ಜಿಲ್ಲಾ ಸುದ್ದಿತಾಜಾ ಸುದ್ದಿ

ದೇಶಸೇವೆಗಿಂತ ಮಿಗಿಲಾದ ಸೇವೆ ಮತ್ತೊಂದಿಲ್ಲ…

Share Below Link

ಶಿವಮೊಗ್ಗ : ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರತಿ ಮನೆಯಲ್ಲೂ ಯೋಧ ಇರಬೇಕು. ದೇಶಸೇವೆಗಿಂತ ಮಿಗಿಲಾದ ಸೇವೆ ಮತ್ತೊಂದಿಲ್ಲ ಎಂದು ನಿವೃತ್ತ ಯೋಧ ಆರ್.ಕುಮಾರನಾಯ್ಕ ಹೇಳಿದರು.
ನಗರದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಯ ವಿವಿಧ ಸಂಘ ಸಂಸ್ಥೆಗಳು ಯೋಧ ರನ್ನು ಸ್ವಾಗತಿಸಿ ಗೌರವಿಸಿ ಅಭಿನಂದಿ ಸುತ್ತಿರುವುದು ಸಂತಸದ ಸಂಗತಿ ಯಾಗಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಕುಮಾರನಾಯ್ಕ ಅವರ ಕುಟುಂಬದಲ್ಲಿ ಇಬ್ಬರು ದೇಶ ಸೇವೆಯಲ್ಲಿ ನಿರತರಾಗಿದ್ದು, ಸೇನೆ ಯಲ್ಲಿ ಕೆಲಸ ಮಾಡಿzರೆ. ನಿವೃತ್ತ ಸೈನಿಕರಿಗೆ ಸರ್ಕಾರ ಅಗತ್ಯ ಸೌಲಭ್ಯ ಗಳನ್ನು ಒದಗಿಸಬೇಕು ಎಂದು ಅಭಿಪ್ರಾಯಪಟ್ಟರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಕುಮಾರನಾಯ್ಕ ಅವರು ಶಿವಮೊಗ್ಗ ಜಿಯವರು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಅವರ ಸೈನ್ಯದ ಸೇವೆ ಯುವಜನತೆಗೆ ಮಾದರಿ ಆಗಬೇಕು. ಸೇನೆಯಲ್ಲಿ ಸೇವೆ ಸಲ್ಲಿಸುವವರಿಗೆ ವಿಶೇಷ ಸೌಕರ್ಯ ಗಳಿವೆ ಎಂಬುದನ್ನು ಅರಿತುಕೊಳ್ಳ ಬೇಕು ಎಂದು ತಿಳಿಸಿದರು.
ಸೇನೆಯಲ್ಲಿ ಕೆಲಸ ಮಾಡಲು ಯುವಜನತೆ ಹಿಂದೇಟು ಹಾಕುತ್ತಿ zರೆ. ದೇಶಕ್ಕಾಗಿ ಕೆಲಸ ಮಾಡುವ ಮನೋಭಾವವನ್ನು ಯುವಜನರು ಬೆಳೆಸಿಕೊಳ್ಳಬೇಕು ಎಂದರು. ಇಂಡೋ ಟಿಬೆಟಿಯನ್ ಬಾರ್ಡರ್‌ನಲ್ಲಿ ೨೧ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತ ರಾಗಿರುವ ಬೀರನಕೆರೆ ಗ್ರಾಮದ ಯೋಧ ಆರ್.ಕುಮಾರನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಶಿವಮೊಗ್ಗ ಪೂರ್ವ ನಿಯೋಜಿತ ಕಾರ್ಯದರ್ಶಿ ಶಶಿಕಾಂತ ನಾಡಿಗ್, ಮಾಜಿ ಅಧ್ಯಕ್ಷ ಮಂಜುನಾಥ ಕದಂ, ಸಂತೋಷ್, ಬಸವರಾಜ್, ಚಂದ್ರನಾಯ್ಕ್, ಓಂಕಾರನಾಯ್ಕ್, ಗಣೇಶನಾಯ್ಕ್, ಕುಜೇಂದ್ರನಾಯ್ಕ್ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.