ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನೂತನ ಕಾನೂನುಗಳು ಸುರಕ್ಷಾ ಸಮಾಜ ನಿರ್ಮಾಣಕ್ಕೆ ಸಹಾಯಕವಾಗಲಿದೆ…

Share Below Link

ದಾವಣಗೆರೆ : ದೇಶದಲ್ಲಿ ಜಾರಿಯಾಗಿರುವ ೩ ನೂತನ ಕಾನೂನುಗಳು ಸಮಾಜ ದಲ್ಲಿ ಬದಲಾವಣೆ ತಂದು ಸುರಕ್ಷತೆಯ ಸಮಾಜ ನಿರ್ಮಾಣ ಮಾಡುವಲ್ಲಿ ಸಹಾಯಕ ಆಗಲಿವೆ ಎಂದು ಭಾರತದ ಲೋಕಪಾಲ ನ್ಯಾಯಾಂಗ ಸದಸ್ಯರೂ, ಹಿಮಾಚಲ ಪ್ರದೇಶದ ಉಚ್ಛ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳೂ ಆದ ಎಲ್. ನಾರಾಯಣಸ್ವಾಮಿ ಅಭಿಪ್ರಾಯ ಪಟ್ಟರು.


ಜಿ ವಕೀಲರ ಸಂಘದಿಂದ ನಗರದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷ ಸಂಹಿತೆ, ಭಾರತೀಯ ಸಾಕ್ಷಿ ಅಧಿನಿಯಮ-೨೦೨೩ ಕುರಿತು ಆಯೋಜಿಸಿದ್ದ ಉಪನ್ಯಾಸ ಮಾಲಿಕೆ -೯ನ್ನು ಉದ್ಘಾಟಿಸಿ, ಜಿ ವಕೀಲರ ಸಂಘ ಹೊರತಂದಿರುವ ನೂತನ ಕಾಯಿದೆಗಳ ಕೈಪಿಡಿಯನ್ನು ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.
ನಮ್ಮ ದೇಶದ ಸಂಸತ್ತಿನ ಮೂಲಕ ನಮ್ಮ ದೇಶದಲ್ಲಿ ನೂತನ ಕಾನೂನುಗಳನ್ನು ಜರಿಗೆ ತರಲಾಗಿದೆ. ಹಾಗಾಗಿ ಇವುಗಳ ಜರಿ ಹಾಗೂ ಪಾಲನೆ ಮಾಡು ವುದು ನಮ್ಮೆಲ್ಲರ ಜವಾಬ್ದಾರಿ. ವಿದೇಶಗಳಲ್ಲಿ ಗಮನಿಸಿದರೆ ಅಲ್ಲಿನ ಶಿಕ್ಷೆಯ ಪ್ರಮಾಣ ಶೇ.೯೦ರಷ್ಟು ಇದೆ. ನಮ್ಮಲ್ಲಿ ಶಿಕ್ಷೆಯ ಪ್ರಮಾಣ ತೀರಾ ಕಡಿಮೆ. ಕಾರಣ ಹಳೇ ಬೇರು ಹೊಸ ಚಿಗುರು ಸೇರಿ ಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲಿ ಎಂದು ಹಾರೈಸಿದರು.
ದೇಶದಲ್ಲಿ ಈಗಾಗಲೇ ಹಲ ವಾರು ಕ್ರಿಮಿನಲ್ ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಇದನ್ನು ಯಾರು ಮಾಡಿ zರೆ ಎನ್ನುವ ಬಗ್ಗೆ ಚಿಂತನೆ ನಡೆಸುವ ಬದಲು ಅವುಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿ ಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಧೀ ಶರು, ನ್ಯಾಯವಾದಿಗಳು ಮುಂದಾ ಗಬೇಕಿದೆ ಎಂದು ಕರೆ ನೀಡಿದರು.
