ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಲೂಟ್ ಔರ್ ಜೂಟ್ ಕೀ ಸರ್ಕಾರದಿಂದ ಜನ ಬೇಸತ್ತಿದ್ದು ಈ ಬಾರಿಗೆ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ…

Share Below Link

ಶಿವಮೊಗ್ಗ: ಭವ್ಯ ಸಂಸ್ಕೃತಿ, ಪರಂಪರೆ ಹೊಂದಿರುವ ಕರ್ನಾಟಕದಲ್ಲಿ `ಲೂಟ್ ಔರ್ ಜೂಟ್ ಕೀ ಸರ್ಕಾರದಿಂದ ಜನ ಬೇಸತ್ತು ಹೋಗಿzರೆ. ಹೀಗಾಗಿ ಸರ್ವರ ಏಳಿಗೆಗಾಗಿ ಜನರು ಕಾಂಗ್ರೆಸ್ ಬೆಂಬಲಿಸುತ್ತಿದ್ದು, ಈ ಬಾರಿ ಕಾಂಗ್ರೆಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಎಐಸಿಸಿ ರಾಷ್ಟ್ರೀಯ ವಕ್ತಾರೆ ಹಾಗೂ ಎನ್‌ಎಸ್‌ಯುಐ ರಾಷ್ಟ್ರೀಯ ಮಾಜಿ ಅಧ್ಯಕ್ಷೆ ಅಲ್ಕಾಲಾಂಭಾ ವಿಶ್ವಾಸ ವ್ಯಕ್ತಪಡಿಸಿದರು
ಅವರು ಇಂದು ಜಿ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಜನರು ಕಾಂಗ್ರೆಸ್ ಪಕ್ಷದ ಬಗ್ಗೆ ಒಲವನ್ನು ತೋರಿ ಸುತ್ತಿರುವುದರಿಂದ ಈ ಬಾರಿ ೧೫೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ ಎಂದರು.
ದಕ್ಷಿಣ ಭಾರತವನ್ನು ಬಿಜೆಪಿ ಮುಕ್ತಗೊಳಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಜತಿ ಮತ್ತು ಧರ್ಮದ ಆಧಾರದ ಮೇಲೆ ಬಿಜೆಪಿ ಚುನಾವಣೆ ಎದುರಿಸು ತ್ತಿದ್ದು, ಇದು ಕರ್ನಾಟಕದಲ್ಲಿ ಸಾಧ್ಯವಿಲ್ಲ. ಮತದಾರರು ಬುದ್ಧಿ ವಂತರು. ಕಾಂಗ್ರೆಸ್‌ನಿಂದ ಮಹಿಳೆಯರಿಗೆ ಸುರಕ್ಷತೆ ಇದೆ ಎಂದ ಅವರು, ಈ ಬಾರಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯ ಲಿದ್ದು, ಗಾಂಧಿ- ಗೋಡ್ಸೆ ನಡುವೆ, ಸತ್ಯ ಮತ್ತು ಸುಳ್ಳು, ಹಿಂಸೆ ಮತ್ತು ಅಹಿಂಸೆ ನಡುವೆ ಹೋರಾಟ ನಡೆಯುತ್ತಿದ್ದು, ಬಿಜೆಪಿಯ ಭ್ರಷ್ಟಾಚಾರ ಶೇ.೪೦ರಷ್ಟು ಕಮಿಷ ನ್‌ನಿಂದಾಗಿ ಜನರು ಬೇಸತ್ತು ಹೋಗಿzರೆ. ಇದರಿಂದಾಗಿ ಕಾಂಗ್ರೆಸ್‌ಗೆ ಹೆಚ್ಚಿನ ಒಲವು ಕಾಣುತ್ತಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ, ೨೦೦ ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಪ್ರತಿ ತಿಂಗಳು ೨೦೦೦ರೂ. ನಿರು ದ್ಯೋಗಿ ಪದವೀಧರರಿಗೆ ೩೦೦೦ ಹಾಗೂ ಡಿಪ್ಲೊಮೊ ವಿದ್ಯಾರ್ಥಿ ಗಳಿಗೆ ೧೫೦೦ ರೂ., ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ನೀಡಿದ್ದು, ಆದರೆ ಇದುವರೆಗೂ ಬಿಜೆಪಿ ಯಾವುದೇ ಗ್ಯಾರಂಟಿ ಪ್ರಕಟಿಸಿಲ್ಲ ಎಂದರು.
ಅದೇ ರೀತಿ ರಾಜ್ಯದ ಅಂಗನ ವಾಡಿ ಕೇಂದ್ರದ ಕಾರ್ಯಕರ್ತೆ ಯರಿಗೆ ೧೫ ಸಾವಿರ ರೂ. ಹಾಗೂ ಸಹಾಯಕಿಯರಿಗೆ ೧೦ ಸಾವಿರ ರೂ.ವರೆಗೆ ವೇತನ ಹೆಚ್ಚಳ, ಆಶಾ ಕಾರ್ಯಕರ್ತೆಯರಿಗೆ ೮ ಸಾವಿರ, ಮತ್ತು ಅಡಿಕೆ ಸಹಾಯಕರು ಹಾಗೂ ಬಿಸಿಯೂಟ ನೌಕರರಿಗೆ ೫ಸಾವಿರ ವೇತನ, ಇವರು ಸೇವೆಯಿಂದ ನಿವೃತ್ತಿ ಹೊಂದಿದರೆ ಅಥವಾ ನಿಧನರಾದರೆ ೩ ಲಕ್ಷ ರೂ. ಹಾಗೂ ಸಹಾಯಕ ಅಂಗನವಾಡಿ ಕಾರ್ಯಕರ್ತೆಯರಿಗೆ ೨ಲಕ್ಷ ರೂ. ನೀಡುವುದಾಗಿ ಕಾಂಗ್ರೆಸ್ ಗ್ಯಾರಂ ಟಿ ನೀಡುತ್ತಿದೆ ಎಂದರು.
ಗ್ಯಾರಂಟಿ ನೀಡಿರುವ ಕಾಂಗ್ರೆಸ್‌ಗೆ ಎಲ್ಲಿಂದ ಹಣ ಎಲ್ಲಿಂದ ಬರುತ್ತದೆ ಎಂದು ಬಿಜೆಪಿ ಪ್ರಶ್ನೆ ಮಾಡುತ್ತಿದೆ. ಬಿಜೆಪಿ ಸರ್ಕಾರ ಲೂಟಿ ಮಾಡಿರುವ ಶೇ.೪೦ರಷ್ಟು ಕಮಿಷನ್ ಹಾಗೂ ಸಾರ್ವಜನಿಕ ತೆರಿಗೆ ಸೇರಿಸಿದರೆ ಇವೆಲ್ಲವನ್ನೂ ನೀಡಬಹುದಾಗಿದೆ ಎಂದ ಅವರು, ಬಿಜೆಪಿಯ ಕಾರ್ಯವೈಖರಿ ನೋಡಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ರಾಜ್ಯದ ಪ್ರಮುಖ ಸಮುದಾಯ ವಾದ ಲಿಂಗಾಯತ ಸಮುದಾಯ ವನ್ನು ಬಿಜೆಪಿ ಕಡೆಗಣಿಸುತ್ತಿದೆ. ಲಿಂಗಾಯತ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಹ ಈ ಬಾರಿ ಟಿಕೆಟ್ ನೀಡದೆ ನಿರ್ಲಕ್ಷಿ ಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಅಭ್ಯರ್ಥಿ ಹೆಚ್. ಸಿ.ಯೋಗೀಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಗಾ ಸುಲ್ತಾನ್, ರಾಷ್ಟ್ರೀಯ ಮುಖಂಡರಾದ ಉಡಾನ್ ರಾಣಾ, ಅನಿತಾ ಮೀನಾ, ಮಾಧ್ಯಮ ರಾಜ್ಯ ಉಪಾ ಧ್ಯಕ್ಷೆ ಸೌಗಂಧಿಕ ರಘುನಾಥ್, ಪ್ರಮುಖರಾದ ವಿಜಯಲಕ್ಷ್ಮಿ ಪಾಟೀಲ್, ಚಂದ್ರಶೇಖರ್, ಚಂದನ್, ಸಿ.ಎಸ್. ಚಂದ್ರ ಭೂಪಾಲ್ ಮತ್ತಿತರರಿದ್ದರು.