ಜಿಲ್ಲಾ ಸುದ್ದಿತಾಜಾ ಸುದ್ದಿ

ನೊಗದ ದನಿ ರೈತ ಗೀತೆ ಬಿಡುಗಡೆ…

Share Below Link

ಶಿವಮೊಗ್ಗ: ಪ್ರತಿಭೆಯನ್ನು ಉದಾತ್ತವಾಗಿ ನೋಡಿ ಬೆನ್ನುತಟ್ಟಿ ಪ್ರೋತ್ಸಾಹಿಸಿ ಎಂದು ಪತ್ರಕರ್ತ ಎನ್. ರವಿಕುಮಾರ್ ಹೇಳಿದ್ದಾರೆ.
ಗಾ.ರಾ. ಫಿಲಮ್ಸ್ ಪ್ರಸೆಂಟ್ಸ್ ವತಿಯಿಂದ ನೊಗದ ದನಿ ರೈತ ಗೀತೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಾನ ವನ ಜೀವನದೊಂದಿಗೆ ಪ್ರಕೃತಿ, ಭೂಮಿಗೆ ಮತ್ತು ನೇಗಿಲ ಯೋಗಿ ಗೆ ಅಗಾಧವಾದ ಸಂಬಂಧವಿದೆ. ರೈತರ ನೋವು ನಲಿವುಗಳು ಎಲ್ಲರಿ ಗೂ ಅರ್ಥವಾಗುವುದಿಲ್ಲ. ಯಾರು ಜೀವನದಲ್ಲಿ ಅತ್ಯಂತ ಕಷ್ಟಪಟ್ಟು ಜೀವನ ರೂಪಿಸಿಕೊಂಡಿ ದ್ದಾರೊ ಅವರಿಗೆ ಮಾತ್ರ ಅರ್ಥ ವಾಗುತ್ತದೆ. ಓರ್ವ ಪತ್ರಕರ್ತ, ಲೇಖಕ, ಚಳುವಳಿಗಾರ ಸಾಹಿತಿ ಯಾದ ಗಾ.ರಾ. ಶ್ರೀನಿವಾಸ್ ಅವರು ಎಲ್ಲಾ ರಂಗಗಳಲ್ಲೂ ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಮಾತನಾಡಿ, ಹಸಿದ ಹೊಟ್ಟೆಯ ನೋವು ಹಸಿದವನಿಗೆ ಮಾತ್ರ ತಿಳಿಯುತ್ತದೆ. ಸಾಮಾನ್ಯ ಜನರ ಸಂಕಷ್ಟದ ಅರಿವು ಗಾ.ರಾ. ಶ್ರೀನಿವಾಸ್‌ಗೆ ಇದೆ. ೨೨ ವರ್ಷ ರಾಜಕಾರಣದಲ್ಲಿ ನಾನು ಅನೇಕ ಏಳುಬೀಲು ಕಂಡಿದ್ದೇನೆ. ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆನ್ನುವುದೇ ಉದ್ದೇಶವಾಗಿರಬೇಕು. ಗಾ.ರಾ. ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ರೈತ ಮುಖಂಡ ಎಲ್. ಸತೀಶ್ ರೈತಗೀತೆ ಬಿಡುಗಡೆಯಲ್ಲಿ ಕೈಜೋಡಿಸಿದರು. ಗಾಯಕರಾದ ಉಷಾದೇವಿ ಉಡುಪ, ಸ್ವರ ಸಂಯೋಜಿ ಮಂಗಳಾ ಅಶೋಕ್ ಶಿವಮೆಗ್ಗ, ಸಂಗೀತ ನೀಡಿದ ಅದಿತ್ಯ ಎ., ಅನಂತನಾಗ ಸ್ಟುಡಿಯೋ, ಗ್ರಾಫಿಕ್ ಎಡಿಟರ್ ಕಾರ್ತಿಕ್, ಮಾರ್ಗ ದರ್ಶಕ ಶಿವಮೊಗ್ಗ ರಾಮಣ್ಣ ಇವರನ್ನು ಸನ್ಮಾನಿಸಲಾಯಿತು.
ಮುಕ್ತಿಯಾರ್ ಅಹ್ಮದ್, ಚಿನ್ನಪ್ಪ, ಜ್ಯೋತಿ ಹರಳಪ್ಪ, ನುಡಿಗಿಡ ಸಂಪಾದಕ ಹೆಚ್.ಎನ್. ಮಂಜುನಾಥ್ ಮೊದಲಾದವರಿ ದ್ದರು.