ಇತರೆಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಗಾಂಜಾ ಬೆಳೆದ ವೈದ್ಯ ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ…

Share Below Link

ಶಿವಮೊಗ್ಗ: ಮನೆಯಲ್ಲಿಯೇ ಹೈಟೆಕ್ ಮಾದರಿಯಲ್ಲಿ ಗಾಂಜ ಬೆಳೆದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಗಾಂಜ ಬೆಳೆದ ಎಂಬಿ ಬಿಎಸ್, ಎಂಡಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿzರೆ.
ತಮಿಳುನಾಡಿನ ವಿಘ್ನರಾಜ್ (೨೮), ಪಾಂಡಿದೊರೈ (೨೭) ಹಾಗೂ ಕೇರಳದ ವಿನೋದ್ ಕುಮಾರ್ (೨೭) ಬಂಧಿತ ವಿದ್ಯಾರ್ಥಿಗಳು.
ಈ ಕುರಿತು ಮಾಹಿತಿ ನೀಡಿ ರುವ ಎಸ್ಪಿ ಮಿಥುನ್‌ಕುಮಾರ್, ಶಿವಮೊಗ್ಗದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ತಾವು ಬಾಡಿಗೆ ಪಡೆದ ಮನೆಯಲ್ಲಿ ಪಾಲಿ ಹೌಸ್ ಮಾದರಿಯಲ್ಲಿ ಕೃತಕವಾಗಿ ಗಾಂಜ ಬೆಳೆಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶಿವ ಮೊಗ್ಗ ಗ್ರಾಮಾಂತರ ಪೊಲೀಸರು ದಾಳಿ ನಡೆಸಿzರೆ ಎಂದು ತಿಳಿಸಿ zರೆ.
ದಾಳಿಯ ವೇಳೆ ಪೊಲೀಸರಿಗೆ ೨೨೭ ಗ್ರಾಂ ಒಣ ಗಾಂಜ, ೧.೫೩೦ ಕೆ.ಜಿ ಹಸಿ ಗಾಂಜ, ೧೦ ಗ್ರಾಂ ಚರಸ್, ಗಾಂಜ ಬೀಜಗಳು, ೩ ಕೆನಾಬಿಸ್ ಆಯಿಲ್, ಸಿರೀಂಜ್ ರೀತಿಯ ವಸ್ತುಗಳು, ೩ ರಾಡುಗಳ ಮೇಲೆ ಕಪ್ಪು ಬಣ್ಣದ ಕವರ್ ಸುತ್ತಿದ ಸ್ಟಾಂಡ್‌ಗಳು, ಗಾಂಜ ಪುಡಿ ಮಾಡಲು ಬಳಸುವ ೨ ಡಬ್ಬಿಗಳು, ೧ ತೂಕದ ಯಂತ್ರ, ೧ ಎಕ್ಸಿಟ್ ಫ್ಯಾನ್, ೬ ಟೇಬಲ್ ಫ್ಯಾನ್, ೨ ೨ ಸ್ಟೆಬಲೈಸರ್, ೩ ಎಲ್‌ಇಡಿ ಲೈಟ್, ರೋಲಿಂಗ್ ಪೇಪರ್, ೨ ಹುಕ್ಕಾ ಕೊಳವೆ ಮತ್ತು ೪ ಹುಕ್ಕಾ ಕ್ಯಾಪ್, ಗಾಂಜ ಗಿಡದ ಕಾಂಡ, ೧೯ ಸಾವಿರ ರೂ. ವಶಕ್ಕೆ ಪಡೆದುಕೊಂಡಿzರೆ. ಬಂಧಿತರ ವಿರುದ್ಧ ೦೧೯೫/೨೦೨೩ ಕಲಂ ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತರೆಲ್ಲರೂ ವೈದ್ಯಕೀಯ ವಿದ್ಯಾರ್ಥಿಗಳು. ಇದರಲ್ಲಿ ವಿಘ್ನ ರಾಜ್ ಎಂಬಾತ ಶಿವಮೊಗ್ಗದ ಶಿವ ಗಂಗಾ ಲೇಔಟ್‌ನಲ್ಲಿ ಮನೆಯನ್ನು ಬಾಡಿಗೆ ಪಡೆದು ಕೃತ್ಯ ಎಸಗಿzರೆ. ಮನೆಯಲ್ಲಿಯೇ ಗಾಂಜವನ್ನು ಪಾಲಿ ಹೌಸ್ ಮಾದರಿಯಲ್ಲಿ ರಾಜ್ಯದಲ್ಲಿ ಪ್ರಥಮವಾಗಿ ಬೆಳೆದ ಪ್ರಕರಣ ಇದಾಗಿದೆ. ಗಾಂಜ ಬೆಳೆ ಯಲು ಗಾಂಜ ಬೀಜ, ಮಣ್ಣು, ಔಷಧ ಸೇರಿದಂತೆ ಎವನ್ನು ಆನ್‌ಲೈನ್‌ನಲ್ಲಿಯೇ ಖರೀದಿ ಮಾಡಿzರೆ ಎಂದು ತಿಳಿಸಿzರೆ.
