ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕಾನೂನಿನ ಅeನ ಪ್ರಕರಣ ಹೆಚ್ಚಳಕ್ಕೆ ಕಾರಣ : ನ್ಯಾ.ನಾಯಕ್

Share Below Link

ಶಿವಮೊಗ್ಗ : ಕಾನೂನಿನ ಅeನದಿಂದ ಶೇ.೭೫ ಪ್ರಕರಣಗಳು ದಾಖಲಾದರೆ ಶೇ.೨೫ ದ್ವೇಷ ಮನೋಭಾವದಿಂದ ದಾಖಲಾಗು ತ್ತವೆ. ಆದ್ದರಿಂದ ಎಲ್ಲರೂ ಕಾನೂನಿನ ಅರಿವು ಹೊಂದುವುದು ಹಾಗೂ ಪ್ರೀತಿ-ವಿಶ್ವಾಸದಿಂದ ಬದುಕುವುದು ಅತ್ಯವಶ್ಯವಾಗಿದೆ ಎಂದು ಪ್ರಧಾನ ಜಿ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿ ಕಾನುನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ಅಭಿಪ್ರಾಯಪಟ್ಟರು.
ಜಿ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಸೇವಾ ಯೋಜನಾ ವಿಭಾಗ ಐಕ್ಯುಎಸಿ, ಜಿ ವಕೀಲರ ಸಂಘ ಶಿವಮೊಗ್ಗ ಇವರ ಆಶ್ರಯದಲ್ಲಿ ಎಟಿನ್‌ಸಿಸಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದಿನನಿತ್ಯ ನಾವು ಕಾನೂನನ್ನು ಪಾಲಿಸಬೇಕು ಕಾನೂನಿನ ಅರಿವು ಮತ್ತು eನದಿಂದ ನಾವು ಎಷ್ಟೋ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ದಾಖಲಾತಿಗಳಾದ ಜನ್ಮ ದಿನಾಂಕ, ಜತಿ, ಪ್ರವರ್ಗ ಇತರೆ ದಾಖಲಾತಿ ಗಳನ್ನು ಈಗಲೇ ಪರಿಶೀಲಿಸಿ ಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಆದ ನಂತರ ದಾಖಲಾತಿಗಳಲ್ಲಿ ದೋಷ ಕಂಡುಬಂದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ಡಿಕ್ರಿ ಪಡೆಯಬೇಕಾಗುತ್ತದೆ. ಆದ್ದರಿಂದ ಈಗಲೇ ಪರಿಶೀಲಿಸಿ ಕೊಳ್ಳಬೇಕು. ವಾಹನ ಚಾಲನ ಪರವಾನಗಿ ಪಡೆದುಕೊಂಡು, ವಿಮೆಯನ್ನು ಮಾಡಿಸಿದ ನಂತರ ವಾಹನ ಚಾಲನೆ ಮಾಡಬೇಕು ಎಂದರು.


