ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮಾತೃಭಾಷೆಯಿಂದ ಬಹುಭಾಷಾ ಪ್ರಾವೀಣ್ಯತೆ ಸಾಧ್ಯ: ಡಾ| ಜಯಕುಮಾರ್

Share Below Link

ಶಿವಮೊಗ್ಗ: ಮಾತೃಭಾಷೆಯಲ್ಲಿ ಸಂಪೂರ್ಣ ಪಾಂಡಿತ್ಯ ಪಡೆಯುವ ಮೂಲಕ ಬಹು ಭಾಷೆಯಲ್ಲಿ ಸಹ ಪ್ರಾವೀಣ್ಯತೆ ಪಡೆಯಲು ಸಾಧ್ಯ ಎಂದು ಐಐಟಿ ಧಾರವಾಡದ ಪ್ರಾಧ್ಯಾಪಕರು ಹಾಗೂ ಸಲಹೆ ಗಾರರಾದ ಡಾ.ಕೆ.ವಿ. ಜಯ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶಾತಿ ಪಡೆದ ಬಿಇ ವಿದ್ಯಾರ್ಥಿಗಳಿಗಾಗಿ ಶನಿವಾರ ಏರ್ಪಡಿಸಿದ್ದ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಮಾತೃಭಾಷೆಯಲ್ಲಿಯೇ ಮಾತ ನಾಡಲು ಪ್ರಯತ್ನಿಸಿ. ಆಂಗ್ಲರಿ ಗಿಂತಲು ಇಂಗ್ಲೀಷ್ ಭಾಷೆಯನ್ನು ಉತ್ಕೃಷ್ಟವಾಗಿ ಮಾತನಾಡಬಲ್ಲ ಶಕ್ತಿ ಭಾರತೀಯರಿಗಿದೆ. ಒಂದು ವಿದ್ಯಾ ಸಂಸ್ಥೆಯ ಅಭಿವೃದ್ಧಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಪ್ರಮುಖ ವಾಗಿದ್ದು, ಹಿರಿಯ ವಿದ್ಯಾರ್ಥಿಗಳ ಸಂಘ ಹೆಚ್ಚು ಸಕ್ರಿಯರಾಗಿರುವಂತೆ ವಿದ್ಯಾ ಸಂಸ್ಥೆ ಕಾಳಜಿ ವಹಿಸಬೇಕಿದೆ.
ಬೋಧನೆಯಲ್ಲಿ ವಿಭಿನ್ನತೆ ಎಂಬುದು ಅತಿ ಮುಖ್ಯ. ಕೆಲವೊಮ್ಮೆ ಹಿರಿಯ ಉಪನ್ಯಾಸಕ ರಿಗಿಂತ, ಕಿರಿಯ ಉಪನ್ಯಾಸಕರು ವಿದ್ಯಾರ್ಥಿಗಳನ್ನು ತಲುಪುವಲ್ಲಿ ಯಶಸ್ವಿಯಾಗಿzರೆ. ಅದಕ್ಕೆ ಕಾರಣ ವಿಭಿನ್ನತೆಯ ಬೋಧನೆ ಮತ್ತು ನಾವೀನ್ಯಯುತ ಚಿಂತನೆ ಎಂದರು.
ಯೌವ್ವನವೆಂಬುದು ಬದುಕಿನ ಸೂಕ್ಷ್ಮ ವಿಚಾರವಾಗಿದ್ದು, ಬಹು ಮುಖಿ ವ್ಯಕ್ತಿತ್ವವನ್ನು ರೂಪಿಸಿ ಕೊಳ್ಳುವುದಕ್ಕಾಗಿ ನಿಮ್ಮ ವಿದ್ಯಾರ್ಥಿ ಜೀವನವನ್ನು ಸಮರ್ಥವಾಗಿ ಬಳಸಿಕೊಳ್ಳಿ. ಚಂಚಲತೆ ಎಂಬುದು ಎಂದಿಗೂ ನಿಮ್ಮನ್ನು ಕಾಡದಿರಲಿ ಎಂದು ಶುಭ ಹಾರೈಸಿದರು.
