ಹೊನ್ನಾಳಿಯಲ್ಲಿ ಈ ಭಾರಿ ಕಾಂಗ್ರೆಸ್ ಗೆಲುವು ಅಚಲ: ಶಾಂತನಗೌಡ
ಹೊನ್ನಾಳಿ: ತಾಲೂಕಿನಲ್ಲಿ ಈ ಭಾರಿ ಸ್ಪಷ್ಟವಾಗಿ ಕಾಂಗ್ರೆಸ್ ಗಾಳಿ ಬಿಸುತ್ತಿದ್ದು ಕಾಂಗ್ರೆಸ್ ಗೆಲವು ಸಾಧಿಸಲಿದೆ ಪಕ್ಷದ ಅಭ್ಯರ್ಥಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ್ರು ಹೇಳಿದರು.
ನಾಮ ಪತ್ರ ಸಲ್ಲಿಕೆ ನಂತರದ ಮೊದಲ ಕಾರ್ಯಕರ್ತರ ಸಭೆ ಹಾಗೂ ಮಾಜಿ ಶಾಸಕ ಡಾ.ಡಿ.ಬಿ. ಗಂಗಪ್ಪ ಮುಖಂಡ ಅರಬಗಟ್ಟೆ ರಮೇಶ್ ಸೇರಿದಂತೆ ಇತರರನ್ನು ಪಕ್ಷ ಸೆರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು ೧೯೮೯ ರಿಂದ ೯೪ ರ ಅವದಿಯಲ್ಲಿ ಕಾಂಗ್ರೆಸ್ ಪಕ್ಷ ಶಾಸಕರಾಗಿದ್ದ ಡಾ. ಡಿ.ಬಿ.ಗಂಗಪ್ಪನವರು ಕಾರಣಾಂ ತರದಿಂದ ಪಕ್ಷ ತೊರೆದಿದ್ದರು ಈಗ ಮರಳಿ ಗೂಡಿಗೆ ಎಂಬಂತೆ ಮೂಲ ಕಾಂಗ್ರೆಸ್ ಪಕ್ಷದ ಸಿzಂತವನ್ನು ಒಪ್ಪಿ ಸೆರ್ಪಡೆಗೊಂಡರು, ಅದೇ ರಿತಿ ೧೯ ವರ್ಷದಿಂದ ಉಸಿರು ಗಟ್ಟವ ವಾತವಾರಣದಲ್ಲಿz ಎನ್ನು ವ ಅರಬಗಟ್ಟೆ ರಮೇಶ್ ಸೇರಿದಂತೆ ಇನ್ನಿತರೆ ಮುಖಂಡರು ಬಿಜೆಪಿ ತೊರೆದ ಕಾಂಗ್ರೆಸ್ ಪಕ್ಷವನ್ನು ಸೆರ್ಪಡೆಗೊಂಡರು ಇದರಿಂದ ಪಕ್ಷಕ್ಕೆ ಬಲ ಬಂದಿದೆ ಎಂದರು.
![](https://i0.wp.com/hosanavika.com/wp-content/uploads/2023/04/00-wanted.gif?resize=223%2C335&ssl=1)
ತಾಲೂಕಿನ ನಾಲ್ಕು ಗಡಿ ಭಾಗಗಳಾದ ಕುಂದೂರು, ನ್ಯಾಮತಿ, ಸಾಸ್ವೆಹಳ್ಳಿ,ಬೆಳಗುತ್ತಿ ದಿಕ್ಕುಗಳಲ್ಲಿ ಪ್ರಚಾರ ಆರಂಭಿ ಸಲಾಗುವುದು ನಂತರದ ದಿನಗ ಳಲ್ಲಿ ತಾಲೂಕಿನ ಎ ಗ್ರಾಮ ಗಳಿಗೆ ಬೇಟಿ ನೀಡಿ ಮನೆ-ಮನೆಗೆ ತೆರಳಿ ಪ್ರಚಾರ ಮಾಡಲಾಗುವುದು.
