ಜಿಲ್ಲಾ ಸುದ್ದಿತಾಜಾ ಸುದ್ದಿ

ನಮ್ಮೊಡನಿರುವ ಮಹಿಳಾ ಸಾಧಕಿಯರೇ ನಮಗೆ ಸ್ಪೂರ್ತಿಯಾಗಲಿ…

Share Below Link

ಶಿವಮೊಗ್ಗ : ಇಲ್ಲಿನ ಸ್ಕೌಟ್ ಭವನದಲ್ಲಿ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು (ರಿ) ಬೆಂಗಳೂರು ಹಾಗೂ ಜಿ ಶಿಕ್ಷಕರ ಸಾಹಿತ್ಯ ಪರಿಷತ್ತು ಶಿವಮೊಗ್ಗ ಇವರ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.
ಕರ್ನಾಟಕ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ಅನಿತಾ ಕಷ್ಣ ಅವರು ಆಶಯ ನುಡಿಗಳನ್ನು ಹೇಳುತ್ತಾ, ಶಿಕ್ಷಕರಿಗೆ ಭಾಷಾ ಪ್ರೌಢಿಮೆ ಇರುತ್ತದೆ. ಅದನ್ನು ಸದುಪಯೋಪಡಿಸಿಕೊಳ್ಳಲು ಸಾಹಿತ್ಯ ರಚನೆಯಲ್ಲೂ ತೊಡಗಿ ಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಡಿ ದೇವರಾಜ್ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಪ್ರೊ. ಅನುರಾಧ ಪಾಟೀಲ್ ಅವರು, ಸಮಯ ಪಾಲನೆಗೆ ನಾವೆಲ್ಲರೂ ಬದ್ಧರಾಗಿರಬೇಕು ಹಾಗೂ ನಮ್ಮ ಸುತ್ತಮುತ್ತಲೂ ಇರುವ ಮಹಿಳಾ ಸಾಧಕಿಯರ ಚರಿತ್ರೆಯನ್ನು ನಾವು ತಿಳಿದುಕೊಳ್ಳಬೇಕು. ಈ ಮೂಲಕ ಅವರೇ ನಮಗೂ ಸ್ಪೂರ್ತಿಯಾಗಬೇಕು ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅವರು ಮಾತನಾಡಿ, ನಮಗೆ ಪ್ರಪ್ರಥಮ ಮಹಿಳಾ ಶಿಕ್ಷಕಿಯಾಗಿ ಮಹಿಳೆಯ ಏಳ್ಗೆಗೆ ಶ್ರಮಿಸುತ್ತಾ, ಅನೇಕ ಕಟ್ಟುಪಾಡುಗಳನ್ನು ತೊಲಗಿಸಲು ಶ್ರಮಿಸಿದ ಸಾವಿತ್ರಿಬಾಯಿ ಪುಲೆರವರು ಸ್ಪೂರ್ತಿಯಾಗಬೇಕು. ಎ ಮಹಿಳೆಯರಿಗೆ ಹಾಗೂ ಡಾ. ಬಿ. ಆರ್ ಅಂಬೇಡ್ಕರ್ ಮತ್ತು ಅವರ ತಾಯಿ ಈಗಿನ ಸಮಾಜಕ್ಕೆ ದೊಡ್ಡ ಸ್ಪೂರ್ತಿ ಎಂದು ಹೇಳುತ್ತಾ ಪ್ರಸ್ತುತ ನಮ್ಮ ಸಮಾಜದಲ್ಲಿ ಈಗಲೂ ಬೇರು ಬಿಟ್ಟಿರುವ ಅಸ್ಪೃಶ್ಯತೆಯನ್ನು ತೊಲಗಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂಬ ಜಗೃತಿಯ ಸಂದೇಶವನ್ನು ರವಾನಿಸಿದರು.