ಆದರೆ, ಇಲ್ಲಿ ನಮಗೆ ಎದುರಾಗುವ ಪ್ರಶ್ನೆಯೆಂದರೆ, ನಮ್ಮ ಕಾನೂನುಗಳು ವಿಫಲವಾಗಿವೆಯೇ ಎನ್ನುವುದು. ನಾವೇನು ಮಾಡ ಬೇಕು ಎನ್ನುವುದಾದರೆ ಒಂದು ವೇಳೆ ಕಾನೂನಿನಲ್ಲಿ ಕೆಲ ಬದಲಾ ವಣೆ ತರಲು ತಿದ್ದುಪಡಿ ಅಗತ್ಯವಾಗಿ ರುತ್ತದೆ. ನಮ್ಮ ನ್ಯಾಯಾಂಗವು ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಮುಂದಾಗಿದ್ದು, ಅದರ ಪ್ರಮಾಣ ಅರಿಯಬೇಕಿದೆ. ನಮ್ಮಲ್ಲಿ ಶೇ.೫೦ ಕ್ಕಿಂತಲೂ ಶಿಕ್ಷೆಯ ಪ್ರಮಾಣ ಕಡಿಮೆ ಇದೆ ಎಂದರು.
ನ್ಯಾಯ ಕೊಡಿಸುವಲ್ಲಿ ವಿಳಂಬ ವಾದರೆ ನಾವುಗಳು ಅಭಿಯೋಜನೆ ವಿಫಲವೇ, ತನಿಖೆ ವಿಫಲವೇ, ನ್ಯಾಯವಾದಿಗಳು ವಿಫಲವೇ ಅಥವಾ ನ್ಯಾಯಾಧೀಶರು ನ್ಯಾಯದಾನ ಮಾಡುವಲ್ಲಿ ವಿಫಲ ರಾಗಿzರೆಯೇ, ಇದಲ್ಲದೇ ಆರ್ಟಿಕಲ್‌ಗಳು ವಿಫಲವಾಗಿವೆ ಎನ್ನುವ ಚಿಂತನೆ ನಡೆಸಬೇಕು. ಈಗ ಹೊಸ ಕಾನೂನುಗಳು ಇಂತಹ ಚಿಂತನೆಯನ್ನು ತೊಡೆದು ಹಾಕಲಿವೆ. ನ್ಯಾಯಾಂಗಕ್ಕೆ ಸಹಕಾರಿ ಆಗಲಿವೆ ಎಂದು ಹೇಳಿದರು.
ಈ ಅಧಿನಿಯಮಗಳು ಶಿಕ್ಷೆಯ ಪ್ರಮಾಣವನ್ನು ಅಪರಾಧಿಗಳಿಗೆ ತಿಳುವಳಿಕೆ ನೀಡುವ ರೀತಿಯಲ್ಲಿ ಇರಬೇಕು. ಅಲ್ಲದೇ ಜತೆಯಲ್ಲಿ ಅಪರಾಧ ಮಾಡಿದ ಆರೋಪಿಗಳಿಗೆ ಶಿಕ್ಷೆಯನ್ನು ಕೊಡಿಸುವ ಮೂಲಕ ಶಿಕ್ಷೆಯ ಪ್ರಮಾಣ ಹೆಚ್ಚಳ ಮಾಡಿ ದಾಗ ಮಾತ್ರ ಈ ನೂತನ ಕಾನೂನು ಗಳಿಗೆ ಮಹತ್ವ ಬರಲಿದೆ. ಒಂದು ವೇಳೆ ಶಿಕ್ಷೆ ದೊರೆಯುವ ಪ್ರಕರಣ ಗಳಲ್ಲಿ ವಕೀಲರಿಂದ, ನ್ಯಾಯಾಂಗ ದಿಂದ ವಿಳಂಬವಾದರೆ ಅವುಗಳೇ ಹೊಣೆಯಾಗಲಿವೆ. ಆದರೆ, ಪ್ರಯೋಗಾತ್ಮಕವಾಗಿ ೫ ವರ್ಷ ಜರಿಗೆ ತಂದು ಶಿಕ್ಷೆಯ ಪ್ರಮಾಣ ಹಿಂದಿನಂತೆಯೇ ಇದ್ದರೆ ಇಂತಹ ತಿದ್ದುಪಡಿಗಳಿಂದ ಏನು ಪ್ರಯೋಜನ ಎಂದು ಪ್ರಶ್ನೆ ಮಾಡ ಬಹುದು. ನಮ್ಮಲ್ಲಿನ ವ್ಯವಸ್ಥೆಯಲ್ಲಿ ತುಂಬಾ ಬದಲಾವಣೆ ಆಗಿದ್ದು, ಸಂವಿಧಾನದಲ್ಲೂ ಬೇಡಿಕೆಗೆ ತಕ್ಕಂತೆ ಹಲವು ತಿದ್ದುಪಡಿ ಆಗಿವೆ ಎಂದು ಸ್ಪಷ್ಟನೆ ನೀಡಿದರು.