ಮಾಜಿ ಶಾಸಕ ಡಾ.ಡಿ.ಬಿ. ಗಂಗಪ್ಪ ಮಾತನಾಡಿ ತುಮಕೂ ರಿನ ನಮ್ಮ ನೊಳಂಬ ಸಮಾಜದ ಮುಖಂಡ ಹಾಗೂ ಸಂಸದ ಜಿ.ಎಸ್.ಬಸವರಾಜ್,ದಾವಣಗೆರೆ ಸಂಸದ ಸಿzಶ್ವರ, ರೇಣುಕಾ ಚಾರ್ಯ ಅವರು ನನ್ನ ಬಳಿ ಬಂದು ಬಿ.ಎಸ್.ವೈ ಕರೆ ಮೇರೆಗೆ ಬಿಜೆಪಿ ಬೆಂಬಲಿಸುವಂತೆ ಹಾಗೂ ಪಕ್ಷಕ್ಕೆ ಬರಮಾಡಿಕೊಂಡಿದ್ದರಿಂದ ಬಿಜೆಪಿ ಕಡೆ ಮುಖಮಾಡ ಬೇಕಿದ್ದಿತ್ತು ೧೩ ವರ್ಷದಲ್ಲಿ ಬಿಜೆಪಿಯಲ್ಲಿದ್ದ ನನ್ನನ್ನೂ ರೇಣುಕಾಚಾರ್ಯರು ನನ್ನ ಸ್ವಗ್ರಾಮ ಕೆಂಚಕೊಪ್ಪದಲ್ಲಿ ನಡೆದ ನಮ್ಮ ಸಮಾಜದ ಸಭೆಗೆ ಕರೆಯದೆ ನ್ಯಾಮತಿ ನಮ್ಮ ಮನೆ ಪಕ್ಕ ಕಲ್ಯಾಣ ಮಂದಿರದಲ್ಲಿ ಪಕ್ಷದ ಸಭೆ ಆಹ್ವಾನಿಸದೆ ಹಾಗೂ ಹೊನ್ನಾಳಿಯಲ್ಲಿನ ಅನೇಕ ಕಾರ್ಯಕ್ರಮಗಳಿಗೆ ಕರೆಯದೆ ನಿಕೃಷ್ಠವಾಗಿ ಕಂಡಿದ್ದರಿಂದ ಮರಳಿ ಗೂಡಿಗೆ ಎಂಬಂತೆ ಕಾಂಗ್ರೆಸ್ ಸೇರಿಧ್ಯಾಗೂ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದ ಜಿಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿರುವುದು ಗಮನಿಸಿದರೆ ಪಕ್ಷಕ್ಕೆ ಬಲ-ಶಕ್ತಿ ಬಂದಿದೆ ಹೆಚ್ಚು ಆತ್ಮವಿಶ್ವಸ ದೊಂ ದಿಗೆ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಹಾಗೂ ತಾಲೂಕಿನಲ್ಲಿ ಭ್ರಷ್ಟಚಾರ ವನ್ನು ಮಟ್ಟಹಾಕಲು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವಂತೆ ಕಾರ್ಯ ಕರ್ತರಲ್ಲಿ ಮನವಿ ಮಾಡಿದರು.
ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆ: ಮಾಜಿ ಶಾಸಕ ಡ.ಡಿ.ಬಿ.ಗಂಗಪ್ಪ,ಅರಬಗಟ್ಟೆ ರಮಶ್, ಕೆಂಚಿಕೊಪ್ಪ ಉತ್ತೇಶ್ ಗದ್ದಿಗೆಪ್ಪ, ಪರಮೇಶ್ವರಪ್ಪ, ಜೀನಹಳ್ಳಿ ಶಂಕರಪ್ಪ,ಮಾದನ ಬಾವಿ ಕೆಂಪಣ್ಣ ಸೇರಿದಂತೆ ಹತ್ತಾರು ಕಾರ್ಯಕರ್ತರು ಪಕ್ಷಕ್ಕೆ ಸೆರ್ಪಡೆಗೊಂ ಡರು.ಈ ಸದರ್ಭದಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಶಿವಯೋಗಿ,ಸಾಸ್ವೆಹಳ್ಳಿ ಘಟಕದ ಅಧ್ಯಕ್ಷ ಆರ್.ನಾಗಪ್ಪ,ನ್ಯಾಮತಿ ಘಟಕದ ಅಧ್ಯಕ್ಷ ದೊಡ್ಡೇರಿ ವಿಶ್ವ ನಾಥ್,ಮುಖಂಡರಾದ ಬಿ.ಸಿದ್ದಪ್ಪ, ಹನುಮನಹಳ್ಳಿ ಬಸವ ರಾಜಪ್ಪ,ಜಗದೀಶ್, ಶಂಕರ ಮೂರ್ತಿ, ಕೆಂಗಲಹಳ್ಳಿ ಷಣ್ಮು ಖಪ್ಪ, ಹೆಚ್.ಎ.ಉಮಾಪತಿ, ಎಂ.ರಮೇಶ್, ಮಧುಗೌಡ, ಕಡದಕಟ್ಟೆ ಬಸವನಗೌಡ್ರು, ಮಹಿಳಾ ವಿಕ್ಷಕ ಪರಿಣಿತಿ ಮಹಿಳಾ ತಾಲೂಕು ಅಧ್ಯಕ್ಷೆ ಪುಷ್ಪರವೀಶ್, ಮನೋಜ್ವಾಲಜ್ಜಿ, ಪ್ರಶಾಂತ ಬಣ್ಣಜ್ಜಿ ಸೇರಿದಂತೆ ಕಾರ್ಯ ಕರ್ತರು ಇದ್ದರು.
![](https://i0.wp.com/hosanavika.com/wp-content/uploads/2023/04/123.gif?resize=447%2C633&ssl=1)
![](https://i0.wp.com/hosanavika.com/wp-content/uploads/2023/04/2.gif?resize=800%2C625&ssl=1)
![](https://i0.wp.com/hosanavika.com/wp-content/uploads/2023/04/1-1.gif?resize=800%2C705&ssl=1)