ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ರಾಷ್ಟ್ರೀಯ ರಕ್ಷಾ ಯೂನಿವರ್ಸಿಟಿ:ಪ್ರಸಕ್ತ ವರ್ಷದಿಂದಲೇ ನಗರದಲ್ಲಿ ಕಾರ್‍ಯಾರಂಭ…

Share Below Link

ಶಿವಮೊಗ್ಗ: ಭಾರತ ಸರ್ಕಾರ ದಿಂದ ಅನುಮೋದಿಸಲ್ಪಟ್ಟ ರಾಷ್ಟ್ರೀ ಯ ರಕ್ಷಾ ಯೂನಿವರ್ಸಿಟಿಯ ೫ನೇ ಶಾಖೆ ಶಿವಮೊಗ್ಗದ ರಾಗಿಗು ಡ್ಡದಲ್ಲಿರುವ ಹಳೆಯ ಕೇಂದ್ರೀಯ ವಿದ್ಯಾಶಾಲೆ ಕಟ್ಟಡದಲ್ಲಿ ಆರಂಭ ವಾಗಿದೆ ಎಂದು ಅಪರಾಧ ಶಾಸ್ತ್ರ ವಿಭಾಗದ ಸಹಾಯಕ ಅಧ್ಯಾಪಕಿ ಡಾ. ದಿವ್ಯಶ್ರೀ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರ ಪೊಲೀಸ್ ಹಾಗೂ ರಾಷ್ಟ್ರೀಯ ಭದ್ರತೆಯ ವಿಷಯವನ್ನಿಟ್ಟುಕೊಂಡು ಈ ವಿಶ್ವ ವಿದ್ಯಾನಿಲಯವನ್ನು ಪ್ರಾರಂಭಿ ಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಪೊಲೀಸರಿಗೆ ಶೈಕ್ಷಣಿಕ ಸಂಶೋ ಧನೆ, ತರಬೇತಿ, ಪರಿಸರ ವ್ಯವಸ್ಥೆ ಯನ್ನು ಇಲ್ಲಿ ಕಲಿಸಲಾಗುತ್ತದೆ ಎಂದರು.


ವಿದ್ಯಾರ್ಥಿಗಳಿಗೆ ರಾಷ್ಟ್ರ ಪ್ರೇಮದ ಜೊತೆಗೆ ಬೌದ್ಧಿಕವಾಗಿ ಉತ್ತೇಜಿಸುವ ಶಿಸ್ತಿನ ಪರಿಸರ ನೀಡುವ ಭದ್ರತೆಯ ಬಗ್ಗೆ ಬೆಳಕು ಚೆಲ್ಲುವ ಗುಪ್ತಚರ ಇಲಾಖೆಯ ವಿಷಯಗಳನ್ನು ತಿಳಿಸುವ ಆಂತರಿಕ ಭದ್ರತೆಯ ಬಗ್ಗೆ ನಿಲುವು ತಾಳುವ ಮಿಲಿಟರಿ, ಅರೆಮಿಲಿಟರಿ, ರಾಜ ತಾಂತ್ರಿಕರು, ನಾಗರಿಕ ಸೇವಕರು ಮತ್ತು ನಾಗರಿಕರ ನಡುವಿನ ವಿಚಾ ರಗಳನ್ನು ಬೋಧಿಸುವ ಅಂಶಗ ಳನ್ನು ಈ ವಿಶ್ವವಿದ್ಯಾನಿಲಯ ಒಳಗೊಂಡಿದೆ ಎಂದರು.
ಶಿವಮೊಗ್ಗದಲ್ಲಿ ಪ್ರಸಕ್ತ ವರ್ಷ ದಿಂದ ಸುಮಾರು ೭ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ. ಅದರಲ್ಲಿ ಮುಖ್ಯವಾಗಿ ಡಿಪ್ಲಮೋ ಇನ್ ಪೊಲೀಸ್ ಸರ್ವಿಸ್ ಒಂದು ವರ್ಷದ ಕೋರ್ಸ್ ಆಗಿದೆ. ದ್ವಿತೀಯ ಪಿಯುಸಿ ಪಾಸಾದವರು (ಶೇ.೫೦) ಅರ್ಹ ರಾಗಿರುತ್ತಾರೆ. ಹಾಗೆಯೇ ಬ್ಯಾಚುಲರ್ ಆಫ್ ಆರ್ಟ್ಸ್ ಇನ್ ಸೆಕ್ಯುರಿಟಿ ಮ್ಯಾ ನೇಜ್ ಮೆಂಟ್ (ಆಂಗ್ಲ ಮಾಧ್ಯಮ) ಕೋರ್ಸ್ ನಾಲ್ಕು ವರ್ಷದ್ದಾಗಿದ್ದು, ದ್ವಿತೀಯ ಪಿಯುಸಿ ಯಲ್ಲಿ ಶೇ. ೫೦ರಷ್ಟು ಅಂಕ ಪಡೆದವರು ಈ ಕೋರ್ಸ್ ಸೇರಲು ಅರ್ಹರಾಗಿರುತ್ತಾರೆ ಎಂದರು.
ಪೋಸ್ಟ್ ಗ್ರಾಜ್ಯುಯೇಷನ್ ಡಿಪ್ಲಮೋ ಇನ್ ಪೊಲೀಸ್ ಸೈನ್ಸ್ ಈ ಕೋರ್ಸ್ ಒಂದು ವರ್ಷದ್ದಾಗಿದ್ದು, ಶೇ.೫೦ರಷ್ಟು ಅಂಕ ಗಳಿಸಿದ ಪದವೀಧರರು ಅರ್ಹರಾಗಿರುತ್ತಾರೆ. ಉಳಿದಂತೆ ಎರಡು ವಾರದ ೩೦೦ ಗಂಟೆಗಳ ವಿಶೇಷ ತರಬೇತಿ ಕೋರ್ಸು ಗಳು ಕೂಡ ಇರುತ್ತವೆ. ಇವುಗಳಿಗೆ ಯಾವುದೇ ವಯಸ್ಸಿನ ಅಂತರ ಇರುವುದಿಲ್ಲ ಎಂದರು.


ರಾಷ್ಟ್ರೀಯ ರಕ್ಷಾ ಯೂನಿ ವರ್ಸಿಟಿ ಯಲ್ಲಿ ಅಧ್ಯಯನ ಮಾಡಿ ದವರಿಗೆ ಪೊಲೀಸ್ ಮತ್ತು ಇತರೆ ನೇಮಕದಲ್ಲಿ ಪ್ರಾಶಸ್ತ್ಯವಿರುತ್ತದೆ. ಅಲ್ಲದೆ ಗುಜರಾತ್, ಜರ್ಕಂಡ್ ಮತ್ತು ದೆಹಲಿ ರಾಜ್ಯಗಳಲ್ಲಿ ಶೇ.೧೫ರಷ್ಟು ಅಂಕಗಳ ಮೀಸಲಾತಿ ಇರುತ್ತದೆ. ಮತ್ತು ಇಲ್ಲಿ ಶಿಕ್ಷಣ ಪಡೆದವರಿಗೆ ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಇರುತ್ತವೆ. ಭಾರತದಲ್ಲಿ ಐದು ಕಡೆ ಮಾತ್ರ ಈ ವಿಶ್ವವಿದ್ಯಾನಿಲಯವಿದ್ದು, ಅದ ರಲ್ಲಿ ಶಿವಮೊಗ್ಗ ಕೂಡ ಒಂದಾಗಿರು ವುದು ಹೆಮ್ಮೆಯಾಗಿದೆ ಎಂದ ಅವರು, ಹೆಚ್ಚಿನ ವಿವರಗಳನ್ನು ರಾಗಿಗುಡ್ಡದಲ್ಲಿರುವ ವಿವಿ ಕಚೇರಿಯಲ್ಲಿ ಪಡೆಯಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹೆಶ್ ಹಾಗೂ ಶಿವಲಿಂಗಪ್ಪ ಅಂಗಡಿ ಇದ್ದರು.