ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ನೈರುತ್ಯ ಪದವೀಧರ ಕ್ಷೇತ್ರ: ಪಕ್ಷಾಂತರಿಗೆ ಹೊರತು ಪಡಿಸಿ ಪಕ್ಷನಿಷ್ಠರಿಗೆ ಕಾಂಗ್ರೆಸ್ ಟಿಕೆಟ್ ನೀಡಿ: ದಿನೇಶ್ ಆಗ್ರಹ…

Share Below Link

ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಹೆಸರನ್ನು ಮರುಪರಿಶೀಲನೆ ಮಾಡಬೇಕು ಮತ್ತು ತಮ್ಮ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ ಎಂದು ಸ್ಪರ್ಧಾಕಾಂಕ್ಷಿ ಎಸ್.ಪಿ. ದಿನೇಶ್ ಹೇಳಿದರು.
ಅವರು ಇಂದು ಮತ್ತೋರ್ವ ಆಕಾಂಕ್ಷಿ ರಂಗಸ್ವಾಮಿ ಗೌಡ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈಗಾಗಲೇ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಬದಲಾಯಿಸುವಂತೆ ಮನವಿ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷರಿಗೆ ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ಕೊಟ್ಟಿರುವುದೇ ಗೊತ್ತಿಲ್ಲ . ನಾವು ಭೇಟಿ ಮಾಡಿದಾಗ ಅಚ್ಚರಿಯಾಗಿ ನಮ್ಮನ್ನೆ ಕೇಳಿzರೆ. ನಾನು ನನ್ನ ಮೊಬೈಲ್‌ನಲ್ಲಿಯೇ ಎಐಸಿಸಿಯಿಂದ ಬಂದ ಪತ್ರವನ್ನು ಅವರಿಗೆ ತೋರಿಸಿzವು. ಅವರು ನಮ್ಮ ನಮ್ಮ ಮನವಿಯನ್ನು ಪುರಸ್ಕರಿಸುವ ವಿಶ್ವಾಸವಿದೆ ಎಂದರು.
ದಿನದಿಂದ ದಿನಕ್ಕೆ ಪಕ್ಷ ಬದಲಾಯಿಸುವ ಆಯ್ನೂರ್ ಅವರಿಗೆ ಅದು ಹೇಗೆ ಟಿಕೆಟ್ ಕೊಟ್ಟರೋ ಗೊತ್ತಿಲ್ಲ. ಅದು ಅಲ್ಲದೆ ಬಹಿರಂಗವಾಗಿ ಈಶ್ವರಪ್ಪನವರಿಗೆ ನನ್ನ ಓಟು ಎಂದು ಹೇಳಿzರೆ. ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿzರೆ. ಅಂತಹವರ ಪರವಾಗಿ ಕಾರ್ಯಕರ್ತರು ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಅದು ಅಲ್ಲದೆ ಈಶ್ವರಪ್ಪ ಅವರಿಗೆ ಕಿಚಾಯಿಸಿ ಕಿಚಾಯಿಸಿ ಸ್ಪರ್ಧೆಗೆ ನಿಲ್ಲುವಂತೆ ಮಾಡಿzರೆ. ಈಶ್ವರಪ್ಪ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ಗೆ ನಷ್ಟ ಎಂಬುದು ಅವರಿಗೆ ಏಕೆ ಅರ್ಥವಾಗಿಲ್ಲ. ಈಶ್ವರಪ್ಪ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆದರೆ ಯಾರಿಗೆ ನಷ್ಟ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ದುಡಿದಿರುವ ಯಾರಿಗೆ ಬೇಕಾದರೂ ಟಿಕೆಟ್ ಕೊಡಲಿ. ಅವರ ಪರವಾಗಿ ಕೆಲಸ ಮಾಡುತ್ತೇವೆ. ಆದರೆ ವಲಸಿಗ ಆಯನೂರು ಮಂಜುನಾಥ್ ಪರ ಕೆಲಸ ಮಾಡಲು ಕಷ್ಟವಾಗುತ್ತದೆ ಮತ್ತು ಇಷ್ಟ ಇಲ್ಲ. ನಾವು ಈಗಾಗಲೇ ನೋಂದಣಿಯನ್ನು ಸಾಕಷ್ಟು ಮಾಡಿzವೆ. ಶ್ರಮ ಪಟ್ಟಿzವೆ. ನಮಗೆ ಟಿಕೆಟ್ ಕೊಡಿ ಎಂದು ಕೇಳುತ್ತಿzವೆ ಹೊರತು ಇದು ಪಕ್ಷ ವಿರೋಧಿ ಚಟುವಟಿಕೆಯಲ್ಲ. ಈ ಹಿಂದೆ ಎಷ್ಟೋ ಬಾರಿ ಟಿಕೆಟ್ ಅನೌನ್ಸ್ ಮಾಡಿ ಬದಲಾವಣೆ ಮಾಡಿದ ಉದಾಹರಣೆ ಇದೆ. ಹಾಗೆಯೇ ನನಗೂ ಮಾಡಲಿ. ಒಂದು ಪಕ್ಷ ಬದಲಾವಣೆ ಸಾಧ್ಯ ವಾಗದೆ ಇದ್ದರೆ ನಮಗೆ ಮುಂದಿನ ನಿರ್ಧಾರವನ್ನು ಮುಂದೆ ತಿಳಿಸುತ್ತೇವೆ ಎಂದರು.
ಮತ್ತೊಬ್ಬ ಆಕಾಂಕ್ಷಿ ರಂಗಸ್ವಾಮಿ ಗೌಡ ಮಾತನಾಡಿ, ೯೨ ರಿಂದ ನಾನು ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿಕೊಂಡು ಬಂದಿzನೆ. ಪಕ್ಷದಲ್ಲಿ ದುಡಿದವರಿಗೆ ಅವಕಾಶ ನೀಡಿ. ಬೇರೆ ಪಕ್ಷದಿಂದ ಬಂದು ಅಧಿಕಾರ ಅನುಭವಿಸಲು ಬಂದರೆ ಹೇಗೆ? ನಿಮ್ಮ ಶಕ್ತಿ ಬಳಕೆಯಾಗಿದೆ. ಸಾಕು ನಮಗೆ ಅವಕಾಶ ನೀಡಿ. ಕಾಂಗ್ರೆಸ್ ನಲ್ಲಿದುಡಿದವರಿಗೆ ಅವಕಾಶ ನೀಡಿ. ನಮ್ಮಪಕ್ಷ ನಮ್ಮ ಹಕ್ಕು. ನಮ್ಮಹಕ್ಕನ್ನು ನಮ್ಮ ಅಪ್ಪನ ಬಳಿಯೇ ಕೇಳಬೇಕು. ಹಾಗೆ ನಾವು ಕೂಡ ನಮ್ಮ ಹಕ್ಕನ್ನು ನಮ್ಮ ಅಧ್ಯಕ್ಷರ ಬಳಿಯೇ ಕೇಳಬೇಕಿದೆ ಎಂದರು.
ಪ್ರಮುಖರಾದ ವಿಶ್ವನಾಥಕಾಶಿ, ಜ್ಯೋತಿಅರಳಪ್ಪ, ಜಗದೀಶ್ ಮಹಾಲಿಂಗೇಗೌಡ, ಸತೀಶ್ ಕುಮಾರ್, ಕುಮಾರ್, ಮಹೇಶ್ ಇನ್ನಿತರರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.