ಜಿಲ್ಲಾ ಸುದ್ದಿತಾಜಾ ಸುದ್ದಿ

ಎಂ.ಆರ್ ಲಸಿಕಾಕರಣ : ಶೇ.೧೦೦ ರಷ್ಟು ಗುರಿ ಸಾಧಿಸಿ; ಡಿಸಿ ಸೂಚನೆ

Share Below Link

ಶಿವಮೊಗ್ಗ : ಮಾರಕ ದಡಾರ ರುಬೆ ರೋಗದಿಂದ ರಕ್ಷಿಸಲು ಎಲ್ಲ ಅರ್ಹ ಮಕ್ಕಳಿಗೆ ಎಂ.ಆರ್ ಲಸಿಕಾಕರಣ ಆಗಬೇಕು. ಈ ನಿಟ್ಟಿನಲ್ಲಿ ಯುzಪಾದಿಯಲ್ಲಿ ಕಾರ್ಯ ನಿರ್ವಹಿಸಿ ಶೇ.೧೦೦ ಗುರಿ ಸಾಧಿಸಬೇಕೆಂದು ಡಾ.ಸೆಲ್ವಮಣಿ ಆರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಡಾರ ರುಬೆ ನಿರ್ಮೂ ಲನಾ(ಎಂಆರ್ ಎಲಿಮಿನೇ ಷನ್) ೨೦೨೩ ರೋಡ್‌ಮ್ಯಾಪ್ ಕಾರ್ಯ ಕ್ರಮ ಹಾಗೂ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ(ಐಡಿಸಿಎಫ್) ಕುರಿತಾದ ಚಾಲನಾ ಸಮಿತಿ ಸಭೆ ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಡರಾ ರುಬೆ ಲಸಿಕಾಕರಣ ವನ್ನು ಗಂಭೀರವಾಗಿ ಪರಿಗಣಿಸ ಬೇಕು. ಯುzಪಾದಿಯಲ್ಲಿ ಕಾರ್‍ಯ ನಿರ್ವಹಿಸಿ ಶೇ.೧೦೦ ರಷ್ಟು ಲಸಿಕೆ ಹಾಕಬೇಕು. ಯಾವುದೇ ಅರ್ಹ ಮಕ್ಕಳು ಎಂ.ಆರ್. ಲಸಿಕಾ ಕರಣದಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು.
೨೦೨೩ ರ ಡಿಸೆಂಬರ್ ಅಂತ್ಯದ ವೇಳೆಗೆ ದಡಾರ-ರುಬೆ ನಿಮೂ ಲನೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದ್ದು ಮಕ್ಕಳನ್ನು ಎಂ.ಆರ್.ವೈರಸ್ ಸೋಂಕಿನಿಂದ ಮುಕ್ತಗೊಳಿಸಿ ಅದರಿಂದುಂ ಟಾಗುವ ಸಾವುಗಳನ್ನು ತಡೆಗಟ್ಟು ವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.ಮನೆ ಮನೆ ಭೇಟಿ ನೀಡಿ ೦ ಯಿಂದ ೫ ವರ್ಷದ ಮಕ್ಕಳನ್ನು ಗುರುತಿಸಿ, ಲಸಿಕೆ ಪಡೆದಿzರೆಯೇ ಎಂದು ಖಚಿತ ಪಡಿಸುವುದು, ಬಿಟ್ಟು ಹೋದ ಮಕ್ಕಳನ್ನು ಪತ್ತೆ ಹಚ್ಚುವುದು ಹಾಗೂ ಅವರಿಗೆ ಪೂರ್ಣ ಪ್ರಮಾ ಣದ ಲಸಿಕೆ ನೀಡಿ ಶೇ.೧೦೦ ಪ್ರಗತಿ ಸಾಧಿಸಲು ಅಗತ್ಯವಾದ ಸರ್ವೇ ಕಾರ್ಯ, ಅರಿವು ಮೂಡಿಸುವ ಕಾರ್‍ಯಕ್ರಮವನ್ನು ಪರಿಣಾಮಕಾರಿ ಯಾಗಿ ಕೈಗೊಳ್ಳಬೇಕು. ಹಾಗೂ ಎಂಆರ್ ಕಾಯಿಲೆ ಇರುವ ಮಕ್ಕಳ ನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡ ಬೇಕು.


