ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ: ಆರ್‌ಎಂಎಂ

Share Below Link

ಶಿವಮೊಗ್ಗ : ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್ ಹಾಗೂ ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಕೆ. ಮಂಜುನಾಥ್ ಈ ಇಬ್ಬರ ಗೆಲುವು ನಿಶ್ಚಿತ ಎಂದು ಎಂ.ಎ.ಐ.ಡಿ.ಬಿ. ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಆಯನೂರು ಮಂಜುನಾಥ್ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ. ಪದವೀಧರರ ಪರ ವಾಗಿ ಅವರು ಯಾವಾಗಲೂ ಹೋರಾಟ ಮಾಡಿಕೊಂಡೇ ಬಂದಿದ್ದಾರೆ. ಅವರಿಗೆ ಸಮಸ್ಯೆಗಳ ಅರಿವಿದೆ. ಮುಖ್ಯವಾಗಿ ಈ ಬಾರಿ ಹಳೇ ಪಿಂಚಣಿ ವ್ಯವಸ್ಥೆಯ ಜರಿ ಮುಂಚೂಣಿಯಲ್ಲಿದೆ. ಸರ್ಕಾರದ ನಿರ್ಧಾರ ಕೂಡ ಇದೇ ಆಗಿದೆ. ಹಾಗಾಗಿ ಅವರು ಗೆದ್ದೇ ಗೆಲ್ಲುತ್ತಾರೆ ಎಂದರು.
ಬಿಜೆಪಿ ಸರ್ಕಾರದಲ್ಲಿ ಹೊಸ ಪಿಂಚಣಿ ವ್ಯವಸ್ಥೆ ಜರಿಯಾಗಿದ್ದು, ಇದೇ ಅವರಿಗೆ ಮುಳ್ಳುವಾಗಲಿದೆ. ಕಾಂಗ್ರೆಸ್ ಸರ್ಕಾರ ಬಂದರೆ ಹೊಸ ಪಿಂಚಣಿ ವ್ಯವಸ್ಥೆ ರದ್ದಾಗಿ ಹಳೆಯದೇ ಬರುತ್ತದೆ. ಮತ್ತು ಇದನ್ನು ಜರಿಗೆ ತರುವುದು ಈಗಿನ ಸರ್ಕಾರ ಎಂಬ ಭಾವನೆ ಶಿಕ್ಷಕರಲ್ಲಿದೆ. ಹಾಗಾಗಿ ಅವರು ಗೆಲ್ಲುವುದು ಖಚಿತ ಎಂದರು.
ಬಿಜೆಪಿಯವರು ಯಾವ ಮಾನದಂಡವನ್ನು ಇಟ್ಟುಕೊಂಡು ಈ ಬಾರಿ ವೋಟು ಕೇಳುತ್ತಾರೋ ಗೊತ್ತಿಲ್ಲ. ಸರ್ಜಿಯವರು ಪದವೀ ಧರರ ಬಗ್ಗೆ ಯಾವ ಹೋರಾಟ ವನ್ನು ಕೂಡ ಮಾಡಿಲ್ಲ. ಆಯನೂರು ಪಿಂಚಣಿ ವ್ಯವಸ್ಥೆಯ ಜೊತೆಗೆ ಏಳನೇ ವೇತನ ಆಯೋಗದ ಬಗ್ಗೆಯೂ ಹೋರಾಟ ನಡೆಸಿದ್ದಾರೆ. ಆಡಳಿತ ಪಕ್ಷದ ವಿರುದ್ಧವೇ ಅವರು ಹೋರಾಟ ಮಾಡಿದವರು ಎಂದರು.
ಈ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆಯಾ ಕ್ಷೇತ್ರದ ಕಾಂಗ್ರೆಸ್ ಶಾಸಕರು, ಜನಪ್ರತಿನಿಧಿಗಳು, ಪ್ರಮುಖರು ವ್ಯವಸ್ಥಿತವಾಗಿ ಚುನಾವಣೆ ನಡೆಸುತ್ತಿ ದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು. ಮುಖಂಡರುಗಳಾದ ಎಸ್.ಕೆ.ಮರಿಯಪ್ಪ, ಕಲಗೋಡು ರತ್ನಾಕರ್, ಡಾ.ಟಿ.ನೇತ್ರಾವತಿ, ಶಿವಣ್ಣ, ದುಗ್ಗಪ್ಪಗೌಡ, ಶಾಮ್, ಷಡಾಕ್ಷರಿ ಮುಂತಾದವರು ಇದ್ದರು.

This image has an empty alt attribute; its file name is Arya-coll.gif