ಇತರೆಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ…

Share Below Link

ಶಿವಮೊಗ್ಗ: ಧಾರವಾಡ ಮತ್ತು ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಂಕಲ್ಪ ೨೦೨೩ರ ಸಾಂಸ್ಕೃ ತಿಕ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಕಂಸಾಳೆ ಮತ್ತು ಇತರೆ ವಿಭಾಗ ಗಳಲ್ಲಿ ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದು ಕುವೆಂಪು ವಿವಿಗೆ ಕೀರ್ತಿ ತಂದಿzರೆ.
ಸಹ್ಯಾದ್ರಿ ಕಾಲೇಜಿನ ವಿದ್ಯಾ ರ್ಥಿಗಳಾದಹಾಲೇಶ್ ಆರ್., ಪ್ರತಿಭಾ ಟಿ.ಬಿ.,ಶಿವಕುಮಾರ ನಾಯ್ಕ ಸಿ., ಹಾಲೇಶ್ ಪಾಟೀಲ್ ಜಿ.ಎಸ್., ಭರತ್ ಬಿ., ಪ್ರವೀಣ್ ಎನ್.ಬಿ., ಮೇಘನಾ ಎಸ್.ಎನ್. ಸುಶ್ಮಿತಾ ಎಂ.ಕೆ., ಯೋಗೀಶ್, ಶರತ್ ಸಿ.ಪಿ.ಯವರು ಕಂಸಾಳೆ ವಿಭಾಗದಲ್ಲಿ ದ್ವಿತೀಯ ಬಹು ಮಾನ ಪಡೆದಿzರೆ. ರಾಜ್ಯದ ಸುಮಾರು ೧೪೦ಕ್ಕೂ ಹೆಚ್ಚು ಕಾಲೇ ಜುಗಳು ಇದರಲ್ಲಿ ಸ್ಪರ್ಧೆ ಮಾಡಿ ದ್ದವು.
ಹಾಗೆಯೇ ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗ ವಾಗಿ ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ ಶಿವ ಕುಮಾರ್ ಪ್ರಥಮ ಬಹುಮಾನ ಪಡೆದಿzರೆ.
ಸಹ್ಯಾದ್ರಿ ಕಲಾ ಕಾಲೇಜಿನ ಆವರಣದಲ್ಲಿ ಇಂದು ನಡೆದ ಸರಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪ್ರಾಂಶುಪಾಲ ಕೆಬಿ.ಧನಂಜಯ, ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಕೇವಲ ಪಾಠದಲ್ಲಿ ಮಾತ್ರ ಮುಂದೆ ಇಲ್ಲ ಸಾಂಸ್ಕತಿಕ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಿzರೆ. ಕುವೆಂಪು ವಿವಿಗೆ ಮತ್ತು ಸಹ್ಯಾದ್ರಿ ಕಾಲೇಜಿಗೆ ಕೀರ್ತಿ ತಂದಿzರೆ ಎಂದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್. ಮಂಜುನಾಥ್ ಮಾತನಾಡಿ, ಕಂಸಾಳೆ ಒಂದು ಜನಪದ ಅದ್ವಿತೀಯ ಕಲೆ. ಈ ಕಲೆಯನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕಲಿತು ಬಹು ಮಾನ ಪಡೆಯುವುದರ ಜೊತೆಗೆ ಕಲೆಯನ್ನು ಉಳಿಸಿ ಬೆಳೆಸುತ್ತಿzರೆ. ಸಹ್ಯಾದ್ರಿಕಾಲೇಜಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಾಸಂಗ ಮಾಡುವುದರಿಂದ ಹಳ್ಳಿಯ ಕಲೆಗಳನ್ನು ಕರಗತ ಮಾಡಿ ಕೊಂಡು ಆ ಮೂಲಕ ಸಾಂಸ್ಕೃತಿಕ ಅರಿವನ್ನು ವಿಸ್ತಿರಿಸು ತ್ತಿzರೆ ಎಂದರು.
ಪ್ರಾಧ್ಯಾಪಕ ಜಿ.ಆರ್. ಲವ ಹಾಜರಿದ್ದರು. ಬಹುಮಾನ ಪಡೆ ದ ವಿದ್ಯಾರ್ಥಿಗಳನ್ನು ಈ ಸಂದ ರ್ಭದಲ್ಲಿ ಅಭಿನಂದಿಸಲಾಯಿತು.