ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಗೆಲುವು ನನ್ನದೇ: ಕಾಂಗ್ರೆಸ್ ಅಭ್ಯರ್ಥಿ ಯೋಗೀಶ್ ವಿಶ್ವಾಸ

Share Below Link

ಶಿವಮೊಗ್ಗ: ಜನರ ಪ್ರೀತಿಯಿಂದ, ಪಕ್ಷದ ಗ್ಯಾರಂಟಿ ಕಾರ್ಡ್‌ನಿಂದ, ಕಾರ್ಯಕರ್ತರ ಶ್ರಮದಿಂದ ಈ ಬಾರಿ ನಾನು ಅತ್ಯಂತ ಹೆಚ್ಚಿನ ಮತಗಳ ಅಂತರ ದಿಂದ ಗೆಲ್ಲುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೇಶ್ ವಿಶ್ವಾಸ ವ್ಯಕ್ತಪಡಿಸಿ ದರು.
ಅವರು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಚುನಾವಣೆ ಮುಗಿದಿದೆ. ಮುಖ್ಯವಾಗಿ ಶಾಂತಿ ಯುತವಾಗಿ ನಡೆದಿದೆ. ಜನರ ಪ್ರೀತಿಗೆ ಮೂಕವಿಸ್ಮಿತನಾಗಿದ್ದೇನೆ. ಪ್ರಚಾರಕ್ಕೆ ಹೋಗಿzಗ ಮತದಾ ರರು ನನ್ನನ್ನು ಆತ್ಮೀಯತೆಯಿಂದ ಬರಮಾಡಿಕೊಂಡು ನಾವು ನಿಮ್ಮೊ ಂದಿಗಿದ್ದೇವೆ ಎಂದು ಹೇಳಿದ್ದನ್ನು ಮರೆಯುವುದಿಲ್ಲ. ಮತದಾನ ಮುಗಿದ ಮೇಲೂ ಕೂಡ ನಾವು ನಿಮಗೆ ಮತಹಾಕಿದ್ದೇವೆ ಎಂದು ಮತದಾರರು ದೂರವಾಣಿ ಮೂಲಕ ತಿಳಿಸಿzರೆ ಎಂದರು.
ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಪರವಾಗಿ ಹಲಿರುಳು ಶ್ರಮಿಸಿzರೆ. ಪ್ರಚಾರ ಮಾಡಿzರೆ. ಕಾಂಗ್ರೆಸ್‌ನ ಪ್ರಣಾ ಳಿಕೆಯನ್ನು ಮನೆಮನೆಗೆ ತಲುಪಿಸಿ zರೆ. ಈ ಎಲ್ಲ ಕಾರಣಗಳಿಂದ ಮತ್ತು ಅಭಿವೃದ್ಧಿ ಹಾಗೂ ಶಾಂತಿ ಗಾಗಿ ಮತಗಳ ವಿಭಜನೆ ಇಲ್ಲದೆ ಮತ ಚಲಾಯಿಸಿzರೆ. ಗೆಲುವು ಖಚಿತ. ಇದಕ್ಕಾಗಿ ಮತದಾರರಿಗೆ, ಕಾರ್ಯಕರ್ತರಿಗೆ, ಜಿಡಳಿತಕ್ಕೆ, ಆಯೋಗಕ್ಕೆ. ಪೊಲೀಸರಿಗೆ ಧನ್ಯವಾದಗಳು ಎಂದರು.
ಜಿಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ಜಿ ಯ ಎ ಏಳು ಕ್ಷೇತ್ರಗಳಲ್ಲಿಯೂ ಗೆಲ್ಲುತ್ತೇವೆ.
ಒಂದೆರಡು ಕ್ಷೇತ್ರಗಳಲ್ಲಿ ಬಿಗಿ ಇರಬಹುದು. ಐದು ಕ್ಷೇತ್ರಗಳಲ್ಲಂತೂ ಗೆದ್ದೇ ಗೆಲ್ಲುತ್ತೇವೆ ಬಿಜೆಪಿ ದುರಾಡಳಿತದಿಂದ ಬೇಸತ್ತ ಜನರು ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕಿzರೆ. ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಈ ಬಾರಿ ಅಧಿಕಾರಿದ ಚುಕ್ಕಾಣಿ ಹಿಡಿಯುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನ ಕುಮಾರ್, ಎನ್. ರಮೇಶ್, ಎಸ್.ಕೆ. ಮರಿಯಪ್ಪ, ಇಸ್ಮಾ ಯಿಲ್ ಖಾನ್, ಎಲ್. ಸತ್ಯನಾ ರಾಯಣ ರಾವ್, ಎಸ್.ಪಿ. ದಿನೇಶ್, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮೇಹಕ್ ಶರೀಫ್, ಕಲೀಂ ಪಾಶಾ, ಶಮೀರ್ ಖಾನ್ ಮುಂತಾದವರು ಇದ್ದರು.