ಜಿಲ್ಲಾ ಸುದ್ದಿತಾಜಾ ಸುದ್ದಿ

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಪಂಪಾಪತಿ ಹೆಸರು ನಾಮಕರಣಕ್ಕೆ ಅಗ್ರಹಿಸಿ ಮನವಿ

Share Below Link

ದಾವಣಗೆರೆ: ನೂತನವಾಗಿ ನಿರ್ಮಾಣವಾಗುತ್ತಿರುವ ಕೆ.ಎಸ್. ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಪಂಪಾಪತಿಯವರ ಹೆಸರು ನಾಮಕರಣ ಮಾಡುವ ಬಗ್ಗೆ ಬಿಜೆಪಿ ಹಾಗು ಸಂಘಟನೆ ಗಳಿಂದ ಜಿಡಳಿತ ಮತ್ತು ಸರ್ಕಾರಕ್ಕೆ ಒತ್ತಾಯ ಮಾಡುವಂತೆ ಅಗ್ರಹಿಸಿ ದಾವಣಗೆರೆಯಲ್ಲಿ ಎಐಟಿಯುಸಿ ಬಿಜೆಪಿ ಪಕ್ಷಕ್ಕೆ ಮನವಿ ಸಲ್ಲಿಸಿತು.


ನಗರದ ಅಶೋಕ ರಸ್ತೆಯಲ್ಲಿನ ಭಾರತೀಯ ಕಮ್ಯುನಿಸ್ಟ್ ಪಕ್ಷದ ಕಚೇರಿಯಿಂದ ಕೆ.ಬಿ. ಬಡಾವಣೆ ಯಲ್ಲಿನ ಬಿಜೆಪಿ ಕಚೇರಿಗೆ ತೆರಳಿ ಜಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಜಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್‌ರಿಗೆ ಮನವಿ ಸಲ್ಲಿಸಿದರು.
ಬೆವರಿನ ಸಂಕೇತವಾಗಿದ್ದ ಪಂಪಾಪತಿ ಅವರು ನಗರದಲ್ಲಿನ ಬಡಕಾರ್ಮಿಕರ ಏಳಿಗೆಗಾಗಿ ಶ್ರಮಿಸುತ್ತಾ, ವಿರೋಧಿಗಳಿಂದ ಸಾಕಷ್ಟು ಬಾರಿ ಮಾರಣಾಂತಿಕ ದಾಳಿಗೆ ಒಳಗಾಗಿ ಶ್ರಮಜೀವಿ ಆಗಿದ್ದರು. ದಾವಣಗೆರೆ ನಗರದಲ್ಲಿ ೬ ಸಾವಿರ ಸಸಿಗಳನ್ನು ನೆಡುವುದರ ಮೂಲಕ, ಬಾತಿ ಕೆರೆಯನ್ನು ಶುದ್ದೀಕರಣಗೊಳಿಸಿ ನಗರಕ್ಕೆ ದಿನಕ್ಕೆ ೨ ಬಾರಿ ಶುದ್ಧ ನೀರನ್ನು ಒದಗಿಸುವ ಜೊತೆಗೆ, ಒಳಚರಂಡಿ ಕಾಮಗಾರಿ, ರಸ್ತೆ ಅಗಲೀಕರಣ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯ ಗಳನ್ನು ಮಾಡುತ್ತಾ, ಆಶ್ರಯ ನಿರಾಶ್ರಿತರನ್ನು ಗುರುತಿಸಿ ಸುಮಾರು ೧೧ ಬಡಾವಣೆಗಳನ್ನು ನಿರ್ಮಾಣ ಮಾಡಿದಂತಹ ಧೀಮಂತ ನಾಯಕ ಎಂದು ಹೇಳಿದರು.
ಅಂದಿನ ನಗರಸಭೆ ಆಡಳಿತಕ್ಕೆ ಅವಶ್ಯವಿರುವ ಡಿ-ಗ್ರೂಪ್ ನೌಕರರು, ಪೌರಕಾರ್ಮಿಕರು, ನೀರು ಸರಬರಾಜು ಕಾರ್ಮಿಕರು, ಎನ್.ಆರ್. ಗ್ಯಾಂಗ್, ಒಳ ಚರಂಡಿ ಕೆಲಸಗಳಿಗೆ ಅವಶ್ಯವಿರುವ ಸುಮಾರು ೮೫೦ ಜನ ಕಾರ್ಮಿಕರನ್ನು ಏಕಕಾಲಕ್ಕೆ ನೇಮಕ ಮಾಡಿಕೊಳ್ಳುವುದರೊಂದಿಗೆ ಉತ್ತಮ ಆಡಳಿತ ನೀಡುವುದರೊಂದಿಗೆ ದಾವಣಗೆರೆ ನಗರ ವಿಧಾನಸಭಾ ಕ್ಷೇತ್ರದ ಮೂರು ಬಾರಿ ಶಾಸಕರಾಗಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದು, ಅಂತಹ ವ್ಯಕ್ತಿಯ ಹೆಸರನ್ನು ಕೆಎಸ್‌ಆರ್ ಟಿಸಿಗೆ ಇಡಬೇಕೆಂದು ಆಗ್ರಹಿಸಿದರು.
ಜಿಧ್ಯಕ್ಷ ರಾಘವೇಂದ್ರ ನಾಯರಿ, ಜಿ ಪ್ರಧಾನ ಕಾರ್ಯದರ್ಶಿ ಆವರಗೆರೆ ಹೆಚ್. ಜಿ.ಉಮೇಶ್, ಪಿ.ಕೆ.ಲಿಂಗರಾಜ, ಭಜನೆ ಹನುಮಂತಪ್ಪ, ಭೀಮಾರೆಡ್ಡಿ, ಶಿವಕುಮಾರ್ ಡಿ. ಶೆಟ್ಟರ್, ವಿ.ಲಕ್ಮಣ್, ಡಿ.ಷಣ್ಮುಗಂ, ಸುರೇಶ್ ಯರಗುಂಟೆ, ಎಸ್. ಮುರುಗೇಶ್ ಇತರರು ಇದ್ದರು.