ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಶ್ರೀ ಸೋಮೇಶ್ವರ ವಿದ್ಯಾಲಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ..

Share Below Link

ದಾವಣಗೆರೆ: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಸೋಮೇಶ್ವರ ವಿದ್ಯಾಲಯದ ನಾಲ್ಕು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿzರೆ.
೧೧೦ ಮೀಟರ್ ತಡಕೆ ಓಟ ( ಹರ್ಡಲ್ ರನ್ )ದಲ್ಲಿ ಸಾಗರ್ ಜಿ.ಆರ್. ಪ್ರಥಮ ಸ್ಥಾನ ಪಡೆದರೆ, ಕರಾಟೆಯಲ್ಲಿ ಶಾರದಾ ದೇವಿ ಕೆ.ಎಂ ಮೊದಲ ಸ್ಥಾನ ಪಡೆದಿzರೆ. ಇನ್ನೂ ಚದುರಂಗದಲ್ಲಿ ದೀಕ್ಷಿತ್ ಪಿ.ಎಂ. ಪ್ರಥಮಸ್ಥಾನಗಳಿಸಿದ್ದು, ೮೦ ಮೀಟರ್ ತಡಕೆ ಓಟ ( ಹರ್ಡಲ್ ರನ್ )ದಲ್ಲಿ ವೇದೇಶ್ ಪ್ರಥಮ ಸ್ಥಾನಪಡೆದಿzರೆ.
ಈ ನಾಲ್ಕು ವಿದ್ಯಾರ್ಥಿಗಳು ಇದೀಗ ರಾಜ್ಯಮಟ್ಟಕ್ಕೆ ಆಯ್ಕೆಯಾ ಗಿದ್ದು ಪೋಷಕರು ಹಾಗೂ ಶಾಲೆಗೆ ಕೀರ್ತಿ ತಂದಿದ್ದು ರಾಜ್ಯಮಟ್ಟದ ಪಂದ್ಯದಲ್ಲಿ ಸ್ಪರ್ಧೆ ಮಾಡಲಿzರೆ. ಕ್ರೀಡೆಯಲ್ಲಿ ಸಾಧನೆಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ಆವರಣ ದಲ್ಲಿ ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದಲ್ಲೂ ಜಯ ಸಾಧಿಸಲೆಂದು ಶುಭಕೋರಲಾಯಿತು. ಈ ವೇಳೆ ಪ್ರಾಚಾರ್ಯರಾದ ಪ್ರಭಾವತಿ, ಆಡಳಿತ ಮಂಡಳಿಯ ಹರೀಶ್ ಬಾಬು, ಮುಖ್ಯ ಶಿಕ್ಷಕರಾದ ಗಾಯತ್ರಿ, ಮಾಲಾ, ಪ್ರಕಾಶ್ ಹಾಗೂ ದೈಹಿಕ ಶಿಕ್ಷಕರಾದ ಇಂದ್ರಮ್ಮ, ನಾಗರಾಜ್, ರಾಹುಲ್ ಶರ್ಮಿಳಾ ಉಪಸ್ಥಿತರಿದ್ದರು.