ಸಿವಿಲ್ ಪ್ರಕರಣಗಳನ್ನು ವರ್ಷಾನುಗಟ್ಟಲೆ ನಡೆಸಲಾಗುತ್ತದೆ, ಕ್ರಿಮಿನಲ್ ಪ್ರಕರಣಗಳಲ್ಲಿ ತಪ್ಪಿತಸ್ಥರಲ್ಲದವರಿಗೆ ಶಿಕ್ಷೆಯಾಗುತ್ತ ದೆಂಬ ಅಪವಾದ ನ್ಯಾಯಾಲಯ ಗಳಿಗಿದೆ. ಆದರೆ ಕಾನೂನು ರಚಿಸುವುದು ಜನಪ್ರತಿನಿಧಿಗಳು, ನ್ಯಾಯಾಲಯಗಳು ಅವನ್ನು ಜರಿಗೊಳಿಸುತ್ತವಷ್ಟೆ. ಆದ್ದರಿಂದ ಉತ್ತಮ ನಾಯಕರನ್ನು ಆರಿಸಬೇಕು. ನ್ಯಾಯ ವಿಳಂಬಕ್ಕೆ ಮುಖ್ಯ ಕಾರಣ ನಮ್ಮ ಕಾನೂನು. ಬ್ರಿಟಿಷ್ ಕಾಲದ ಕಾನೂನುಗಳೇ ಇನ್ನೂ ಜಾರಿಯಲ್ಲಿವೆ. ೧೮೬೦ರ ಐಪಿಸಿ, ೧೮೭೨ರ ಎವಿಡೆನ್ಸ್ ಕಾಯ್ದೆ ಇತರೆ. ನಮಗೆ ನಮ್ಮದೇ ನೆಲದ, ಸಂಸ್ಕೃತಿಯ ಕಾನೂನು ಬೇಕು. ಪ್ರಸ್ತುತ ಸರ್ಕಾರ ಇದನ್ನು ಮನವರಿಕೆ ಮಾಡಿಕೊಂಡು ಹೊಸ ಕಾನೂನುಗಳನ್ನು ರಚಿಸಿ ಲೋಕಸಭೆಗೆ ಮಂಡಿಸಿದೆ. ಚರ್ಚೆ ನಂತರ ಜಾರಿಗೆ ಬರುವುದು ಎಂದರು.
೧೯೪೫ರ ನ.೯ರಂದು ರಚನೆ ಯಾದ ಕಾನೂನು ಸೇವಾ ಸಮಿತಿ ಸ್ಮರಣಾರ್ಥ ನ.೯ ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಆಚರಿಸಲಾಗುತ್ತಿದೆ. ಸಂಕಷ್ಟ ದಲ್ಲಿರುವವರು, ದುರ್ಬಲರು, ಅಗತ್ಯವಿರುವವರೆಲ್ಲ ಕಾನೂನು ಸೇವಾ ಪ್ರಾಧಿಕಾರದ ಸೌಲಭ್ಯಗಳನ್ನು ಪಡೆಯಬೇಕೆಂದು ಕರೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀ ಶರು ಹಾಗೂ ಜಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದನ್ ಸಿ.ಎನ್ ಮಾತನಾಡಿ, ವಾಸ್ತವಾಂಶಗಳ ಅeನಕ್ಕೆ ಕ್ಷಮೆ ಇದೆ. ಆದರೆ ಕಾನೂನಿನ ಕುರಿತಾದ ಅeನಕ್ಕೆ ಕ್ಷಮೆ ಇಲ್ಲ. ಆದ್ದರಿಂದ ಎಲ್ಲರೂ ಈ ನೆಲದ ಕಾನೂನನ್ನು ತಿಳಿದುಕೊಳ್ಳ ಬೇಕು. ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹಳ್ಳಿಗಳಲ್ಲಿ, ಸಮುದಾಯಗಳು, ಶಾಲಾ- ಕಾಲೇಜು ಗಳಲ್ಲಿ ಅನೇಕ ಕಾನೂನು ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಭ್ರೂಣದಿಂದ ಹಿಡಿದು ಸಾವಿನ ನಂತರವೂ ನಮಗೆಲ್ಲ ಕಾನೂನುಗಳು ಅನ್ವಯವಾಗುತ್ತವೆ. ಆದ್ದರಿಂದ ಎಲ್ಲರೂ ಕಾನೂನನ್ನು ತಿಳಿದಿರಲೇಬೇಕು. ವಿದ್ಯಾರ್ಥಿ ಗಳಾದ ನೀವು ಕಾನೂನಿನ ಅರಿವನ್ನು ಪರಿಣಾಮಕಾರಿಯಾಗಿ ಸುತ್ತಮುತ್ತ ಲಿನವರಿಗೆ ತಿಳಿಸಬಹುದಾಗಿದ್ದು ಕಾನೂನಿನ ಅರಿವನ್ನು ಹರಡುವ ವೈರಸ್‌ಗಳಾಗಬೇಕು. ಕಾಯ್ದೆಗಳನ್ನು ಜನರಿಗೆ ತಲುಪಿಸುವಲ್ಲಿ ವ್ಯವಸ್ಥೆ ಮತ್ತು ಜನರ ನಡುವಿನ ಸೇತುವೆಯಾಗಬೇಕು ಎಂದರು.
