ಜಿಲ್ಲಾ ಸುದ್ದಿತಾಜಾ ಸುದ್ದಿ

ಕ್ರೀಡೆಗಳು ಹಿರಿಯರಿಗೆ ಉಸ ತರುತ್ತವೆ : ಶಿವಕುಮಾರ್

Share Below Link

ಶಿವಮೊಗ್ಗ: ಕ್ರೀಡೆಗಳು ಹಿರಿಯರಿಗೆ ಉಸ ತರುತ್ತವೆ ಎಂದು ಪಾಲಿಕೆ ಮೇಯರ್ ಶಿವಕುಮಾರ್ ಹೇಳಿದರು.
ಅವರು ಇಂದು ಬಿ.ಹೆಚ್. ರಸ್ತೆಯ ಮೀನಾಕ್ಷಿ ಭವನದ ಬಳಿಯ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಜಿಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಯಕರ ಸಬಲೀಕರಣ ಇಲಾಖೆ, ನಿವೃತ್ತ ನೌಕರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚ ರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಬದುಕು ಹಿರಿಯರಿಗೆ ಒಂದು ರೀತಿಯಲ್ಲಿ ಅಸಮಾಧಾನ ತರುತ್ತಿರುತ್ತದೆ. ಕ್ರಿಯಾಶೀಲತೆ ಯಿಂದ ಹಿರಿಯರು ಜೀವನಶೈಲಿ ಯನ್ನು ಸುಂದರವಾಗಿ ಇಟ್ಟುಕೊಳ್ಳ ಬಹುದು. ಇದಕ್ಕೆ ವ್ಯಾಯಾಮ, ಕ್ರೀಡೆ ಸಹಾಯಕವಾಗುತ್ತದೆ ಆರೊ ಗ್ಯದ ಜೊತೆಗೆ ಆಯುಷ್ಯವನ್ನು ಹೆಚ್ಚಿಸುತ್ತದೆ ಎಂದರು.
ಶಿಕ್ಷಣಾಧಿಕಾರಿ ಪಿ. ನಾಗರಾಜ್ ಮಾತನಾಡಿ, ಹಿರಿಯರನ್ನು ಗೌರ ವಿಸುವುದು ನಮ್ಮೆಲ್ಲರ ಕರ್ತವ್ಯವಾ ಗಿದೆ. ಅವರ ಜೀವನದ ಅನುಭವ ಗಳನ್ನು ನಾವು ಪಾಲಿಸಬೇಕಾಗು ತ್ತದೆ. ಸರ್ಕಾರ ಹಿರಿಯ ನಾಯಕರ ಸಬಲೀಕರಣಕ್ಕಾಗಿ ಹಲವು ಕಾರ್‍ಯ ಕ್ರಮಗಳನ್ನು, ಯೋಜನೆಗಳನ್ನು ಜರಿಗೆ ತಂದಿದೆ. ಆ ಮೂಲಕ ಇನ್ನೂ ಹೆಚ್ಚಿನ ಸವಲತ್ತುಗಳನ್ನು ಅವರಿಗೆ ನೀಡಬೇಕು. ಇಂತಹ ಸ್ಪರ್ದೆಗಳು ಅರ್ಥಪೂರ್ಣ ವಾಗುತ್ತವೆ. ತಮ್ ಸಮಾನ ವಯಸ್ಕರ ಜೊತೆ ಸೇರಿ ಸಂತೋಷ ಸಂಭ್ರಮ ಹೆಚ್ಚಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ವಿವಿಧ ಆಟೋಟ ಮತ್ತು ಸಾಂಸ್ಕತಿ ಸ್ಪರ್ಧೆ ಆಯೋಜಿ ಸಲಾಗಿತ್ತು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಡಿಎಂ, ಷಣ್ಮುಖಪ್ಪ, ಟಿ. ಬಸವರಾಜ್, ಅಂಗವಿಕಲರ ಕಲ್ಯಾಣಾಧಿಕಾರಿ ಚಂದ್ರಪ್ಪ, ಶರಣಪ್ಪ ಮೊದಲಾದ ವರಿದ್ದರು.