ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಇನ್ನಾದರೂ ನೆಮ್ಮದಿಯ ಜೀವನ ನಡೆಸಿ: ಈಶ್ವರಪ್ಪರಿಗೆ ವೈಹೆಚ್‌ಎನ್ ಸಲಹೆ

Share Below Link

ಶಿವಮೊಗ್ಗ: ಕೆಲವರಿಗೆ ಕೆಟ್ಟ ಮೇಲೆ ಬುದ್ಧಿ ಬರುತ್ತದೆ. ಆದರೆ ಕೆ.ಎಸ್. ಈಶ್ವರಪ್ಪ ಅಂಥವರಿಗೆ ಕೆಟ್ಟ ಮೇಲೆಯೂ ಬುದ್ದಿ ಬರುವುದಿಲ್ಲ ಎಂದು ಕೆಪಿಸಿಸಿ ಸದಸ್ಯ ವೈಎಚ್ ನಾಗರಾಜ್ ಟೀಕಿಸಿದ್ದಾರೆ.
ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡುವ ಯಾವ ಅರ್ಹತೆ, ನೈತಿಕತೆಯೂ ಈ ಈಶ್ವರಪ್ಪ ಅವರಿಗೆ ಇಲ್ಲ. ಪದೇಪದೇ ಅವರನ್ನು ಅಲೆಮಾರಿ ಎಂದು ಹೇಳುವ ಮೂಲಕ ಅಲೆಮಾರಿ ಜನಾಂಗಕ್ಕೂ ಅವಮಾನ ಮಾಡುತ್ತಿzರೆ. ಈಗಾಗಲೇ ಅಲೆಮಾರಿ ಎಂಬ ಪದ ಬಳಕೆಯ ವಿರುದ್ಧ ಅವರ ಮೇಲೆ ದೂರು ಕೂಡ ದಾಖಲಿಸಲಾಗಿದೆ ಎಂದರು.
ಈಶ್ವರಪ್ಪ ಸಹನೆ ಕಳೆದು ಕೊಂಡು ಬಹಳ ವರ್ಷಗಳೇ ಆಗಿವೆ. ಯಾವಾಗ ಸಿದ್ದರಾಮಯ್ಯ ಅವರನ್ನು ಹೀಯಾಳಿಸಲು ಹೊರಟರೋ ಆಗಲೇ ಅವರ ಶಕ್ತಿ ಕುಂದಿ ಹೋಯಿತು. ಯಾವಾಗ ಶೇ.೪೦ರ ಆರೋಪ ಹೊತ್ತು ಸಚಿವ ಪಟ್ಟ ಕಳೆದುಕೊಂಡರೋ ಆವಾಗಲೇ ಅವರ ಮತಗಳು ಕಳೆದು ಹೋದವು. ಯಾವಾಗ ಬಿಜೆಪಿಯ ಪಾಲಿಗೆ ಶ್ರೀ ಕಷ್ಣನಂತೆ ಇದ್ದ ಯಡಿಯೂರಪ್ಪನವರ ವಿರುದ್ಧ ರಾಜಪಾಲರಿಗೆ ದೂರು ನೀಡಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಲು ಕಾರಣರಾದರೋ ಆವಾಗಲೇ ಅವರ ಮೇಲೆ ಬಿಜಿಪಿ ಭಕ್ತಿ ಯೂ ಹೊರಟು ಹೋಯಿತು ಎಂದು ಆರೋಪಿಸಿದ ಅವರು, ಈಶ್ವರಪ್ಪ ಈಗ ಏಕಾಂಗಿಯಾಗಿ zರೆ ಚುನಾವಣೆಯನ್ನು ಎದುರಿಸುವ ಯಾವ ಶಕ್ತಿಯು ಅವರಿಗೆ ಉಳಿದಿಲ್ಲ. ಚುನಾವಣೆ ಯನ್ನು ಗೆಲ್ಲಲು ಇದ್ದ ತಂತ್ರ ಮಂತ್ರಗಳು ಅವರಿಗೆ ಮರೆತು ಹೋಗಿವೆ ಜನರ ಶಾಪದ ