ಜಿಲ್ಲಾ ಸುದ್ದಿತಾಜಾ ಸುದ್ದಿ

ಪೂರ್ವಜರ ಚಿಂತನೆಗಳೊಂದಿಗೆ ಹೊಸತಲೆಮಾರಿನ ನಾವೀನ್ಯ ಪ್ರಯೋಗಗಳು ನಿಮ್ಮದಾಗಲಿ: ದೇಸಾಯಿ

Share Below Link

ಶಿವಮೊಗ್ಗ : ನಮ್ಮ ಪೂರ್ವ ಜರು ಹಾಕಿ ಕೊಟ್ಟ ಶಿಕ್ಷಣ ಪದ್ದತಿ ನಾವೀನ್ಯ ಚಿಂತನೆಗಳನ್ನು ಮರೆ ಯುತ್ತಿದ್ದು ಆಧುನಿಕತೆಯ ಭರದ ಲ್ಲಿರುವ ನಾವೂ ಕಲ್ಪನಾ ದಾರಿದ್ರ್ಯ ದಿಂದ ಹೊರಬರಬೇಕಿದೆ ಎಂದು ಧಾರವಾಡ ಭಾರತೀಯ ತಂತ್ರ eನ ಸಂಸ್ಥೆಯ ನಿರ್ದೇಶಕರಾದ ವೆಂಕಪಯ್ಯ.ಆರ್.ದೇಸಾಯಿ ಅಭಿಪ್ರಾಯಪಟ್ಟರು.
ನಗರದ ಜೆಎನ್‌ಎನ್ ಎಂಜಿನಿ ಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಪ್ರಥಮ ವರ್ಷದ ಎಂಜಿನಿಯ ರಿಂಗ್ ವಿದ್ಯಾರ್ಥಿಗಳಿಗಾಗಿ ಏರ್ಪ ಡಿಸಿದ್ದ ಓರಿಯಂಟೇಷನ್ ಕಾರ್ಯ ಕ್ರಮ ಹಾಗೂ ಅಭಿಯಂತರರ ದಿನಾಚರಣೆ ಉದ್ಘಾಟಿಸಿ ಮಾತನಾ ಡಿದ ಅವರು ಪೂರ್ವಜರು ಅಖಂ ಡ ಶಿಲೆಗಳನ್ನು ವೈeನಿಕವಾಗಿ ಕೊರೆದು ಸುಂದರ ದೇವಾಲಯ ಗಳನ್ನು ನಿರ್ಮಾಣ ಮಾಡಿzರೆ. ಸಾವಿರ ವರ್ಷಗಳ ಹಿಂದೆಯೇ ನಾಲ್ಕು ತಲೆಮಾರುಗಳು ಅದ್ಭುತ ಚಿಂತನೆ ಗಳೊಂದಿಗೆ ಅತ್ಯುತ್ತಮ ಕಲಾ ಕೃತಿಗಳನ್ನು, ಕಟ್ಟಡ ದೇವಾಲಯ ಗಳನ್ನು ಸೃಷ್ಟಿಸಿದ ಉದಾಹರಣೆ ಗಳಿವೆ. ಈ ಎ ವಿಷಯಗಳು ನಮ್ಮ ಪೂರ್ವಜರ ನಾವೀನ್ಯ ಅಭಿಯಂತರ ಚಿಂತನೆಗಳಿಗೆ ಕೈಗನ್ನಡಿಯಾಗಿದೆ.