ಶಿಕ್ಷಕರ ಸಾಹಿತ್ಯ ಪರಿಷತ್ತಿನ ರಾಜಧ್ಯಕ್ಷ ಶಿವಕುಮಾರ್ ಮಾತನಾಡಿ, ಶಿವಮೊಗ್ಗ ಕವಿಗಳ ತವರೂರು, ಸಾಹಿತಿಗಳಿಗೆ ಅನುಕೂಲಕರ ವಾತಾವರಣ ಇಲ್ಲಿ ಆಗಾಧವಾಗಿದೆ. ಎ ಶಿಕ್ಷಕರನ್ನೂ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸುವ ಕಾರ್ಯ ನಡೆಯ ಬೇಕಿದೆ ಎಂದು ಕರೆ ನೀಡಿದರು.
ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ವಿವರಿಸಿದ ರಾಜ್ಯಾಧ್ಯಕ್ಷರು, ಶಿವಮೊಗ್ಗ ಜಿಯ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ತುಂಬು ಹೃದಯದಿಂದ ಶ್ಲಾಘಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ರಾಜ್ಯ ಮಟ್ಟದ ಸ್ಪೂರ್ತಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಅನುರಾಧ ಪಾಟೀಲ್, ಶ್ರೀಮತಿ ರಜಿಯಾ, ಶ್ರೀಮತಿ ಸಾವಿತ್ರಿ, ಶ್ರೀಮತಿ ಜ್ಯೋತಿ ಸೋಮಶೇಖರ್, ಶ್ರೀಮತಿ ಸವಿತಾ, ಶ್ರೀಮತಿ ಲತಾ ರಾಜ್ ಕುಮಾರ್, ಶ್ರೀಮತಿ ಬನಶಂಕರಿ, ಶ್ರೀಮತಿ ಸುಮತಿ ಜಿ, ಡಾ. ತ್ರಿವೇಣಿ, ಡಾ. ಮಂಜುಳಾ ಎನ್ ಆರ್, ಸಿಸ್ಟರ್ ಎಲಿಸ್ ಲೂರ್ಗ್, ಶ್ರೀಮತಿ ಮೇರಿ ಡಿಸೋಜ, ಶ್ರೀಮತಿ ಚಂದ್ರಕಾಂತಿ, ಶ್ರೀಮತಿ ಕೋಕಿಲಾ ಎಲ್ಲರೂ ತಮ್ಮ ಗೌರವವನ್ನು ಮನಃಪೂರ್ವಕವಾಗಿ ಸ್ವೀಕರಿಸಿ ಸಮಾಜಕ್ಕೆ ಮಾದರಿಯಾದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಶ್ರೀ ಅರಳೀಹಳ್ಳಿ ಅಣ್ಣಪ್ಪ, ಶ್ರೀ ರಂಗನಾಥ ಕ ನಾ ದೇವರಹಳ್ಳಿ, ಶ್ರೀ ವಾಗೀಶ್ ಆರಾಧ್ಯ, ಶ್ರೀ ಹಸನ್ ಬೆಳ್ಳಿಗನೂಡು, ಶ್ರೀಮತಿ ನಾಗರತ್ನ, ಶ್ರೀಮತಿ ಸುಜತ ಬಸವರಾಜ್, ಶ್ರೀಮತಿ ಸಾವಿತ್ರಮ್ಮ ಎಂ. ಜಿ. , ಶ್ರೀ ಉಮಾಪತಿ ಗಂಗಾರಾಮ್, ಶ್ರೀ ಬಸವನಗೌಡ, ಶ್ರೀಚನ್ನಬಸಪ್ಪ ನ್ಯಾಮತಿ, ಇವರು ಮಹಿಳೆಯ ಕುರಿತ ಕವನ ವಾಚನ ಮಾಡಿ ಮಹಿಳಾ ದಿನಾಚರಣೆಯ ಘನತೆಯನ್ನು ಹೆಚ್ಚಿಸಿದರು.
ಕಾರ್ಯಕ್ರಮದಲ್ಲಿ ಡಾ| ಗಾಯಿತ್ರಿ ಹಾಗೂ ಶ್ರೀಮತಿ ಸಾವಿತ್ರಿ ಉಪಸ್ಥಿತರಿದ್ದರು. ಪರಿಷತ್ತಿನ ಗೌರವ ಸಲಹೆಗಾರರಾದ ಶ್ರೀಮತಿ ಮಂಜುಳಾ ಎನ್.ಆರ್. ಪ್ರಾರ್ಥಿಸಿದರು. ಪರಿಷತ್‌ನ ಗೌರವಾಧ್ಯಕ್ಷ ನಾಗರಾಜ್ ಸ್ವಾಗತಿಸಿದರು. ಜ್ಯೂನಿಯರ್ ವಿಷ್ಣುವರ್ಧನ್ ಖ್ಯಾತಿಯ ಅಪೇಕ್ಷಾ ಮಂಜುನಾಥ್ ಸರ್ವರಿಗೂ ವಂದಿಸಿ ಅಭಿನಂದಿಸಿದರು.