ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸೊರಬ: ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡ ನಾಮಪತ್ರ ಸಲ್ಲಿಕೆ…

Share Below Link

ಸೊರಬ:ಸೊರಬ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಬಾಸೂರು ಚಂದ್ರೇಗೌಡ ಮಂಗಳವಾರ ಪಟ್ಟಣದ ಶ್ರೀ ರಂಗನಾಥ ಸ್ವಾಮಿಗೆ ಕುಟುಂಬ ಸಮೇತರಾಗಿ ಬಂದು ಪೂಜೆ ಸಲ್ಲಿಸಿ ರೋಡ್ ಶೋ ಮೂಲಕ ಅಪಾರ ಸಂಖ್ಯೆಯ ಕಾರ್‍ಯಕರ್ತರು ಹಾಗೂ ಮುಖಂ ಡರ ಮೂಲಕ ತಾಲೂಕು ಕಛೇರಿ ವರಗೆ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೋಂದಿಗೆ ಮಾತ ನಾಡಿದ ಅವರು ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಗೆ ಒಳ ಗಾಗಿರುವ ಸೊರಬ ತಾಲ್ಲೂಕ ಸಮಗ್ರ ಅಭಿವೃದ್ಧಿ ಮಾಡುವ ಉದ್ದೇಶದಿಂದ ಕುಮಾರ ಸ್ವಾಮಿ ಯವರು ಮುಖ್ಯ ಮಂತ್ರಿ ಯಾದ ಅವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ತಂದಿzರೆ
ರೈತರ ಸಾಲ ಮನ್ನಾ. ಏತ ನೀರಾವರಿ ಹಲವಾರು ಯೋಜನೆ ಗಳನ್ನು ರೂಪಿಸಿದ್ದರು ಎಂದು ತಿಳಿಸಿದರು.
ತಾಲೂಕಿನ ಅಭಿವೃದ್ಧಿ ಪರ ಚಿಂತನೆ ಹೊಂದಿದ ನಾನು ನಿರು ದ್ಯೋಗ ನಿವಾರಣೆ ಮಾಡುವ ಉದ್ದೇಶದಿಂದ ಬೃಹತ್ ಕೈಗಾರಿಕೆ ಗಳನ್ನ ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
ರಸ್ತೆ. ನೀರಾವರಿ. ಶಿಕ್ಷಣ, ಆರೋಗ್ಯ.ಮುಂತಾದ ಮೂಲ ಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು ಎಂದರು .
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಎನ್.ಕುಮಾರ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಶಿವಪ್ಪ ವಕೀಲ, ಶ್ರೀಧರ್ ಶೇಟ್, ಅಬ್ದುಲ್ ಅಜೀಜ್ ಸಾಬ್, ಸುನಿಲ್, ಶಿವಾಜಪ್ಪ, ಸಂತೋಷ್, ಸಂಪತ್, ಚಂದ್ರಪ್ಪ, ರಾಜುಗೌಡ, ವಿಷ್ಣು, ಆನಂದಪ್ಪ, ಸೇರಿದಂತೆ ಮೊದಲಾದವರಿದ್ದರು.