ಪ್ರತಿದಿನ ಸಂಜೆ ಲಸಿಕಾಕರಣದ ಕುರಿತು ಜಿ.ಪಂ ಸಿಇಓ ಅವರಿಗೆ ವರದಿ ಸಲ್ಲಿಸಬೇಕು. ಸಿಇಓ ಅವರು ಪ್ರತಿವಾರ ಈ ಬಗ್ಗೆ ಪ್ರಗತಿ ಪರಿಶೀ ಲನೆ ಮಾಡುತ್ತಾರೆ. ಡಿಹೆಚ್‌ಓ ರವರು ಕಡಿಮೆ ಲಸಿಕಾಕರಣ ಆದ ತಾಲ್ಲೂಕುಗಳಲ್ಲಿ ವಿಶೇಷ ಸರ್ವೇ ಮಾಡಿ ಸ್ಥಳೀಯ ಆಡಳಿತ ಸಂಸ್ಥೆ ಗಳು, ಇಲಾಖೆಗಳ ಸಹಕಾರದೊ ಂದಿಗೆ ಶೇ.೧೦೦ ಲಸಿಕಾಕರಣ ಮಾಡಬೇಕು ಎಂದು ಸೂಚನೆ ನೀಡಿದರು.
ಲಸಿಕಾಕರಣ ಕೇವಲ ಆರೊ ಗ್ಯ ಇಲಾಖೆಯ ಕೆಲಸ ಮಾತ್ರ ವಲ್ಲ. ಇದೊಂದು ಸಾಮೂಹಿಕ ಜವಾಬ್ದಾರಿಯಾಗಿದ್ದು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವೃತ್ತಿ ನಿರತ ಸಂಘಟನೆಗಳು ಸಮನ್ವಯ ಸಾಧಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು ಎಂದರು.
ಜಿ.ಪಂ.ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಮಾತ ನಾಡಿ ಬ್ಲಾಕ್‌ವಾರು ಕಡಿಮೆ ಲಸಿಕಾ ಕರಣ ಆಗಿರುವೆಡೆ ಕೇಂದ್ರೀಕರಿಸಿ ತಾಲ್ಲೂಕು ವೈದ್ಯಾಧಿಕಾರಿಗಳು, ಸಿಡಿಪಿಓ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಭೆ ನಡೆಸಿ, ಮನೆ ಮನೆ ಅಭಿಯಾನ ಕೈಗೊಂಡು ಶೇ.೧೦೦ ಲಸಿಕಾಕರಣ ಆಗಬೇಕೆಂದರು.
ಆರ್‍ಸಿಹೆಚ್‌ಓ ಅಧಿಕಾರಿ ಡಾ. ನಾಗರಾಜನಾಯ್ಕ್ ಮಾತನಾಡಿ ೫ ವರ್ಷದೊಳಗಿನ ಮಕ್ಕಳ ಮರಣಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ ತೀವ್ರತರ ಅತಿಸಾರ ಬೇಧಿಯೂ ಒಂದು ಪ್ರಮುಖ ಕಾರಣವಾ ಗಿದ್ದು, ಒಟ್ಟು ಸಾವಿನ ಪ್ರಮಾಣ ದಲ್ಲಿ ಶೇ.೫.೭ ಪ್ರತಿಶತ ಸಾವು ಈ ಕಾಯಿಲೆಯಿಂದ ಸಂಭವಿಸುತ್ತದೆ. ಇದನ್ನು ತಡೆಗಟ್ಟುವ ಉದ್ದೇಶದಿ ಂದ ಪ್ರತಿ ವರ್ಷ ಮೇ ಅಥವಾ ಜೂನ್ ತಿಂಗಳಲ್ಲಿ ತೀವ್ರತರ ಅತಿ ಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗು ವುದು. ೦ ರಿಂದ ೫ ವರ್ಷದ ಮಕ್ಕ ಳು ಇರುವ ಮನೆಗಳಿಗೆ ಓಆರೆಸ್ ಪೊಟ್ಟಣ ನೀಡುವುದು ಮತ್ತು ಅತಿಸಾರ ಬೇಧಿ ಲಕ್ಷಣ ಕಂಡು ಬಂದ ಮಕ್ಕಳಿಗೆ ಚಿಕಿತ್ಸೆ ಮತ್ತು ಅರಿವು ನೀಡಲಾಗುವುದು ಎಂದರು.


