ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ವೆ.ಹೆಚ್. ನಾಗರಾಜ್ ಜೆಡಿಎಸ್ ಸೇರ್ಪಡೆ…

Share Below Link

ಶಿವಮೊಗ್ಗ: ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಸೇರಿದಂತೆ ಹಲವು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಇಂದು ಜೆಡಿಎಸ್ ಜಿಧ್ಯಕ್ಷ ಎಂ.ಶ್ರೀಕಾಂತ್, ಅಭ್ಯರ್ಥಿ ಆಯನೂರು ಮಂಜು ನಾಥ್ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.
ಆಯನೂರು ಮಂಜುನಾಥ್ ಅವರ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೈ.ಹೆಚ್. ನಾಗರಾಜ್, ಬಿಜೆಪಿಯ ಹಿರಣ್ಣ ಯ್ಯ, ಲಾರೆನ್ಸ್ ಡಿಸೋಜ, ಸುಮಿ ತ್ ಆನಂದ್, ರವಿಕುಮಾರ್, ಲೀಲಾವತಿ, ಜನವಿ ರೆಡ್ಡಿ, ಪುಷ್ಪಾ ನಾಯಕ್ ಸೇರಿದಂತೆ ಹಲವರು ಜೆಡಿಎಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾ ಡಿದ ಜೆಡಿಎಸ್ ಜಿಧ್ಯಕ್ಷ ಎಂ. ಶ್ರೀಕಾಂತ್ ಶಿವಮೊಗ್ಗದ ಶಾಂತಿ ನೆಮ್ಮದಿಗಾಗಿ ಬೇರೆಬೇರೆ ಪಕ್ಷಗ ಳಿಂದ ಜೆಡಿಎಸ್ ಸೇರ್ಪಡೆಗೊ ಳ್ಳುತ್ತಿzರೆ. ಇದು ಸ್ವಾಗತದ ವಿಷಯ. ಹಿಂದಿನ ಚುನಾವಣೆ ಗಳಂತೆ ಈ ಚುನಾವಣೆ ಇರುವು ದಿಲ್ಲ. ಗೆಲ್ಲುವ ತಂತ್ರವನ್ನು ಹೆಣೆ ಯಲಾಗುತ್ತಿದೆ ಎಂದರು.
ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ಗೆಲ್ಲುವ ಆತ್ಮವಿಶ್ವಾಸ ಹೆಚ್ಚುತ್ತಿದೆ. ನಾವು ಮುಂದಿನ ಸಾಲಿನಲ್ಲಿ ಇದ್ದೇವೆ ಈ ಬಾರಿ ಅಚ್ಚರಿಯ ಫಲಿತಾಂಶ ಬರುವುದಂತೂ ನಿಜ. ನನ್ನನ್ನು ಕೊಳಚೆ ನೀರು ಎಂದು ಕರೆದವರಿಗೆ ಗೊತ್ತಿರಲಿ. ಕೊಳಚೆ ನೀರನ್ನು ಶೋಧಿಸಿದರೆ ಗಂಗೆ ಸಿಗುತ್ತದೆ. ಆದರೆ ಈ ಕೊಳಚೆ ಎಂಬುದು ಮಾಲ್ ಮಾರಾಟ ಮಾಡುವವರಲ್ಲ. ಮಾಲ್ ಮಾ ರಾಟ ಮಾಡುವವರಿಗೆ ಹೇಳ ಬೇಕು. ಭ್ರಷ್ಟಾಚಾರ ಮಾಡುವ ವರಿಗೆ ಹೇಳಬೇಕು ಎಂದರು.
ನಮಗೆ ಪ್ರತಿಸ್ಪರ್ಧಿಯೇ ಇಲ್ಲ. ಆದರೆ ಸನಿಹ ಸ್ಪರ್ಧಿಗಳು ಇzರೆ. ಆ ಸನಿಹ ಯಾರು ಎಂದು ಅವರಿ ಬ್ಬರೇ ತೀರ್ಮಾನಿಸಲಿ. ಕಾಂಗ್ರೆಸ್ಸಿಗೆ ಜನರೇ ಇಲ್ಲ. ರಾಷ್ಟ್ರೀಯ ಅಧ್ಯ ಕ್ಷರು ಬಂದಾಗ ಖಾಲಿ ಖುರ್ಚಿಗಳು ಅವರನ್ನು ಸ್ವಾಗತಿಸಿವೆ ಎಂದರೆ ಅದರ ಸ್ಥಿತಿಯನ್ನು ಗಮನಿಸಬೇಕು ಎಂದರು.
ಪಕ್ಷಕ್ಕೆ ಸೇರ್ಪಡೆಗೊಂಡ ವೈ.ಹೆಚ್. ನಾಗರಾಜ್ ಮಾತ ನಾಡಿ, ಶಿವಮೊಗ್ಗದ ಶಾಂತಿಗಾಗಿ ಆಯನೂರು ಮಂಜುನಾಥ್ ಶ್ರಮಿಸುತ್ತಿzರೆ. ನನ್ನ ಉದ್ದೇ ಶವೂ ಅದೇ ಆಗಿದೆ. ಹಾಗಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂ ಡಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ. ಮತ್ತು ಈ ಬಾರಿ ಬಿಜೆಪಿಯನ್ನು ಸೋಲಿಸಲೇಬೇಕಾಗಿದೆ. ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸೋಲಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಈ ಬಾರಿ ಆಯನೂರು ಮಂಜು ನಾಥ್ ಗೆಲುವು ಶತಸಿದ್ಧ ಎಂದರು.