ಜಿಲ್ಲಾ ಸುದ್ದಿತಾಜಾ ಸುದ್ದಿ

ಸಾಮಾಜಿಕ ನ್ಯಾಯದ ಸೇನಾನಿ ಡಾ.ಬಾಬು ಜಗಜೀವನರಾಮ್…

Share Below Link

ಶಿವಮೊಗ್ಗ: ಸಾಮಾಜಿಕ ನ್ಯಾಯ, ಸಮ ಸಮಾಜ ನಿರ್ಮಾಣ ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ದಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರಲ್ಲಿ ಡಾ.ಜಗಜೀವನರಾಮ್‌ರವರು ಒಬ್ಬರಾಗಿzರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಷಯ ಉಪನ್ಯಾಸಕ ರಾದ ರಾಜು ಹೇಳಿದರು.
ಜಿಡಳಿತ ಕಚೇರಿ ಸಭಾಂ ಗಣದಲ್ಲಿ ಇಂದು ಏರ್ಪಡಿಸಲಾ ಗಿದ್ದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪಪ್ರಧಾನಿ ಡಾ|| ಬಾಬು ಜಗಜೀವನರಾಮ್ ರವರ ೧೧೬ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾ ಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ಸ್ವಾತಂತ್ರ್ಯ ಸಂಗ್ರಾ ಮದ ಹೋರಾಟದಲ್ಲಿ ಡಾ.ಜಗ ಜೀವನರಾಮ್‌ರವರ ಪಾತ್ರ ಪ್ರಮುಖವಾಗಿದ್ದು ಇವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಗಾಂಧೀಜಿಯವರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದರು ಸ್ಮರಿಸಿದರು.
೧೯೦೮ ರ ಏ.೧ ರಂದು ಬಿಹಾರದ ಭೋಜಪುರ ಜಿಯ ಚಾಂದ್ವದಲ್ಲಿ ಜನಿಸಿದರು. ಸಮಾ ಜದಲ್ಲಿನ ಮೇಲು ಕೀಳು ಭಾವನೆ ಯನ್ನು ಹೋಗಲಾಡಿಸಿ ಸಮಾನತೆ ಯನ್ನು ತರಲು ಹೋರಾಡಿದರು. ಅಸ್ಪಶ್ಯತೆ, ಸಾಮಾಜಿಕ ಅಂತರವನ್ನು ಹೋಗಲಾಡಿಸಲು ಶ್ರಮಿಸಿದ ಇವರು ಸಂವಿಧಾನ ರಚನೆಯಲ್ಲಿ ಕೂಡ ಮುಖ್ಯ ಪಾತ್ರ ವಹಿಸಿzರೆ.
ಕಾರ್ಮಿಕ ಸಚಿವರಾಗಿ, ರಕ್ಷಣಾ ಮಂತ್ರಿ, ಉಪ ಪ್ರಧಾನಿಯಾಗಿ ಹಲವಾರು ಹುzಗಳಲ್ಲಿ ಸೇವೆ ಸಲ್ಲಿಸಿರುವ ಇವರು ೧೯೮೬ ಜುಲೈ ೬ ರಂದು ದೈವಾಧೀನರಾ ಗುತ್ತಾರೆಂದು ತಿಳಿಸಿದ ಅವರು ಸ್ವಾತಂತ್ರ್ಯ ಹಾಗೂ ಸಮ ಸಮಾ ಜದ ನಿರ್ಮಾಣಕ್ಕಾಗಿ ಶ್ರಮಿಸಿದ ಇಂತಹ ಮಹಾನ್ ಪುರಷರನ್ನು ನಾವು ಕೇವಲ ಅವರ ಜಯಂತಿ ಮತ್ತು ರಾಷ್ಟ್ರೀಯ ಹಬ್ಬಗಳಲ್ಲಿ ಸ್ಮರಿಸದೆ, ಎಂದಿಗೂ ನೆನಪಿಸಿ ಕೊಳ್ಳಬೇಕು ಎಂದರು.
ಜಿಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಪರಿಶ್ರಮ ಮತ್ತು ಸಾಮಾಜಿಕ ಕಳಕಳಿಯಿಂದ ನಾವು ಯಾವ ದೊಡ್ಡ ಮಟ್ಟ ಕ್ಕಾದರೂ ಏರಬಹುದೆಂಬುದಕ್ಕೆ ಡಾ.ಬಾಬು ಜಗಜೀನರಾಮ್ ರವರೇ ಉದಾಹರಣೆಯಾಗಿದ್ದು ಇವರು ಸಮಾಜ ಸುಧಾರಣೆಯ ಓರ್ವ ಆದರ್ಶ ಪುರುಷ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಜಿ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಜಿ.ಪಂ ಸಿಇಓ ಸ್ನೇಹಲ್ ಲೋಖಂಡೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿಯ ಹಾಗೂ ವಿವಿಧ ಸಂಘ -ಸಂಸ್ಥೆಗಳ ಮುಖಂಡರುಗಳು, ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.