ಜಿಧಿಕಾರಿಗಳು ಪ್ರತಿಕ್ರಿ ಯಿಸಿ, ಮಳೆಗಾಲ ಆರಂಭವಾಗು ತ್ತಿದೆ. ಎಲ್ಲ ಅಂಗನವಾಡಿ, ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಓಆರೆಸ್ ಪೊಟ್ಟಣ ಸಿದ್ದಪಡಿಸಿ ಇಟ್ಟುಕೊಳ್ಳಬೇಕು. ಮನೆ-ಮನೆಗೆ ತೆರಳಿ ಅತಿಸಾರ ಬೇಧಿ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು. ೫ ವರ್ಷದೊಳ ಗಿನ ಮಕ್ಕಳಿರುವ ಮನೆಗಳಿಗೆ ತೆರಳಿ ಓಆರ್ ಎಸ್ ಪೊಟ್ಟಣ ನೀಡ ಬೇಕು. ಕೈತೊಳೆಯುವ ವಿಧಾನದ ಬಗ್ಗೆ ಎಡೆ ಅರಿವು ಮೂಡಿ ಸುವುದರೊಂದಿಗೆ ಮೈಕ್ರೊಪ್ಲಾನ್ ತಯಾರಿಸಿ, ಐಇಸಿ ಚಟುವಟಿಕೆ ಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದರು
ಜಿ ಕುಷ್ಟರೋಗ ನಿವಾರ ಣಾಧಿಕಾರಿ ಡಾ.ಶಮಾ ಮಾತ ನಾಡಿ, ಕುಷ್ಟರೋಗ ಲಕ್ಷಣ ಕಂಡುಬಂದ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಚಿಕಿತ್ಸೆ ಪಡೆಯದ ಕುಷ್ಟರೋಗಿಗಳ ಮೂಗಿನ ದ್ರವದಿಂದ, ಉಸಿರಿನ ಮೂಲಕ ಆರೋಗ್ಯವಂತರಿಗೆ ಹರಡುತ್ತದೆ. ಆದ್ದರಿಂದ ಲಕ್ಷಣ ಕಂಡು ಬಂದ ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳಬೇಕು. ಈ ರೋಗ ವನ್ನು ಬಹು ಔಷಧಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬ ಹುದು.
ಕಳೆದ ಸಾಲಿನಲ್ಲಿ ಜಿಯಲ್ಲಿ ೪೦ ಪ್ರಕರಣ ಪತ್ತೆಯಾಗಿದ್ದು ಪ್ರಸಕ್ತ ಸಾಲಿನ ಇಲ್ಲಿಯವರೆಗೆ ೧೨ ಪ್ರಕ ರಣ ಪತ್ತೆಯಾಗಿದೆ. ಎಲ್ಲ ತಾಲ್ಲೂ ಕುಗಳಲ್ಲಿ ಅರಿವು ಕಾರ್ಯಕ್ರಮ, ಆರಂಭಿಕ ಪತ್ತೆ ಅಭಿಯಾನ, ರಾಷ್ಟ್ರೀಯ ಕುಷ್ಟರೋಗ ನಿವಾg ಣಾ ಕಾರ್‍ಯ ಕ್ರಮ, ಐಇಸಿ ಮೂಲಕ ಕುಷ್ಟ ರೋಗ ನಿರ್ಮೂನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿ ತಿ ನೀಡಿದರು

ಜಿಧಿಕಾರಿಗಳು, ಕುಷ್ಟರೊ ಗ ನಿರ್ಮೂಲನೆಗೆ ನಿರಂತರವಾಗಿ ಸರ್ವೇ ಕಾರ್ಯ ನಡೆಸಿ, ರೋಗಿಗ ಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ನಿರಂತರ ಸರ್ವೇ ಕಾರ್ಯ ಕೈಗೊಂ ಡು ಜಿ.ಪಂ. ಸಿಇಓ ಅವರಿಗೆ ವರದಿ ಸಲ್ಲಿಸಬೇಕು, ಗ್ರಾಪಂ. ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗ ದೊಂದಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸಮು ದಾಯದಲ್ಲಿ ಈ ಬಗ್ಗೆ ಅರಿವು ಹೆಚ್ಚಿಸ ಬೇಕು. ಶಾಲಾ ಪ್ರಾರ್ಥನೆ ಅವಧಿಯಲ್ಲಿ ಈ ಬಗ್ಗೆ ತಿಳಿಸಬೇಕು. ಹಾಗೂ ಎನ್‌ಜಿಓ ಸಹಯೋಗ ದಲ್ಲಿ ಹೆಚ್ಚಿನ ಅರಿವು ಮತ್ತು ಪತ್ತೆ ಹಚ್ಚುವ ಕೆಲಸ ಆಗಬೇಕು. ಪರಿಣಾ ಮಕಾರಿಯಾಗಿ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿ ದರು.
ಜಿ ಸರ್ವೇಕ್ಷಣಾಧಿಕಾರಿ ಡಾ.ಮಲ್ಲಪ್ಪ ಮಾತನಾಡಿ, ವಿಶ್ವ ತಂಬಾಕುರಹಿತ ದಿನಾಚರಣೆ ಅಂಗವಾಗಿ ಮೇ.೩೧ ರಂದು ನಗರದಲ್ಲಿ ಜಗೃತಿ ಜಥಾ ಹಾಗೂ ತಾಲ್ಲೂಕುಗಳಲ್ಲಿ ಗುಲಾಬಿ ಆಂದೊ ಲನ ಹಮ್ಮಿಕೊಳ್ಳಲಾಗಿತ್ತು ಎಂದರು.
ಇದೇ ವೇಳೆ ಕುಷ್ಟರೋಗ ಪತ್ತೆ ಹಚ್ಚು ಆಂದೋಲನ-೨೦೨೩ ಮತ್ತು ಕುಷ್ಟರೋಗ ಮುಕ್ತ ಭಾರ ತದ ಕಡೆಗೆ ಎಂಬ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಡಿಹೆಚ್‌ಓ ಡಾ. ರಾಜೇಶ್ ಸುರಗಿಹಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಸುರೇಶ್, ಜಿ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಸಿಡಿಪಿಓ ಗಳು, ವೈದ್ಯಾಧಿಕರಿಗಳು, ಅಧಿಕಾರಿಗಳು ಹಾಜರಿದ್ದರು.