ಜಿಲ್ಲಾ ಸುದ್ದಿತಾಜಾ ಸುದ್ದಿ

ಜನಪರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಮೂಲಕ ಸಂಸತ್ ಚುನಾವಣೆಗೆ ಸನ್ನದ್ದರಾಗಿ: ಕಾಗೋಡು

Share Below Link

ಶಿಕಾರಿಪುರ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಯಾವುದೇ ಸರ್ಕಾರದಿಂದ ಅಸಾಧ್ಯವಾದ ಹಲವು ಯೋಜನೆಗಳನ್ನು ಜರಿಗೊಳಿಸಿದ್ದು ಕಾರ್ಯಕರ್ತರು ಫಲಾನುಭವಿಗಳಿಗೆ ತಲುಪಿಸುವ ಮೂಲಕ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಗೆಲವು ಸಾಧಿಸುವ ಸವಾಲನ್ನು ಸ್ವೀಕರಿಸುವಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕರೆ ನೀಡಿದರು.
ಪಟ್ಟಣದ ಶಿಶು ವಿಹಾರ ರಸ್ತೆ ಯಲ್ಲಿನ ಕಾಂಗ್ರೆಸ್ ಪಕ್ಷದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಪಕ್ಷದ ಕಚೇರಿ ಉದ್ಘಾಟನೆ ಅತ್ಯಂತ ಸಂತೋಷ ದಾಯಕವಾಗಿದ್ದು ಈ ಮೂಲಕ ಕಾರ್ಯಕರ್ತರು ಮುಖಂಡರಲ್ಲಿ ಬರಲಿರುವ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಛಲ, ಸಂಕಲ್ಪ, ಇಚ್ಚಾಶಕ್ತಿ ಎದ್ದು ಕಾಣುತ್ತಿದೆ. ಎಡೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಒಗ್ಗಟ್ಟು ಕಂಡುಬರಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜರಿಗೊಳಿಸಿದ ಗ್ಯಾರೆಂಟಿ ಯೋಜನೆ ಕಾರಣವಾಗಿದೆ ಎಂದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಕಾರ್ಯಕರ್ತರು ಕೆಲಸ ಕಾರ್ಯ ಬದಿಗಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳು ವಂತೆ ಕರೆ ನೀಡಿದ ಅವರು, ರಾಜ್ಯ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ಅಸಾಧ್ಯ ವಾದ ಹಲವು ಜನಪ್ರಿಯ ಯೋಜನೆಗಳನ್ನು ಜರಿಗೊಳಿಸಿದ್ದು ಸರ್ಕಾರದ ಯೋಜನೆ ಬಳಸಿ ಕೊಂಡು ತಾಲೂಕಿನಲ್ಲಿ ಪಕ್ಷವನ್ನು ಸಧೃಡವಾಗಿ ಕಟ್ಟುವಂತೆ ತಿಳಿಸಿ ಈ ದಿಸೆಯಲ್ಲಿ ಕಾರ್ಯಕರ್ತರ ಪಾದಗಳಿಗೆ ನಮಸ್ಕರಿಸುವುದಾಗಿ ತಿಳಿಸಿದರು.
ಸಂಸದ- ಶಾಸಕರು ತಾಲೂಕಿನ ವರಾಗಿದ್ದು, ಇದುವರೆಗೂ ಎಷ್ಟು ಜನರಿಗೆ ಹಕ್ಕುಪತ್ರ ನೀಡಿzರೆ. ಬರೀ ಟೋಪಿ ಹಾಕುವ ಕೆಲಸ ಮಾಡುತ್ತಿರುವ ಅವರು, ಲೂಟಿ ಹೊಡೆಯುತ್ತಿzರೆ. ಮಣಿಸಲು ೩-೪ ತಿಂಗಳು ಹಗಲು ರಾತ್ರಿ ಸೈನಿಕರ ರೀತಿ ಶ್ರಮಿಸುವಂತೆ ತಿಳಿಸಿದ ಅವರು, ಈ ಬಾರಿಯ ಚುನಾವಣೆ ಸವಾಲಾಗಿದ್ದು ಕಾಂಗ್ರೆಸ್ ಪಕ್ಷ ಗೆಲ್ಲಿಸುವ ಮೂಲಕ ಜನಸಾಮಾನ್ಯರ ಜೀವನ ಶೈಲಿ ಯನ್ನು ಬದಲಾಯಿಸಬೇಕಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ೧೯೭೮ರಲ್ಲಿ ದೇವರಾಜ್ ಅರಸ್ ಮೀಸಲಾತಿಯನ್ನು ಜಾರಿಗೊಳಿ ಸಿದ್ದು, ತಪ್ಪಿದಲ್ಲಿ ಇಂದು ದಲಿತರನ್ನು ಅಧಿಕಾರಿಯಾಗಿ ಕಾಣಲು