ಜಿಲ್ಲಾ ಸುದ್ದಿತಾಜಾ ಸುದ್ದಿ

ಆ. 28ರಿಂದ ಮೂರು ದಿನ ಸೂಲಿಬೆಲೆ ಉಪನ್ಯಾಸ

Share Below Link

ಶಿವಮೊಗ್ಗ: ನಮೋ ಬ್ರಿಗೇಡ್ ೨.೦, ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಆ. ೨೮, ೨೯, ೩೦ರಂದು ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮವನ್ನು ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಆವರಣದ ಆಚಾರ್ಯ ತ್ರಯರ ಭವನದಲ್ಲಿ ಹಮ್ಮಿಕೊಳ್ಳಲಾ ಗಿದೆ ಎಂದು ಅಜೇಯ ಸಂಸ್ಕೃತಿ ಬಳಗದ ಅಧ್ಯಕ್ಷ ರಾಮಾಚಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.


ಭಾರತ ವಿಶ್ವದ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ರಾರಾಜಿಸುತ್ತಿದ್ದು, ಸಶಕ್ತವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸೆಟೆದು ನಿಂತಿದೆ ಆದರೆ ಈ ಪ್ರಗತಿಯನ್ನು ಸಹಿಸದ ಒಂದು ದೊಡ್ಡ ಬುದ್ಧಿಜೀವಿಗಳ ವರ್ಗ ಭಾರತದ ಅಖಂಡತೆಗೆ ಮಾರಕವಾ ಗುವ ದೇಶಭಂಜನೆಯ ಕೆಲಸಗಳಲ್ಲಿ ನಿರತವಾಗಿದ್ದು, ಜನಾಂಗೀಯ ದ್ವೇಷ ಹೆಚ್ಚಿಸುತ್ತಾ ಮತಾಂತರದ ಕೆಲಸಗಳಿಗೆ ಕುಮ್ಮಕ್ಕು ಕೊಡುತ್ತಾ, ನೈಜ ಇತಿಹಾಸ ವನ್ನು ತಿರುಚುವ ಸುಳ್ಳು ವಿವಾದ ಸೃಷ್ಟಿಸಿ ಜಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಕಳಂಕ ತರುವ ಕೆಲಸ ಮಾಡುತ್ತಾ ಬಂದಿದೆ ಎಂದರು.
ಯುವ ಬ್ರಿಗೇಡ್ ಪ್ರಮುಖ ರಾದ ವಿನಯ್ ಮಾತನಾಡಿ, ಇನ್ನು ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ ಎಂಬ ಶೀರ್ಷಿಕೆಯಡಿ ನಮ್ಮ ಶಿವಮೊಗ್ಗದಲ್ಲಿ ಮೂರು ದಿನಗಳ ಕಾಲ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಭಾರತ ಭಂಜನೆಯ ಷಡ್ಯಂತ್ರಗಳ ಕುರಿತು ಬೆಳಕು ಚೆಲ್ಲಲಿದ್ದಾರೆ ಎಂದರು.
ಪ್ರತಿದಿನ ಸಂಜೆ ೬.೩೦ರಿಂದ ೮ರ ವರೆಗೆ ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಅಂತರ ರಾಷ್ಟ್ರೀಯ ಖ್ಯಾತಿಯ ಲೇಖಕ ರಾಜೀವ್ ಮಲ್ಹೋತ್ರಾರವರ ಪ್ರಸಿದ್ಧ ಕೃತಿಗಳಾದ ಬ್ರೇಕಿಂಗ್ ಇಂಡಿಯಾ ಹಾಗೂ ಸ್ನೇಕ್ಸ್ ಇಂದ ಗಂಗಾ (ಗಂಗೆಯಲ್ಲಿ ವಿಷಸರ್ಪಗಳು) ಗ್ರಂಥಗಳಲ್ಲಿ ಆಧಾರ ಸಹಿತವಾಗಿ ವಿವರಿಸಿದ್ದು, ಭಾರತದ ಅಸ್ಮಿತೆ ಪ್ರೀತಿಸುವ ಪ್ರತಿಯೊಬ್ಬರೂ ಈ ಕುರಿತು ಜಗೃತಿಗೊಳ್ಳಬೇಕಾದ ಅವಶ್ಯಕತೆ ಇದ್ದು ಈ ಕಾರಣಕ್ಕಾಗಿ ಈ ಉಪನ್ಯಾಸ ಮಾಲಿಕೆ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಮುಖರಾದ ನಾಗೇಶ್, ಅಚ್ಯುತ್‌ರಾವ್, ಚೇತನ್, ಹರೀಶ್‌ಕಾರ್ಣಿಕ್, ಕುಮಾರ ಶಾಸ್ತ್ರಿ ರಾಜೇಶ್ ಶಾಸ್ತ್ರಿ, ಪುರೋಹಿತ್ ಉಪಸ್ಥಿತರಿದ್ದರು.