ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಈ ಗೆಲುವು ನಿಮ್ಮೆಲ್ಲರ ಗೆಲುವು;ನಾನು ಸದಾ ಕಾರ್ಯಕರ್ತರೆಲ್ಲರಿಗೂ ಆಭಾರಿ: ಶಾಸಕಿ ಶಾರದಾ ಪೂರ್‍ಯಾನಾಯ್ಕ

Share Below Link

ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವನ್ನು ಕಾರ್‍ಯಕರ್ತರ ಸಹಕಾರದೊಂದಿಗೆ ಮಾದರಿ ಕ್ಷೇತ್ರವನ್ನಾಗಿ ಮಾಡು ವುದಾಗಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯಾನಾಯ್ಕ ಹೇಳಿzರೆ.
ಅವರು ಇಂದು ನಗರದ ನೆಹರೂ ರಸ್ತೆಯಲ್ಲಿರುವ ಶಿವಪ್ಪ ನಾಯಕ ಸಿಟಿ ಸೆಂಟರ್ ಮಾಲ್ ಪಕ್ಕದ ಪಾಲಿಕೆ ಕಟ್ಟಡದ ಎರಡನೇ ಮಹಡಿಯಲ್ಲಿ ತಮ್ಮ ಅಧಿಕೃತ ಕಚೇರಿ ಉದ್ಘಾಟಿಸಿ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಮಾತನಾಡಿ ದರು.
ಈ ಬಾರಿಯ ಚುನಾವಣೆ ಯಲ್ಲಿ ಪಕ್ಷದ ಕಾರ್ಯಕರ್ತ ರೆಲ್ಲರೂ ಅತ್ಯಂತ ಉತ್ಸಾಹ ಮತ್ತು ಮೇಡಂ ಗೆಲ್ಲಲೇಬೇಕು ಎಂಬ ಛಲ ದಿಂದ ನನಗೆ ಜಯ ತಂದುಕೊ ಟ್ಟಿzರೆ. ಈ ಗೆಲುವು ನಿಮ್ಮೆಲ್ಲರ ಗೆಲುವು. ನಾನು ಸದಾ ಕಾರ್ಯ ಕರ್ತರೆಲ್ಲರಿಗೂ ಆಭಾರಿಯಾಗಿ ರುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ತಮ್ಮೆಲ್ಲರ ಸಲಹೆ, ಸಹಕಾರ ಪಡೆದು ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಇದು ನಿಮ್ಮ ಕಚೇರಿ. ಗೆದ್ದ ಮೇಲೆ ಎ ಪಕ್ಷದವರು ಕೂಡ ನನ್ನ ಕ್ಷೇತ್ರದವರೇ ಆಗಿದ್ದು, ಅವರ ಸೇವೆಗೆ ನಾನು ಸದಾ ಸಿದ್ಧ ಎಂದರು.

ನೀವು ಈಗ ನನಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದೀರಿ. ಗೆದ್ದ ಮೇಲೆ ಹಲವಾರು ಕಾರಣಗಳಿಂದ ಎಲ್ಲರನ್ನೂ ಭೇಟಿ ಮಾಡಲು ಸಾಧ್ಯವಾಗಿಲ್ಲ. ಹಂತಹಂತವಾಗಿ ಎ ಗ್ರಾಮಗಳಿಗೂ ಭೇಟಿ ನೀಡುತ್ತೇನೆ. ಸಮಸ್ಯೆಗಳನ್ನು ಆಲಿಸುತ್ತೇನೆ. ಗ್ರಾಮಸ್ಥರಿಗೆ ನಮ್ಮ ಕಾರ್ಯಕರ್ತರು ತಿಳಿ ಹೇಳಬೇಕು ಎಂದರು.
ಜೆಡಿಎಸ್ ಹಿರಿಯ ನಾಯಕ ಆಯನೂರು ಮಂಜುನಾಥ್ ಮಾತನಾಡಿ, ಶಾಸಕರ ಜೊತೆಗಿರು ವವರು ಕಾರ್ಯಕರ್ತರ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಳ್ಳ ಬೇಕು. ಅವರ ನೋವು-ನಲಿವಿಗೆ ಸ್ಪಂದಿಸಬೇಕು. ಶಾಸಕರ ಆಭರಣದ ರೀತಿಯಲ್ಲಿ ಅವರನ್ನು ಪ್ರೀತಿಸುವ ಕಾರ್ಯಕರ್ತರ ರಕ್ಷಣಾ ದೇವಾ ಲಯ ಈ ಕಚೇರಿಯಾಗಬೇಕು. ಸದಾ ಕಾಯಕ ಮಾಡುವ ಸ್ಥಳ ಆಗಬೇಕು ಎಂದರು.


ಈಗ ವಿಪಕ್ಷ ಸ್ಥಾನದಲ್ಲಿ ನಮ್ಮ ಶಾಸಕರಿರಬಹುದು. ಕೆಲಸ ಮಾಡಿಸಿಕೊಳ್ಳುವುದು ಸ್ಪಲ್ಪ ಕಷ್ಟವಾಗಬಹುದು. ಆದರೆ ಕ್ಷೇತ್ರದ ಅಗತ್ಯ ಕೆಲಸಗಳಿಗೆ ಸರ್ಕಾರ ಸ್ಪಂದಿಸದಿzಗ ಹೋರಾಟ ಮಾಡಿಯಾದರೂ ಜನತೆಯ ಮೂಲಭುತ ಸೌಕರ್ಯಗಳನ್ನು ಒದಗಿಸಬೇಕು ಎಂದರು.
ಹಿಂದಿನ ಶಾಸಕರಿರುವಾಗಿ ಬಹಳಷ್ಟು ಅಧ್ವಾನಗಳಾಗಿವೆ. ಏತನೀರಾವರಿ ಕಾಮಗಾರಿಗಳು ತಡವಾಗಿವೆ. ಮೂರು ದಿನದ ಹಿಂದೆಯಷ್ಟೇ ಬೂದಿಗರೆಗೆ ನೀರು ಬಂದಿದೆ ಇನ್ನೊಂದಿಷ್ಟು ನೀರಾವರಿ ಕೆಲಸಗಳು ಆಗಬೇಕಾಗಿವೆ. ನಿಮ್ಮೆ ಲ್ಲರ ಸಹಕಾರ ಇರಲಿ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಾಂತರಾಜ್, ಸತ್ಯನಾರಾಯಣ್, ಗೀತಾ ಸತೀಶ್, ಮಹದೇವಪ್ಪ, ಹನುಮಂತಪ್ಪ, ಕುಮಾರ ನಾಯ್ಕ, ಸತೀಶ್, ರಾಜಣ್ಣ, ಬಸವರಾಜ್, ಇನಾಯತ್, ರೇಣುಕಾ, ರಮೇಶ್, ಭೋಜ ನಾಯ್ಕ ಮತ್ತಿತರರಿದ್ದರು.