾಯ ಕೇಳುವ ಸಲುವಾಗಿ ಗಂಡನ ತಡೆಯನ್ನು ಉಲ್ಲಂಘಿಸಿ ತಂದೆಯ ಬಳಿಗೆ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳೆಂಬ ಮಮತೆಯನ್ನೂ ತೊರೆದು ದಕ್ಷಬ್ರಹ್ಮ ಪಾರ್ವತಿಯನ್ನು ತಿರಸ್ಕಾರದಿಂದ ನಡೆಸಿಕೊಂಡದ್ದಲ್ಲದೆ ಅವಳೆದುರಿಗೆ ಶಿವನನ್ನು ನಿಂದಿಸುತ್ತಾನೆ; ಪತಿನಿಂದೆಯನ್ನು ಸಹಿಸಲಾಗದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ ವೀರಭದ್ರನ ಅವತಾರವಾಗುತ್ತದೆ. ಹೀಗೆ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ ಎಂದೂ ಅಂದಿನಿಂದ ಈ ಕಲೆ ಬೆಳೆದು ಬಂದಿತೆಂದೂ ಕಲಾವಿದರ ಹೇಳಿಕೆಯಾಗಿದೆ.
ಈ ಬಾರಿ ಭಾರತದ ಗಣತಂತ್ರ ದಿನಕ್ಕೆ ವಿಶೇಷ ಅತಿಥಿಯಾಗಿ ಫ್ರಾನ್ಸ್ ದೇಶದ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರನ್ ಅವರು ಆಗಮಿಸುತ್ತಿzರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಅನೇಕ ಮಹನೀಯರ ಸಮ್ಮುಖದಲ್ಲಿ ಹಾವೇರಿ ಜಿಯ ರಾಣೆಬೆನ್ನೂರು ತಾಲೂಕಿನ ಕರೂರಿನ ಎಜು ಏಷಿಯಾ ಕಾಲೇಜಿನ ವಿದ್ಯಾರ್ಥಿನಿಯರು ೭೫ನೇ ವರ್ಷದ ಗಣರಾಜ್ಯೋತ್ಸವದಲ್ಲಿ ವೀರಗಾಸೆ ನೃತ್ಯವನ್ನು ಪ್ರದರ್ಶಿಸುವುದು ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾಗಿದೆ.

ಸಂಗ್ರಹ ಲೇಖನ : ಹೆಚ್.ಎಂ.ಗುರುಬಸವರಾಜಯ್ಯ, ಉಪನ್ಯಾಸಕರು, ನಂದಿಪುರ.