ಜಿಲ್ಲಾ ಸುದ್ದಿತಾಜಾ ಸುದ್ದಿ

ಅ.೧೫ರಿಂದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶರನ್ನವರಾತ್ರಿ ಮಹೋತ್ಸವ

Share Below Link

ಸಾಗರ: ಇಲ್ಲಿನ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಅ.೧೫ರ ನಾಳೆಯಿಂದ ಅ.೨೪ ರವರೆಗೆ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವ ನಡೆಯಲಿದ್ದು, ಪ್ರತಿದಿನ ವಿಶೇಷ ಪೂಜೆ, ಅಲಂಕಾರ, ಸಪ್ತಶತಿ ಪಾರಾಯಣ, ವಿವಿಧ ಹವನಗಳು, ಕುಂಕು ಮಾರ್ಚನೆ, ಅಷ್ಟಾವಧಾನಸೇವೆ ಮುಂತಾದ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ ೬ ಗಂಟೆಗೆ ವಿವಿಧ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಶಾಂಕರ ಸ್ತೋತ್ರ ಪಠಣವಿರುತ್ತದೆ.
೯ ದಿನಗಳ ಪರ್ಯಂತ ಪ್ರತಿದಿನ ಒಂದೊಂದರಂತೆ ಶ್ರೀ ದಕ್ಷಿಣಾಮೂರ್ತಿ ಹವನ, ಶೀ ದುರ್ಗ ಸೂಕ್ತ ಹವನ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ, ಶ್ರೀ ಮಹಾಗಣಪತಿ ಉಪನಿಷತ್ ಹವನ, ಶ್ರೀ ಲಲಿತಾ ಸಹಸ್ರನಾಮ ಹವನ, ಶ್ರೀ ಧನ್ವಂತರಿ ಹವನ, ಶ್ರೀ ಸರಸ್ವತೀ ಮೂಲ ಮಂತ್ರ ಹವನ, ಶ್ರೀ ನವಗ್ರಹ ಪೂರ್ವಕ ಶ್ರೀ ನವಚಂಡಿಕಾ ಹವನ, ಶ್ರೀ ಸೂಕ್ತ ಹವನ, ಅ. ೨೪ರಂದು ವಿಜಯದಶಮಿ ಕಾರ್ಯಕ್ರಮಗಳು ನಡೆಯಲಿವೆ.
ಅ.೨೨ರ ಭಾನುವಾರದಂದು ನವಚಂಡಿಯಾಗ, ೧೨ ಗಂಟೆಗೆ ಪೂರ್ಣಾಹುತಿ, ೧ ಗಂಟೆಗೆ ಪ್ರಸಾದ ವಿನಿಯೋಗ ಇರುತ್ತದೆ. ಅ.೨೨ ರಂದು ಮಧ್ಯಾಹ್ನ ೧೨ಕ್ಕೆ ಶ್ರೀ ಶಾರದಾ ಪ್ರಸಾದ ಪುರಸ್ಕಾರ ನಡೆಯಲಿದ್ದು, ವಿದ್ವಾನ್ ಗಣಪತಿ ಭಟ್, ಟಿ.ವಿ.ಪಾಂಡುರಂಗ, ಪ್ರಕಾಶ್ ವರದಾಮೂಲ ಇವರಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು.
ಅ.೨೩ ರಂದು ಬೆಳಿಗ್ಗೆ ೧೧.೩೦ಕ್ಕೆ ಗಮಕ ಕಾರ್ಯಕ್ರಮ ನಡೆಯ ಲಿದ್ದು, ಅಶೋಕ್ ಕುಮಾರ್ ಹೆಗ್ಗೋಡು ನವದುರ್ಗಾ ವೈಭವ ವಾಚನ ಮಾಡಲಿದ್ದು, ಹೊಸಕೊಪ್ಪ ಶಂಕರನಾರಾಯಣ ವ್ಯಾಖ್ಯಾನ ಮಾಡುವರು. ಶರನ್ನವರಾತ್ರಿ ಈ ಕಾರ್ಯಕ್ರಮಗಳಿಗೆ ಸದ್ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮಠದ ಪ್ರಕಟಣೆಯಲ್ಲಿ ಕೋರಲಾಗಿದೆ. ಸೇವಾ ವಿವರಗಳಿಗೆ ಮೊ. ೯೪೪೯೦೪೯೪೮೪, ೮೭೬೨೧೬೦ ೮೮೮೦ ನ್ನು ಸಂಪರ್ಕಿಸಬಹುದು.