ಎನ್‌ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ಮಾತನಾಡಿ, ಎನ್‌ಇಎಸ್ ಸಂಸ್ಥೆ ಮಾನವ ಸಂಪನ್ಮೂಲದ ಜೊತೆಗೆ ಮಾನವೀಯ ಸಂಬಂಧಗಳಿಗೆ ಹೆಚ್ಚು ಬೆಲೆ ನೀಡುತ್ತಿದೆ. ವೃತ್ತಿ ಶಿಕ್ಷಣಕ್ಕೆ ಪ್ರವೇಶಾತಿ ಪಡೆಯುತ್ತಿರುವ ವಿದ್ಯಾರ್ಥಿಗಳು ದಯಮಾಡಿ ಎಂದಿಗೂ ನಿಮ್ಮ ತಂದೆ ತಾಯಿಗಳ ಆಶಯಗಳಿಗೆ ಮೋಸ ಮಾಡುವಂತಹ ಯೋಚನೆ ಮಾಡಬೇಡಿ. ತಾಯಿ ಮಕ್ಕಳ ದೈನಂದಿನ ಅಗತ್ಯ ನೋಡಿ ಕೊಂಡರೆ, ತಂದೆ ಭವಿಷ್ಯದ ಅಗತ್ಯತೆಯನ್ನು ನೋಡಿಕೊಳ್ಳು ತ್ತಾರೆ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಮುನ್ನಡೆಯಿರಿ ಎಂದು ಹೇಳಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತ ನಾಡಿ, ಲಾಭದ ಉzಶವಿಲ್ಲದೆ ಸರ್ವರಿಗೂ ಶಿಕ್ಷಣದ ಪ್ರಯೋಜನ ಸಿಗಬೇಕೆಂಬ ಸದುzಶದೊಂದಿಗೆ ಪ್ರಾರಂಭಗೊಂಡ ಎನ್‌ಇಎಸ್ ಸಂಸ್ಥೆ, ಹೊಸತನದ ಯೋಜನೆ ಗಳನ್ನು ವಿನ್ಯಾಸಗೊಳಿಸಿ ಅನುಷ್ಟಾನಗೊಳಿಸುವ ಪ್ರಯತ್ನದಲ್ಲಿ ಸಂಸ್ಥೆ ಮುನ್ನಡೆಯುತ್ತಿದ್ದು, ವೃತ್ತಿಪರ ಶಿಕ್ಷಣದಲ್ಲಿ ನಿಮ್ಮ ಕಲಿಕೆ ನಿಮ್ಮ ಮೂಲಕವೇ ಆಗಬೇಕಾದ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ಸರ್ವತೋಮುಖ ಅಭಿವೃದ್ಧಿಗೆ ಅವಕಾಶವಿರುವ ಎ ಪೂರಕ ವಾತಾವರಣ ಬಳಸಿಕೊಳ್ಳಿ. ಅಂಕಗಳ ಜೊತೆಗೆ ಕೌಶಲ್ಯತೆ ಮತ್ತು ವಿಷಯಾಧಾರಿತ eನವಿzಗ ಮಾತ್ರ ವಿಭಿನ್ನ ಅಭಿಯಂತರರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.
ಇದೇ ವೇಳೆ ಕಾಲೇಜಿನ ವಿಟಿಯು ರ್‍ಯಾಂಕ್ ವಿಜೇತ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಹಾನರ್ಸ್ ಪದವಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಣ್ಮನ ಸೆಳೆದ ರೋಬೊಟ್
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ್ದ ರೋಬೊ ನೆರೆದಿದ್ದವರ ಕಣ್ಮನ ಸೆಳೆಯಿತು. ಜೆಎಎಐಸಿಇ ಹೆಸರಿನ ರೋಬೊ ತನ್ನ ಎದುರು ನಿಂತು ಕಾಲೇಜಿನ ಕುರಿತು ಕೇಳುತ್ತಿದ್ದ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸಿತು. ತನಗೆ ಅಳವಡಿಸಿದ್ದ ದೊಡ್ಡ ಸ್ಪೀಕರ್ ಮೂಲಕ ವಾಯ್ಸ್ ಕಮ್ಯಾಂಡ್ ಬಳಸಿ ಪ್ರತಿಕ್ರಿಯಿಸುತ್ತಿತ್ತು.
ಕಾಲೇಜಿನ ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎನ್‌ಇಎಸ್ ಖಜಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಹೆಚ್.ಸಿ. ಶಿವಕುಮಾರ್, ಎಸ್. ಮಾಧುರಾವ್, ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ಎಂ.ಆರ್. ಸೀತಾಲಕ್ಷ್ಮೀ, ಎಂ.ಎಸ್. ಅನಂತದತ್ತ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಶೈಕ್ಷಣಿಕ ಡೀನ್ ಡಾ.ಪಿ. ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ. ಸತ್ಯನಾರಾಯಣ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *