ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿನ್ನಲೆ ಶ್ರೀ ಆಂಜನೇಯಸ್ವಾಮಿಗೆ ಹರಕೆ ತೀರಿಸಿದ ರಮೇಶ್
ಚನ್ನಗಿರಿ: ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರು ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಚನ್ನಗಿರಿ ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶ್ರೀ ಆಂಜನೇಯಸ್ವಾಮಿಗೆ ೧೦೧ ತೆಂಗಿನಕಾಯಿ ಒಡೆದು ಹರಕೆ ತೀರಿಸಿzರೆ.
ಮಲ್ಲಿಗೆನಹಳ್ಳಿ ಗ್ರಾಮದ ತಾಪಂ ಪರಾಜಿತ ಅಭ್ಯರ್ಥಿ ಟಿ.ಆರ್. ರಮೇಶ್ ಅವರು, ಶಾಸಕ ಕೆ.ಎಸ್.ಬಸವಂತಪ್ಪ ಗೆಲುವು ಸಾಧಿಸಿದರೆ, ೧೦೧ ತೆಂಗಿನಕಾಯಿ ಒಡೆಯುವುದಾಗಿ ಹರಕೆ ಹೊತ್ತಿದ್ದರು. ಅವರು ದೇವರಲ್ಲಿ ಪ್ರಾರ್ಥಿಸಿದಂತೆ ಕೆ.ಎಸ್. ಬಸವಂತಪ್ಪ ಗೆಲುವು ಸಾಧಿಸಿದ್ದು, ಹೀಗಾಗಿ ಟಿ.ಆರ್. ರಮೇಶ್ ಮತ್ತು ಗ್ರಾಮದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವರಿಗೆ ೧೦೧ ತೆಂಗಿನಕಾಯಿ ಒಡೆದು ಹರಕೆ ತೀರಿಸಿzರೆ.
ಈ ಸಂದರ್ಭದಲ್ಲಿ ಟಿ.ಆರ್. ರಮೇಶ್, ಹನುಮಂತಪ್ಪ, ತಿಪ್ಪೇಶಿ, ಹಾಲೇಶ್, ಸುರೇಶ್, ಬಸವ ರಾಜ್, ಲೋಕೇಶ್, ಹನುಮಂತ, ರುದ್ರೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
![](https://i0.wp.com/hosanavika.com/wp-content/uploads/2023/05/A2.gif?resize=800%2C589&ssl=1)
![](https://i0.wp.com/hosanavika.com/wp-content/uploads/2023/06/YOGITHA.gif?resize=800%2C141&ssl=1)
![](https://i0.wp.com/hosanavika.com/wp-content/uploads/2023/05/A1.gif?resize=800%2C589&ssl=1)