ಇತರೆತಾಜಾ ಸುದ್ದಿದೇಶ

ಮಣಿಪುರ: ಶಾಂತಿ ಮರುಸ್ಥಾಪನೆಗೆ ಆಗ್ರಹಿಸಿ ಮಂಗಳೂರಿನಲ್ಲಿ ಸಮಾನ ಮನಸ್ಕರ ಮೌನ ಪ್ರತಿಭಟನೆ

Share Below Link

ಮಂಗಳೂರು: ಹಲವಾರು ಸಮಾನ ಮನಸ್ಕ ಸಂಘಟನೆಗಳು, ಕ್ಯಾಥೋಲಿಕ್ ಸಭಾ ಮಂಗಳೂರು ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಮಂಗಳೂರು ಮಣಿ ಪುರದಲ್ಲಿ ರಾಜ್ಯದಲ್ಲಿ ಅಶಾಂತಿ ಯಿಂದ ಬಳಲುತ್ತಿರುವ ಜನರಿಗೆ ಒಗ್ಗಟ್ಟನ್ನು ತೋರಿಸುತ್ತಾ ಮಣಿ ಪುರದಲ್ಲಿ ಶಾಂತಿ ಇರಲಿ ಎಂಬ ಪ್ರತಿಭಟನಾ ಸಭೆ ನಡೆಸಿತು. ಮಂಗಳವಾರ ಜೂನ್ ೬ ರಂದು ಗಡಿಯಾರ ಗೋಪುರದಲ್ಲಿ ನಡೆದ ಸಭೆಯಲ್ಲಿ ಹಲವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶಾಂತಿಯನ್ನು ಮರುಸ್ಥಾಪಿ ಸಲು ಮತ್ತು ಸಂತ್ರಸ್ತ ಜನರಿಗೆ ಸಹಾಯ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡುವಂತೆ ಸಭೆ ಸರ್ಕಾರಕ್ಕೆ ಮನವಿ ಮಾಡಿತು.
ಮಂಗಳೂರು ಧರ್ಮಪ್ರಾಂತ್ಯದ ಪಿಆರ್‌ಒ ರಾಯ್ ಕ್ಯಾಸ್ಟ ಲಿನೊ ಮಾತನಾಡಿ, ಮಣಿಪುರ ದಲ್ಲಿ ಜನರ ಮೇಲಿನ ದೌರ್ಜನ್ಯ ವನ್ನು ನಾವು ಬಲವಾಗಿ ಖಂಡಿಸು ತ್ತೇವೆ. ಇಲ್ಲಿಯವರೆಗೆ, ಅಶಾಂತಿ ಯಲ್ಲಿ ೯೮ ಜನರು ಪ್ರಾಣ ಕಳೆದು ಕೊಂಡಿzರೆ, ಮನೆಗಳು, ಶಾಲೆ ಗಳು ಮತ್ತು ಚರ್ಚ್‌ಗಳು ಧ್ವಂಸ ಗೊಂಡಿವೆ. ಜತಿ ರಾಜಕಾರಣ ಕೇವಲ ಒಂದು ಕಾರಣ, ಆದರೆ ಅಶಾಂತಿಯ ಹಿಂದೆ ?ಡ್ಯಂತ್ರವಿದೆ. ಇಷ ಅವ್ಯವಸ್ಥೆ ಹಾಗೂ ಸಾರ್ವ ಜನಿಕ ಆಸ್ತಿ ನಾಶವಾಗುತ್ತಿರುವಾಗ ಪೊಲೀಸರು ಮನವಾಗಿರುವು ದೇಕೆ? ಸಮಸ್ಯೆಯನ್ನು ಬಗೆಹರಿಸಿ ನ್ಯಾಯ ಒದಗಿಸಬೇಕೆಂದು ನಾವು ಒತ್ತಾಯಿಸುತ್ತೇವೆ? ಎಂದು ಅವರು ಮಣಿಪುರದಲ್ಲಿ ಅಶಾಂತಿಗೆ ಕಾರಣವಾದ ಕಾರಣವನ್ನು ವಿವರಿ ಸಿದರು.

ಕಿನ್ನಿಗೋಳಿ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚಿನ ಧರ್ಮಗುರು ಫಾವಸ್ಟೀನ್ ಲೋಬೋ ಮಾತ ನಾಡಿ, ಸರ್ಕಾರ ಮತ್ತು ಚುನಾ ಯಿತ ಪ್ರತಿನಿಧಿಗಳು ಜನರನ್ನು ರಕ್ಷಿಸುವಲ್ಲಿ ವಿಫಲರಾಗಿzರೆ ಮತ್ತು ಕಾನೂನು ಜರಿಗೊಳಿಸು ವಲ್ಲಿ ವಿಫಲರಾಗಿzರೆ. ಇದು ಸರ್ಕಾರ ಅಶಾಂತಿಯನ್ನು ಉತ್ತೇಜಿ ಸುವುದಕ್ಕೆ ಸಮಾನವಾಗಿದೆ. ಸಾರ್ವಜನಿಕರಾಗಿ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ನಮಗಿದೆ. ೨೭ ದಿನಗಳ ಅಶಾಂತಿಯ ನಂತರ ಗೃಹ ಸಚಿವ ಅಮಿತ್ ಶಾ ಮಣಿಪುರಕ್ಕೆ ಭೇಟಿ ನೀಡಿzರೆ. ನಾಶವಾದ ಇಷ ದಿನಗಳ ನಂತರ ಸ್ಥಳಕ್ಕೆ ಭೇಟಿ ನೀಡುವ ಅಗತ್ಯ ಏನಿತ್ತು? ಪ್ರಧಾನಿ ನರೇಂದ್ರ ಮೋದಿ ಅವರು ಚುನಾ ವಣಾ ಪ್ರಚಾರದಲ್ಲಿ ನಿರತರಾಗಿ zರೆ, ಚುನಾವಣೆ ಗೆಲ್ಲುವುದು ಅವರ ಏಕೈಕ ಉದ್ದೇಶವಾಗಿದೆ ಮತ್ತು ಜನರಿಗಾಗಿ ಕೆಲಸ ಮಾಡು ತ್ತಿಲ್ಲ. ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿ ಸಬೇಕು, ಹತ್ಯಾಕಾಂಡ ನಿಲ್ಲಿಸ ಬೇಕು ಹಾಗೂ ಇನ್ನೂ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂ ಡು ಜನರು ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದು ಕಂಡುಬಂತು.
ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ, ಬೆಥನಿ ಪ್ರಾಂತೀಯ ವರಿಷ ಭಗಿನಿ ಸಿಸಿಲಿಯಾ ಮೆಂಡೋನ್ಸಾ, ಮಂಗಳೂರು ಪ್ರದೇಶ ಕೆಥೋಲಿಕ್ ಸಭಾದ ಅಧ್ಯಕ್ಷ ಸ್ಟ್ಯಾನಿ ಲೋ ಬೋ, ಮಂಗಳೂರು ಧರ್ಮ ಪ್ರಾಂತ್ಯದ ಪಿ ಆರ್ ಒ.ಫಾ. ಜೆ.ಬಿ.ಸಲ್ಡಾನ್ಹಾ, ಫಾ.ಮ್ಯಾಕ್ಸಿಂ ನೊರೊನ್ಹಾ, ನೊರಿನ್ ಪಿಂಟೊ, ಐಸಿವೈಎಂ ಅಧ್ಯಕ್ಷ ಅನಿಲ್ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.