ಜಿಲ್ಲಾ ಸುದ್ದಿತಾಜಾ ಸುದ್ದಿ

ಸನಾತನ ಶ್ರೇಷ್ಟ ಧರ್ಮ: ಶ್ರೀ ಪ್ರಸನ್ನನಾಥ ಸ್ವಾಮೀಜಿ

Share Below Link

ಶಿವಮೊಗ್ಗ : ಸನಾತನ ಧರ್ಮ ಮೂರು ಕಾಲಘಟ್ಟದಲ್ಲಿ ಜೀವಂತ ವಾಗಿದ್ದು ಇದರಿಂದಾಗಿ ಅದು ಶ್ರೇಷ್ಟ ಧರ್ಮವಾಗಿ ಹೊರ ಹೊ ಮ್ಮಿದೆ ಎಂದು ಶ್ರೀ ಆದಿ ಚುಂಚ ನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಪ್ರಸನ್ನನಾಥಸ್ವಾಮೀಜಿ ಹೇಳಿದರು.


ಶ್ರೀ ಆದಿಚುಂಚನಗಿರಿ ಸಮು ದಾಯ ಭವನದಲ್ಲಿ ಏರ್ಪಡಿಸಲಾ ಗಿದ್ದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ೫೦ನೇ ಸುವರ್ಣ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನಾತನ ಧರ್ಮ ಅರಿವು ಮತ್ತು ಅನುಸಂಧಾನ ಉಪನ್ಯಾಸ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲದಲ್ಲಿ ಜೀವಂತ ವಾಗಿರುವ ಧರ್ಮವೆಂದರೆ ಸನಾತನ ಧರ್ಮವಾಗಿದೆ. ಇದು ಬಹಳ ಪ್ರಾಮುಖ್ಯತೆಯನ್ನು ಕೂಡ ಪಡೆದಿದೆ ಎಂದರು.
ಈ ಧರ್ಮ ಎಲ್ಲಿ, ಯಾವಾಗ, ಹೇಗೆ, ಯಾರಿಂದ ಆರಂಭವಾ ಯಿತು ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಇದರಲ್ಲಿ ಒಳ್ಳೆಯ ಅಂಶಗಳಿವೆ ಎಂದ ಅವರು, ಧರ್ಮ ಎಂದರೆ ಒಳ್ಳೆಯದನ್ನು ಧರಿಸುವುದು ಎಂದು ಅರ್ಥ, ನಾವು ಉತ್ತಮವಾದದ್ದನ್ನೇ ತಿಳಿದುಕೊಳ್ಳಬೇಕು. ಆಗ ನಮ್ಮ ಬದುಕು ಉತ್ತಮ ಹಾದಿಯಲ್ಲಿ ಸಾಗುತ್ತದೆ ಎಂದು ಹೇಳಿದರು.
ಕಷ್ಟಗಳು ಬರುವುದು ನಮ್ಮ ಒಳ್ಳೆಯದಕ್ಕಾಗಿಯೇ ಆ ಸಂದರ್ಭ ದಲ್ಲಿ ನಾವು ಭಗವಂತನನ್ನು ಸದಾ ಸ್ಮರಿಸುತ್ತೇವೆ. ಕಷ್ಟಗಳು ನಮ್ಮ ಬದುಕನ್ನು ಹಾಗೂ ನಮ್ಮ ಆತ್ಮ ಸ್ಥೈರ್ಯವನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.
ಕಷ್ಟಗಳನ್ನು ಎದುರಿಸಿದಾಗ ಇನ್ನೊಬ್ಬರ ಕಷ್ಟಕ್ಕೆ ನಾವು ಸ್ಪಂದಿಸಿ ದಾಗ ನಮ್ಮಲ್ಲಿ ಉತ್ತಮ ಮಾನ ವೀಯ ಗುಣ ಬೆಳೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇನ್ನೊ ಬ್ಬರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲಾ ನಂದನಾಥ ಮಹಾ ಸ್ವಾಮೀಜಿ ಸಾನಿಧ್ಯ ವಹಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಿದರು. ದಸರೀಘಟ್ಟ ಶಾಖಾ ಮಠದ ಶ್ರೀ ಚಂದ್ರಶೇಖ ರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೈದ್ಯರಾದ ಡಾ. ವೀಣಾ ಎಸ್.ಭಟ್, ಡಾ.ಪ್ರೀತಂ, ಡಾ.ನಿಖಿಲ್, ಡಾ.ಹರೀಶ್, ಸಂಘಟಕ ಡಿ.ಎಚ್.ಸುಬ್ಬಣ್ಣ, ಕಸಾಪ ಜಿಧ್ಯಕ್ಷ ಡಿ.ಮಂಜು ನಾಥ್, ರಘುರಾಂ ದೇವಾಡಿಗ, ಕೃಷಿಕ ರಾಮಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಇನ್ನೂ ಮುಂತಾದ ಗಣ್ಯರು ಇದ್ದರು.