ಪಾಲಿ ಹೌಸ್ ಮಾದರಿಯಲ್ಲಿ ಮನೆಯಲ್ಲಿ ಸುಮಾರು ೯ ಅಡಿ ಎತ್ತರದ ಬಾಕ್ಸ್ ನಿರ್ಮಾಣ ಮಾಡಿ, ಅದರಲ್ಲಿ ಗಾಂಜ ಬೆಳೆ ಯುತ್ತಿದ್ದರು. ಕೃತಕವಾಗಿ ಬೆಳೆಯ ಲು ಟೆಂಟ್ ಒಳಗೆ ಲೈಟ್, ಫ್ಯಾನ್ ಅಳವಡಿಸಿ, ಅಲ್ಲಿ ಸರಿಯಾದ ತಾಪ ಮಾನ ಇರುವಂತೆ ನೋಡಿಕೊಂಡಿ ದ್ದರು. ಕಳೆದ ಐದು ತಿಂಗಳಿನಿಂದ ಕೃತಕವಾಗಿ ಗಾಂಜ ಬೆಳೆಯುತ್ತಿ ದ್ದರು. ಬಂಧಿತ ಮೂವರರನ್ನು ೧೧ ದಿನಗಳವರೆಗೆ ನ್ಯಾಯಾಂಗ ಬಂಧ ನಕ್ಕೆ ಒಳಪಡಿಸಲಾಗಿದೆ ಎಂದು ಹೇಳಿzರೆ.
ಮನೆಯಲ್ಲಿ ಗಾಂಜ ಮಾರಾಟ:
ಪ್ರತ್ಯೇಕ ಪ್ರಕರಣದಲ್ಲಿ ಮನೆ ಯ ಗಾಂಜ ಮಾರಾಟ ಮಾಡುತ್ತಿದ್ದ ಖಾಸಗಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಜೂ.೨೨ರಂದು ಬಂಧಿಸಲಾಗಿತ್ತು. ಬಂಧಿತರಾದ ಅಬ್ದುಲ್ ಹಾಗೂ ಅರ್ಪಿತ ಎಂಬುವರು ಒಂದೇ ಮನೆಯಲ್ಲಿ ವಾಸವಾಗಿದ್ದರು. ಇವರು ತಾವು ವಾಸವಿದ್ದ ೩ನೇ ಮಹಡಿಯಿಂದ ಸಣ್ಣ ಸಣ್ಣ ಪ್ಯಾಕೇಟ್‌ನಲ್ಲಿ ಗಾಂಜವನ್ನು ಮಾರಾಟ ಮಾಡುತ್ತಿದ್ದರು.
ಮೊದಲು ತಮಗೆ ಆನ್ ಲೈನ್‌ನಲ್ಲಿ ಹಣ ಪೇಮೆಂಟ್ ಆದ ಬಳಿಕ ಗಾಂಜವನ್ನು ಮೇಲಿಂದ ಕೆಳಗೆ ಹಾಕುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಇಬ್ಬರ ನ್ನು ಬಂಧಿಸಲಾಗಿದೆ. ಅಬ್ದುಲ್ ಕುಯ್ಯಂ ವಿಜಯಪುರದ ವಾಸಿ ಯಾಗಿದ್ದು, ಅರ್ಪಿತ ಬಳ್ಳಾರಿ ಜಿಯ ಕೊಟ್ಟೂರು ನಿವಾಸಿಯಾಗಿzರೆ.