ಜಿಲ್ಲಾ ಸುದ್ದಿತಾಜಾ ಸುದ್ದಿ

ಉದಯನಿಧಿ-ಖರ್ಗೆ-ರಾಜಾರನ್ನು ಬಂಧಿಸದಿದ್ದರೆ ದೇಶಾದ್ಯಂತ ಪ್ರತಿಭಟನೆ…

Share Below Link

ಪೋಂಡಾ: ವಿಶ್ವಬಂಧುತ್ವದ ಶಿಕ್ಷಣ ನೀಡಿ, ಎಲ್ಲರನ್ನು ಸಮಾವೇಶಗೊಳಿಸಿ ಕೊಳ್ಳುವ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾ, ಏಡ್ಸ್ ಮತ್ತು ಕುಷ್ಠರೋಗ ಮುಂತಾದ ರೋಗಗಳೊಂದಿಗೆ ತುಲನೆ ಮಾಡಿ ಸನಾತನ ಧರ್ಮವನ್ನು ನಾಶಗೊಳಿಸುವ ಭಾಷೆಯನ್ನು ಆಡುವ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ತಮಿಳುನಾಡು ದ್ರಮುಕ ಸಂಸದ ಎ. ರಾಜ ದೇಶಾದ್ಯಂತ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಲ್ಲದೇ ಅವರೆಲ್ಲರೂ ತಮ್ಮ ಹೇಳಿಕೆಗೆ ಬದ್ಧರಾಗಿzರೆ. ಇದರಿಂದಾಗಿ ದೇಶಾದ್ಯಂತವಿರುವ ಹಿಂದೂಗಳಲ್ಲಿ ಆಕ್ರೋಶದ ಅಲೆ ಎದ್ದಿದೆ.
ಆದುದರಿಂದ ಅವರ ಮೇಲೆ ಭಾರತೀಯ ದಂಡ ಸಂಹಿತೆ ಕಲಂ ೧೫೩(ಎ), ೧೫೩(ಬಿ), ೨೯೫(ಎ), ೨೯೮, ೫೦೫ ಮತ್ತು ಐ.ಟಿ.ಕಾಯಿದೆ ಅಡಿಯಲ್ಲಿ ತಕ್ಷಣವೇ ಅಪರಾಧವನ್ನು ದಾಖಲಿಸಬೇಕು. ಇವರೆಲ್ಲರ ಮೇಲೆ `ರಾಷ್ಟ್ರೀಯ ಭದ್ರತಾ ಕಾಯಿದೆ(ಎನ್.ಎಸ್.ಎ) ದಾಖಲಿಸಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಹಿಂದೂ ಜನಜಗೃತಿ ಸಮಿತಿಯು ಕೇಂದ್ರ ಗೃಹಸಚಿವ ಸನ್ಮಾನ್ಯ ಅಮಿತ್ ಶಾ ಅವರಲ್ಲಿ ಮನವಿ ಮಾಡಿದೆ.
ಅವರ ಮೇಲೆ ಕ್ರಮ ಕೈಕೊಳ್ಳದಿದ್ದರೆ, ದೇಶಾದ್ಯಂತ ಉಗ್ರ ಪ್ರತಿಭಟನೆ ಕೈಕೊಳ್ಳಲಾಗುವುದು ಎಂದು ಸಮಿತಿಯು ಎಚ್ಚರಿಕೆಯನ್ನು ನೀಡಿದೆ. ಮುಂಬಯಿಯಲ್ಲಿ ದೇಶದ ವಿರೋಧ ಪಕ್ಷಗಳ ಸಮಾವೇಶವಿರುವ ಇಂಡಿಯಾ ಮೈತ್ರಿ ಕೂಟದ ಸಭೆ ನಡೆದ ಬಳಿಕ ಅದರಲ್ಲಿ ಭಾಗವಹಿಸಿರುವ ಕೆಲವು ಪಕ್ಷದವರಿಂದ ಸನಾತನ ಧರ್ಮವನ್ನು ಟೀಕಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂಚೂಣಿ ಯಲ್ಲಿzರೆ. ಕೋಟ್ಯಾಂತರ ಹಿಂದೂಗಳ ಶ್ರದ್ಧೆಯ ಮೇಲೆ ದಾಳಿ ಮಾಡಿ ದೇಶದ ಐಕ್ಯತೆ, ಅಖಂಡತೆ ಮತ್ತು ಶಾಂತಿಯನ್ನು ಅಪಾಯಕ್ಕೆ ದೂಡುತ್ತಿzರೆ.