ಸಾಧ್ಯವಿರಲಿಲ್ಲ. ಗೇಣಿದಾರರಿಗೆ ಭೂಮಿಯ ಹಕ್ಕು ದೊರೆಯಲು ಕಾಗೋಡು ತಿಮ್ಮಪ್ಪನವರ ಹೋರಾಟ ಕಾರಣವಾಗಿದ್ದು ಕಾಂಗ್ರೆಸ್ ಪಕ್ಷದ ಅಧಿಕಾರದಿಂದ ಮಾತ್ರ ಬದಲಾವಣೆ ಸಾಧ್ಯ ಎಂದ ಅವರು, ಮನುಷ್ಯನ ನೆಮ್ಮದಿಯ ಬದುಕಿಗೆ ಬೇಕಾದ ಸೌಲಭ್ಯ ಉದ್ಯೋಗ ದೊರಕಿಸದೆ ಕೇವಲ ಜತಿ, ಧರ್ಮದ ಆಧಾರದಲ್ಲಿ ಬ್ರಿಟೀಷರ ಮಾದರಿಯಲ್ಲಿ ಬಿಜೆಪಿ ದೇಶ ಒಡೆಯುತ್ತಿದೆ ಜತಿ ಧರ್ಮದ ಮದ್ಯೆ ವಿಷ ಬೀಜ ಬಿತ್ತುತ್ತಿದೆ ಎಂದು ಆರೋಪಿಸಿದರು.
ಜಿಧ್ಯಕ್ಷ ಸುಂದರೇಶ್ ಮಾತನಾಡಿ, ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕ್ಷೇತ್ರವನ್ನು ಶತಾಯಗತಾಯ ಗೆಲ್ಲಬೇಕಾಗಿದ್ದು ಈ ದಿಸೆಯಲ್ಲಿ ಕಾರ್ಯಕರ್ತರಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಶೀಘ್ರ ದಲ್ಲಿಯೇ ಬಗೆಹರಿಸಲಾಗುವುದು ತಾಲೂಕಿನಲ್ಲಿ ಪಕ್ಷದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗು ವುದು ಎಂದು ತಿಳಿಸಿದರು.
ಪಾದಯಾತ್ರೆ ಮೂಲಕ ರಾಹುಲ್ ಗಾಂಧಿ ಎಲ್ಲ ವರ್ಗದ ಜನತೆಯ ಸಮಸ್ಯೆ ಆಲಿಸಿ ಪ್ರೀತಿ ಗಳಿಸಿದ್ದು ಇದರಿಂದಾಗಿ ಪಕ್ಷದ ಸಂಘಟನೆ ಬಲಿಷ್ಠವಾಗಿದೆ ರಾಜ್ಯ ದಲ್ಲಿ ಹಲವು ವಿರೋಧಿ ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿzರೆ. ಇದರಿಂದ ಪ್ರಧಾನಿ ಮೋದಿ ಕಂಗೆಟ್ಟಿzರೆ ಎಂದ ಅವರು, ಪರಾಜಿತ ಅಭ್ಯರ್ಥಿ ನಾಗರಾಜಗೌಡ ಸಹ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ ತತ್ವ ಸಿzಂತಕ್ಕೆ ತಲೆಬಾಗಿ ನಡೆಯುವ ಎಲ್ಲರನ್ನು ಸೇರ್ಪಡೆಗೊಳಿಸಿ ಕೊಳ್ಳಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಮಾತನಾಡಿ, ಪಕ್ಷ ನಿಷ್ಠರಿಗೆ ತೊಂದರೆ ವಿಪರೀತವಾಗಿದ್ದು ಸಂಸದ – ಶಾಸಕರ ಪ್ರಭಾವಕ್ಕೆ ಹಲವರನ್ನು ರೌಡಿ ಲಿಸ್ಟ್‌ಗೆ ಸೇರ್ಪಡೆಗೊಳಿಸ ಲಾಗಿದೆ. ಕೂಡಲೇ ಸರ್ಕಾರ ಕೇಸ್ ವಾಪಾಸ್ ಪಡೆದು ಕಾರ್ಯಕರ್ತರ ನೈತಿಕ ಶಕ್ತಿ ಹೆಚ್ಚಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ದೇವರಾಜ್‌ಅರಸ್ ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಕಾಗೋಡು ತಿಮ್ಮಪ್ಪರನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಭದ್ರಾವತಿ ನಗರಸಭಾ ಸದಸ್ಯ ಬಿ.ಕೆ ಮೋಹನ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಶಿವಕುಮಾರ್, ಪಲ್ಲವಿ, ವೀಣಾ ಹಿರೇಮಠ್, ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ,ಮುಖಂಡ ಭಂಡಾರಿ ಮಾಲತೇಶ್, ಚಂದ್ರಕಾಂತ್ ಪಾಟೀಲ್ವೇಣು ಗೋಪಾಲ್, ಶ್ರೀಧರ ಕರ್ಕಿ, ಪುರಸಭಾ ಸದಸ್ಯ ಉಳ್ಳಿ ದರ್ಶನ್, ರೋಷನ್, ಜಯಶ್ರೀ, ಕಮಲಮ್ಮ ಮತ್ತಿತರರು ಉಪಸ್ಥಿತರಿದ್ದರು.