ಆರೋಗ್ಯಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಸಹ್ಯಾದ್ರಿ ನಾರಾಯಣದಲ್ಲಿ ಪಿಸ್ತುಲಗೆ ಯಶಸ್ವಿ ಲೇಸರ್ ಚಿಕಿತ್ಸೆ…

Share Below Link

ಶಿವಮೊಗ್ಗ: ಸಹ್ಯಾದ್ರಿ ನಾರಾ ಯಣ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಮೂಲವ್ಯಾಧಿ ಮತ್ತು ಪಿಸ್ತೂಲ ಬಾಧೆಗೆ ಲೇಸರ್ ಚಿಕಿತ್ಸೆ ಯನ್ನು ಯಶಸ್ವಿಯಾಗಿ ನೆರವೇರಿಸ ಲಾಗಿದೆ ಎಂದು ಆಸ್ಪತ್ರೆಯ ಸರ್ಜನ್ ಡಾ. ಪ್ರವೀಣ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಪೈಲ್ಸ್ ಎಂದು ಕರೆಯಲ್ಪಡುವ ಈ ಕಾಯಿಲೆ ಒಂದು ಸಮಸ್ಯೆಯಾಗಿಯೇ ಉಳಿದಿದೆ. ಇತ್ತೀಚೆಗೆ ಬಹಳ ಜನರಲ್ಲಿ ಇದು ಕಾಣಿಸಿಕೊಳ್ಳುತ್ತಿದೆ. ಇದರಿಂದ ರೋಗಿಗಳು ಕಿರಿ ಕಿರಿ ಅನುಭವಿಸು ತ್ತಿದ್ದಾರೆ. ಈ ಮೂಲವ್ಯಾಧಿಗೆ ಅನೇಕ ರೀತಿಯ ಚಿಕಿತ್ಸೆಗಳು ಇದ್ದ ರೂ ಕೂಡ ಇದೀಗ ಹೊಸದಾಗಿ ಬಂದಿರುವ ಲೇಸರ್ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು.
ಲೇಸರ್ ಚಿಕಿತ್ಸೆ ತುಂಬಾ ಸುರಕ್ಷಿತವಾಗಿದೆ. ಯಾವುದೇ ರೀತಿಯ ಗಾಯಗಳಾಗುವುದಿಲ್ಲ. ದೇಹದ ಇತರ ಅಂಗಾಂಗಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ತ್ವರಿತ ಚಿಕಿತ್ಸೆ ಹೊಲಿಗೆಗಳು ಇರುವುದಿಲ್ಲ. ಮರುಕಳಿಸು ವಿಕೆಯ ಕಡಿಮೆ ಅಪಾಯವಿ ರುತ್ತದೆ. ಸೋಂಕು ಇರುವುದಿಲ್ಲ. ಹಾಗಾಗಿ ಲೇಸರ್ ಚಿಕಿತ್ಸೆ ಬಹಳ ಅತ್ಯುತ್ತಮ ಚಿಕಿತ್ಸೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾರ್ಕೆಟಿಂಗ್ ಮುಖ್ಯಸ್ಥ ಶೈಲೇಶ್ ಇದ್ದರು.