ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮಕ್ಕಳಿಗೆ ಪ್ರತಿನಿತ್ಯ ಶರಣ-ಶರಣೆಯರ ವಚನಗಳನ್ನು ಅಭ್ಯಾಸ ಮಾಡಿಸಿ: ಪೋಷಕರಿಗೆ ಡಾ. ಡಿಸೋಜ ಸಲಹೆ

Share Below Link

ದಾವಣಗೆರೆ : ಮಕ್ಕಳಿಗೆ ಪ್ರತಿನಿತ್ಯ ೧೨ನೇ ಶತಮಾನದ ಬಸವೇಶ್ವರರ ಹಾಗೂ ಇನ್ನಿತರ ಶರಣ ಶರಣೆಯರ ಒಂದೊಂದು ವಚನಗಳನ್ನು ತಿಳಿಸಿಕೊಟ್ಟರೆ ಮುಂದೆ ಅವರ ಜೀವನ ಸುಲಭವಾಗುತ್ತದೆ ಎಂದು ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಡಾ. ಜಸ್ಟಿನ್ ಡಿಸೋಜ ಅವರು ಕರೆ ನೀಡಿದರು.


ಹಾಲಕೆರೆ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಏರ್ಪಡಿಸಿದ್ದ ೨೬೯ನೇ ಶಿವಾನುಭವ ಸಂಪದ, ಶ್ರೀ ಬಸವೇಶ್ವರ ಜಯಂತಿ ಹಾಗೂ ಮಹಿಳಾ ದಿನಾಚರಣೆ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸಿನ ತಳಮಳ, ಕ್ರೌರ್ಯ ದೂರವಾಗುತ್ತದೆ ಎಂದರು.
ಕೋವಿಡ್ ನಂತರ ಮಕ್ಕಳ ಜೀವನ ಶೈಲಿಯೇ ಬದಲಾಗಿದೆ, ಗುರು-ಹಿರಿಯರಲ್ಲಿ ಭಕ್ತಿಇಲ್ಲ, ಪೋಷಕರಿಗೆ ಮಕ್ಕಳು ಬೆಲೆ ಕೊಡ್ತಾ ಇಲ್ಲ, ಪೋಷಕರು ಮತ್ತು ಮಕ್ಕಳು ಮೊಬೈಲ್ ದಾಸರಾಗಿzರೆ, ಬಂಧು- ಬಳಗದ ಸಂಪರ್ಕದಿಂದ ದೂರವಿರುತ್ತಾರೆ, ಪರಿಸ್ಥಿತಿ ಹೀಗೆ ಮುಂದುವರಿದರೆ ಪೋಷಕರು ದೊಡ್ಡ ದುರಂತವನ್ನು ಎದುರಿಸ ಬೇಕುತ್ತದೆ. ಈಗಲೇ ಎಚ್ಚೆತ್ತುಕೊಳ್ಳು ವುದು ಅವಶ್ಯಕ ಎಂದು ಸಲಹೆ ನೀಡಿದರು.
ನಿವತ್ತ ಗ್ರಂಥ ಪಾಲಕಿ ಶ್ರೀಮತಿ ನಾಗರತ್ನ ಹೊಸಮನಿ ಅವರು ಮಾತನಾಡಿ, ಸಮಾಜದಲ್ಲಿ ಮಹಿಳೆ ಯರ ಪಾತ್ರ ಮುಖ್ಯ. ಆದರೆ ಇತ್ತೀಚೆಗೆ ಆಮಿಷಕ್ಕೆ ಒಳಗಾಗಿ ಪತಿ- ಪತ್ನಿಯರಲ್ಲಿ ಸೌಹಾರ್ದತೆ ಇಲ್ಲ. ಅತ್ತೆ ಅಜ್ಜಿ, ಅಕ್ಕ- ತಂಗಿಯರು ಹೊಣೆಗಾರಿಕೆ ಯನ್ನು ಅರಿತು ಕೊಳ್ಳಬೇಕು. ನಮ್ಮ ದೇಶದ ಸಂಸ್ಕೃತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಜನನೀಯರು ಮನೆಗೆ ಮೊದಲ ಗುರುವಾಗಿ ಮಕ್ಕಳಿಗೆ ಸಂಸ್ಕಾರದ ಬೀಜ ಬಿತ್ತುವುದರ ಮೂಲಕ ಒಳ್ಳೆಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.
ನಿವತ್ತ ಶಿಕ್ಷಕಿ ಶ್ರೀಮತಿ ಸುನಂದ ಜಂಬನಗೌಡ್ರು ಮಾತನಾಡಿ, ಮಹಿಳೆಯರು ಮೊಬೈಲ್ ಬಿಟ್ಟು ಓದುವ ಛಲವನ್ನು ಬೆಳೆಸಿ ಕೊಳ್ಳಬೇಕು, ಮನೆ ಕೆಲಸದ ಕಾಯಕತ್ವದಲ್ಲಿ ತೊಡಗಿ ದೇಶದ ಮತ್ತು ಕುಟುಂಬದ ಶಾಂತತೆಯನ್ನು ಕಾಪಾಡಬೇಕು ಎಂದರು.
ಸಾನಿಧ್ಯ ವಹಿಸಿದ್ದ ಸೋಮ ಸಮುದ್ರದ ಶ್ರೀ ಕೊಟ್ಟೂರು ಸ್ವಾಮಿ ಮಠದ ಶ್ರೀ ಸಿದ್ಧಲಿಂಗ ದೇವರು ಆಶೀರ್ವಚ ನೀಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರು ಸಂವಿಧಾನ ರೂಪಿಸಿದವರು. ಅವರ ವಚನ ಗಳನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟ. ಮಹಾತ್ಮರನ್ನು ನೆನೆಯು ವುದರಿಂದ ಜೀವನ ಸುಂದರ ಸುಖಮಯವಾಗಿರುತ್ತದೆ, ಬಿದ್ದವ ರನ್ನು ಮೇಲೆತ್ತುವುದು ಬಸವಣ್ಣ ನವರ ಕಾಯಕವಾಗಿತ್ತು ಎಂದರು.
ಅಕ್ಕನ ಬಳಗದ ಅಧ್ಯಕ್ಷ ಶ್ರೀಮತಿ ಮಂಗಳ ವೀರಪ್ಪ ಭಾವಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಪಂಚಾಕ್ಷರಿ ಸಂಗೀತ ವಿದ್ಯಾಲಯದ ಟಿ. ಹೆಚ್. ಎಂ. ಶಿವಕುಮಾರ ಸ್ವಾಮಿ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಮಹಾ ರುದ್ರಪ್ಪ ಮೆಣಸಿನಕಾಯಿ ಸ್ವಾಗತಿಸಿದರು. ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಸಹ ಶಿಕ್ಷಕಿ ಶ್ರೀಮತಿ ತನುಜ ವಿ.ಬಿ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಸುಜತ ವಂದಿಸಿದರು. ಶ್ರೀಮತಿ ಸಂಗಮ್ಮಅಡಿವೆಪ್ಪ, ಶ್ರೀಮತಿ ನೀಲಮ್ಮ ಮಾಂತೇಶ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

This image has an empty alt attribute; its file name is Arya-coll.gif