ಹೊಸತಲೆಮಾರಿನ ನಾವೀನ್ಯ ಚಿಂತನೆಗಳಲ್ಲಿ ಪರಿಸರದ ನಡುವಿನ ಅನೇಕ ಸವಾಲುಗಳಿಗೆ ತಾಂತ್ರಿಕ ಪರಿಹಾರ ನೀಡಲಾಗುತ್ತಿದೆ. ಟಾಟಾ ಕಂಪನಿ ತನ್ನ ಸಂಪೂರ್ಣ ಕಾರ್ಖಾನೆಗಳ ಪ್ರಾಂಗಣದಲ್ಲಿ ಸ್ವಯಂ ವಿದ್ಯುತ್ ಉತ್ಪಾದನೆ ಮತ್ತು ನೀರುರಹಿತ ಶೌಚಾಲಯ ಗಳನ್ನು ನಿರ್ಮಾಣ ಮಾಡಿzರೆ.
ಜಪಾನ್ ಪ್ರತಿಯೊಂದು ಶಾಲೆ ಯಲ್ಲಿ ಸ್ವಯಂ ಸ್ವಚ್ಚತಾ ಯೋಜನೆ ಗಳನ್ನು ರೂಪಿಸಿzರೆ. ಹೈನುಗಾ ರಿಕೆ, ಕೃಷಿ, ತೋಟಗಾರಿಕೆ, ಜತಕ ಫಲದ ಕಂಡುಕೊಳ್ಳುವಿಕೆ ಹೀಗೆ ಎ ಹಂತಗಳಲ್ಲಿ ನಾವೀನ್ಯತೆ ಅಳವಡಿಸಿಕೊಳ್ಳುವ ಅವಕಾಶವನ್ನು ಅಭಿಯಂತರರು ಮಾಡಬಹುದಾ ಗಿದೆ. ಹನಿ ನೀರಾವರಿ ಮೂಲಕ ಕಡಿಮೆ ಮಳೆ ಬೀಳುವ ಸ್ಥಳದ ಲ್ಲಿಯು ಹೆಚ್ಚಿನ ಇಳುವರಿ ಪಡೆಯ ಬಹುದಾದ ಪ್ರಯೋಗ ಇಸ್ರೇಲ್ ಮಾಡಿ ಯಶಸ್ವಿಯಾಗಿzರೆ.
ನಮ್ಮ ಪೂರ್ವಜರು ಬಿಟ್ಟು ಹೋಗಿರುವ ಅದ್ಭುತ ಉದಾ ಹರಣೆಗಳಿಂದ ಪ್ರೇರಣೆ ಪಡೆ ಯಿರಿ. ಪೂರ್ವಜರ ಚಿಂತನೆಗಳೊ ಂದಿಗೆ ಹೊಸತಲೆಮಾರಿನ ನಾವೀನ್ಯ ಪ್ರಯೋಗಗಳು ನಿಮ್ಮದಾಗಲಿ.
ಹುzಯ ಹಿಂದೆ ಬಿದ್ದಂತಹ ವ್ಯಕ್ತಿತ್ವಗಳೇ ಹೆಚ್ಚಿರುವವರ ನಡುವೆ, ಸರ್.ಎಂ.ವಿಶ್ವೇಶ್ವರಯ್ಯ ಅವರ ವ್ಯಕ್ತಿತ್ವಕ್ಕೆ ಅನೇಕ ಹುzಗಳು ಅರಸಿ ಬಂದವು. ಅಂತಹ ವೈಶಿಷ್ಟ್ಯ ಪೂರ್ಣ ಅದ್ಭುತ ವ್ಯಕ್ತಿತ್ವ ವಿಶ್ವೇಶ್ವ ರಯ್ಯ ಅವರದಾಗಿತ್ತು ಎಂದರು.
ಪ್ರಾಸ್ತಾವಿಕ ಮಾತುಗಳನ್ನಾ ಡಿದ ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತ ನಾಡಿ, ಗಾಂಧೀಜಿಯವರ ಕರೆಯ ಮೇರೆಗೆ ಸ್ಥಾಪಿಸಲ್ಪಟ್ಟ ಎನ್‌ಇಎಸ್ ಸಂಸ್ಥೆ ಎಲ್ಲರಿಗೂ ಕೈಗೆಟುಕುವ ರೀತಿಯಲ್ಲಿ ಶಿಕ್ಷಣ ನೀಡುತ್ತ ಬಂದಿದೆ. ಕಾಲಕ್ಕೆ ತಕ್ಕಂತೆ ಹೊಸ ತಾಂತ್ರಿಕ ವಿಷಯಗಳನ್ನು ಅಳವಡಿ ಸಿಕೊಂಡು ಬರುತ್ತಿದೆ. ಕಾಲೇಜಿಗೆ ದಾಖಲಾತಿ ಮಾಡಿದ ಮಾತ್ರಕ್ಕೆ ಪೋಷ ಕರು ಜವಾಬ್ದಾರಿಯಿಂದ ನುಣು ಚಿ ಕೊಳ್ಳಬೇಡಿ. ಮಕ್ಕಳ ಪ್ರತಿಯೊಂ ದು ವಿದ್ಯಾಭ್ಯಾಸದ ನಡೆಗೆ ಗಮನ ಹರಿಸಲು ಕಾಲೇಜಿನ ಮೆಂಟಾರ್ ವ್ಯವಸ್ಥೆಗಳನ್ನು ಬಳಸಿ ಕೊಳ್ಳಿ ಎಂದರು.
ಕಾರ್‍ಯಕ್ರಮದಲ್ಲಿ ಎನ್‌ಇ ಎಸ್ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್‍ಯದರ್ಶಿ ಡಾ.ಪಿ.ನಾರಾಯಣ್, ಖಜಂಚಿ ಡಿ.ಜಿ.ರಮೇಶ್, ನಿರ್ದೆ ಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎನ್.ಟಿ.ನಾರಾಯಣ ರಾವ್, ಹೆಚ್.ಸಿ.ಶಿವಕುಮಾರ್, ಮಧುರಾವ್, ಎಂ.ಆರ್. ಸೀತಾ ಲಕ್ಷ್ಮೀ, ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮ ಚಂದ್ರ, ಪ್ರಾಂಶುಪಾಲರಾದ ಡಾ. ಪಿ.ಮಂಜುನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗ ದಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಹಾಗೂ ಆರು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಪಾರ್ವತಿ ಸಲೆರಾ ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿ ಕಮ್ಯುನಿಕೇಷನ್ ಎಂಜಿನಿಯ ರಿಂಗ್ ವಿಭಾಗದಲ್ಲಿ ಒಂಬತ್ತನೇ ರ್‍ಯಾಂಕ್ ಪಡೆದ ಸ್ಮೃತಿ.ಕೆ.ವಂತಕರ್ ಅವರನ್ನು ಅಭಿನಂದಿಸಲಾಯಿತು.