ಪ್ರಧಾನ ಜಿ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಮಾತನಾಡಿ, ಸರಳತೆ, ಸಾಮಾಜಿಕ ಕಳಕಳಿ, ವಕೀಲರ ಬಗ್ಗೆ ಕಳಕಳಿ ಹೊಂದಿರುವ ನಿವೃತ್ತ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರ ಆದರ್ಶ ಗಳನ್ನು ನಾವೆಲ್ಲರೂ ಮೈಗೂಡಿಸಿ ಕೊಳ್ಳಬೇಕು. ವಕೀಲರ ಬಗ್ಗೆ ಸದಾ ಚಿಂತನೆ ಮಾಡುವ, ಅವರ ಏಳಿಗೆಗೆ ಕೈ ಜೋಡಿಸುವ ನಿಟ್ಟಿನಲ್ಲಿ ಸದಾ ಸಿದ್ದರಿzರೆ. ನೂತನ ಮೂರು ಕಾಯಿದೆಗಳ ಬಗ್ಗೆ ತಿಳಿದುಕೊಳ್ಳಲು ಮುಂಬರುವ ದಿನಗಳಲ್ಲಿ ಕಾರ್ಯಾ ಗಾರ ನಡೆಸಲಾಗುವುದು. ನೂತನ ಕಾಯಿದೆಗಳು ಎಲ್ಲರಿಗೂ ಅನುಕೂಲ ಆಗಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದ ಜಿ ವಕೀಲರ ಸಂಘದ ಅಧ್ಯಕ್ಷ ಎಲ್. ಹೆಚ್. ಅರುಣ್ ಕುಮಾರ್, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುವ ವಕೀಲರಿಗೆ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶದ ವಕೀಲರಿಗೆ ಅಪಘಾತ, ಕಾಯಿಲೆಗಳು ಎದುರಾ ದಾಗ ಅವರ ಕುಟುಂಬಗಳು ಹಲವಾರು ಸಂಕಷ್ಟಗಳನ್ನು ಎದುರಿ ಸಿವೆ. ಈ ನಿಟ್ಟಿನಲ್ಲಿ ಲೋಕಪಾಲ ನ್ಯಾಯಾಂಗ ಸದಸ್ಯರು ರಾಜ್ಯ ವಕೀಲರ ಸಂಘದೊಂದಿಗೆ ಚರ್ಚಿಸಿ, ಮರಣೋತ್ತರವಾಗಿ ನೀಡುವ ಸಹಾಯಧನದ ಮೊತ್ತ ವನ್ನು ಹೆಚ್ಚಳ ಮಾಡಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿ ಗಳಾಗಿ ೧ನೇ ಹೆಚ್ಚುವರಿ ಜಿ ಮತ್ತು ಸತ್ರ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯ ನವರ, ೨ನೇ ಹೆಚ್ಚುವರಿ ಜಿ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಎನ್.ಪ್ರವೀಣ್‌ಕುಮಾರ್ ಹಾಗೂ ಜಿ ಮತ್ತು ಸತ್ರ ನ್ಯಾಯಾಧೀಶರೂ, ಎಸ್‌ಟಿಎಫ್‌ಸಿ ಆದ ಶ್ರೀರಾಮ ನಾರಾಯಣ ಹೆಗಡೆ ಉಪಸ್ಥಿತರಿದ್ದರು.
ಇದೇ ವೇಳೆ ವಕೀಲರಾದ ಚಂದ್ರಪ್ಪ, ಎಸ್.ಪರಮೇಶ್, ಕಾರ್ಯಕಾರಿ ಸಮಿತಿ ಸದಸ್ಯೆ ಎಸ್.ಭಾಗ್ಯಲಕ್ಷ್ಮಿ, ಬ್ಯಾಂಕ್ ಫಿಲ್ಡ್ ಆಫೀಸರ್ ರೇಣುಕಯ್ಯ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ನಂತರ ಅಪಘಾತದಲ್ಲಿ ಮೃತಪಟ್ಟ ವಕೀಲ ನಿಂಗಪ್ಪರ ವಾರಸುದಾರರಿಗೆ ಮರಣೋತ್ತರ ಪರಿಹಾರ ನಿಧಿಯನ್ನು ನ್ಯಾಯಮೂರ್ತಿಗಳಿಂದ ವಿತರಿಸಲಾಯಿತು.
ಈ ವೇಳೆ ಉಪಾಧ್ಯಕ್ಷ ಜಿ.ಕೆ. ಗೋಪನಾಳು ಬಸವರಾಜು, ಕಾರ್ಯದರ್ಶಿ ಎಸ್. ಬಸವರಾಜ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಅಜ್ಜಯ್ಯ, ಆರ್.ಭಾಗ್ಯಲಕ್ಷ್ಮಿ, ಎಂ. ಚೌಡಪ್ಪ, ಟಿ.ಹೆಚ್. ಮಧುಸೂಧನ್, ಎಲ್. ನಾಗರಾಜ್, ಕೆ.ಎಂ. ನೀಲಕಂಠಯ್ಯ, ಎಂ. ರಾಘವೇಂದ್ರ, ಸಂತೋಷ್ ಕುಮಾರ್, ಜಿ.ಜೆ.ವಾಗೀಶ ಕಟಗಿಹಳ್ಳಿ ಮಠ ಇತರರು ಇದ್ದರು.

Leave a Reply

Your email address will not be published. Required fields are marked *