ಕಾನೂನು ಸೇವಾ ಪ್ರಾಧಿಕಾರವು ಜಿ, ತಾಲ್ಲೂಕು ಮಟ್ಟದಲ್ಲಿ ಉಚಿತ ಕಾನೂನು ಅರಿವು ಮತ್ತು ನೆರವು ನೀಡುತ್ತಿದೆ. ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಮಹಿಳಾ ಮತ್ತು ಮಕ್ಕಳು, ಭಿಕ್ಷುಕರು, ಅಂಗವೈಫಲ್ಯ ಹೊಂದಿರುವವರು, ಬಾಲ ಅಪರಾಧಿಗಳು, ಕಾರ್ಖಾನೆ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕಾ ವಿನಾಶ ಮುಂತಾದವುಗಳಿಗೆ ತುತ್ತಾದವರು, ವಾರ್ಷಿಕ ಆದಾಯ ೩ ಲಕ್ಷಗಳಿಗಿಂತ ಕಡಿಮೆ ಇರುವ ಎ ವರ್ಗದ ನಾಗರೀಕರು ಉಚಿತವಾದ ಕಾನೂನಿನ ಸಲಹೆ ಮತ್ತು ನೆರವನ್ನು ಹಾಗೂ ಆಸಿಡ್ ದಾಳಿಗೆ ಒಳಗಾದ ವ್ಯಕ್ತಿಗಳು ಮತ್ತು ಇನ್ನಿತರೆ ಗಲಭೆ ಗಳಿಂದ ನೊಂದ ಸಂತ್ರಸ್ಥರು ಪರಿಹಾರ ಪಡೆಯಲು ಅರ್ಹ ರಿದ್ದು, ಜಿ ಕಾನೂನು ಸೇವಾ ಪ್ರಾಧಿಕಾರ/ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಕಡೆಯಿಂದ ಮಾಹಿತಿ ಪಡೆದು ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳ ಬೇಕೆಂದು ಅವರು ತಿಳಿಸಿದರು.
ಎಟಿಎನ್‌ಸಿಸಿ ಕಾಲೇಜಿನ ಪ್ರಾಂಶುಪಾಲರಾದ ಮಮತ ಪಿ ಆರ್ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶಾಲಾ- ಕಾಲೇಜು ದಾಖಲಾತಿಗಳನ್ನು ಸರಿಯಾಗಿರಿಸಿಕೊಳ್ಳಬೇಕು. ಎಲ್ಲಿ ಏನು ಮಾಡಬೇಕು ಮತ್ತು ಮಾಡಬಾರದೆಂಬ eನವಿರಬೇಕು. ವಾಹನ ಚಾಲನ ಪರವಾನಗಿ, ವಿಮೆ, ಎಮಿಷನ್ ಪರೀಕ್ಷಾ ವರದಿ ಇಟ್ಟುಕೊಳ್ಳಬೇಕು. ಕಾನೂನನ್ನು ಎಂದಿಗೂ ಕೈಗೆ ತೆಗೆದುಕೊಳ್ಳಬಾರದು. ಎಲ್ಲರನ್ನೂ ಪ್ರೀತಿ, ಗೌರವದಿಂದ ಕಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕೆಂದು ಕರೆ ನೀಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ರಾದ ಪ್ರೊ.ಎಸ್.ಜಗದೀಶ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ.ಕೆ.ಎಂ ನಾಗರಾಜು, ಇಂಗ್ಲಿಷ್ ಉಪನ್ಯಾಸಕ ಅಂಜನ್, ವಾರ್ತಾ ಸಹಾಯಕರಾದ ಭಾಗ್ಯ ಎಂ.ಟಿ ಉಪಸ್ಥಿತರಿದ್ದರು.