ಹಾಗೆಯೇ ಸಚಿವರು ಮತ್ತು ಸಂಸದರು ಸಾಂವಿಧಾನಿಕ ಹುzಗಳಲ್ಲಿರುವ ವಿವಿಧ ಜವಾಬ್ದಾರಿಯುತ ವ್ಯಕ್ತಿಗಳೂ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರು ವುದು ಒಂದು ರೀತಿಯಲ್ಲಿ ಪ್ರಜಪ್ರಭುತ್ವದ ಸೋಲಾಗಿದೆ. ಈ ರೀತಿ ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ಧರ್ಮದ ವಿಷಯದಲ್ಲಿ ಹೇಳಿಕೆಗಳನ್ನು ನೀಡುವ ಧೈರ್ಯ ಈ ರಾಜಕೀಯ ಪಕ್ಷಗಳಲ್ಲಿ ಅಥವಾ ಅವರ ನಾಯಕರಲ್ಲಿ ಇದೆಯೇ? ಪದೇ ಪದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಹಿಂದೂಗಳನ್ನು ಗುರಿ ಮಾಡುವ ಇಂತಹ ಕಾನೂನುದ್ರೋಹಿ ಪ್ರತಿನಿಧಿಗಳನ್ನು ಸಂಪುಟ ದಿಂದ ಮಾತ್ರವಲ್ಲ ಶಾಸಕಾಂಗ- ಸಂಸತ್ತಿನಿಂ ದಲೂ ವಜಗೊಳಿಸಬೇಕೆಂದು ಆಗ್ರಹಿಸಿದೆ.
ಇತರ ಸಮಯಗಳಲ್ಲಿ ಹಿಂದೂಗಳ ವಿರುದ್ಧ ತ್ವರಿತವಾಗಿ ‘ದ್ವೇಷ ಭಾಷಣ’ ಪ್ರಕರಣ ಗಳನ್ನು ದಾಖಲಿಸುವಂತೆ ಪೊಲೀಸರಿಗೆ ಆದೇಶ ನೀಡಲಾಗುತ್ತದೆ; ಆದರೆ, ಹಲವು ದಿನಗಳಿಂದ ಸನಾತನ ಧರ್ಮದ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ಹೇಳಿಕೆಗಳು ನಡೆಯುತ್ತಿ ದ್ದರೂ ಸರ್ವೋಚ್ಚ ನ್ಯಾಯಾಲಯವೂ ಈ ವಿಷಯ ದಲ್ಲಿ ಸುಮೋಟೋ ಕ್ರಮ ಕೈಗೊಳ್ಳದಿರು ವುದು ದುರ್ದೈವವಾಗಿದೆ. ಇಂತಹ ಧಾರ್ಮಿಕ ವೈಷಮ್ಯವನ್ನು ನಿರ್ಮಾಣ ಮಾಡುವ ನಾಯಕರ ವಿರುದ್ಧ ದೂರು ದಾಖಲಿಸಿ, ಅವರಿಗೆ ಶಿಕ್ಷೆ ನೀಡದಿದ್ದರೆ ದೇಶದ ಶಾಂತಿ, ಐಕ್ಯತೆ, ಸಮಗ್ರತೆಗೆ ಧಕ್ಕೆ ಬರಲಿದೆ. ಹಾಗೆಯೇ, ದೇಶದಲ್ಲಿ ಗಲಭೆ ಸೃಷ್ಟಿಸಿ ಅರಾಜಕತೆಯ ನ್ನುಂಟು ಮಾಡುವ ಈ ಆರೋಪಿಗಳ ಉದ್ದೇಶ ಸಫಲವಾಗಲಿದೆ. ಒಂದು ವೇಳೆ ಇದು ಸಂಭವಿಸಿದರೆ, ಪೊಲೀಸರು ಮತ್ತು ಆಡಳಿತ ಇದಕ್ಕೆ ಹೊಣೆಯಾಗುತ್ತದೆ ಎಂದು ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.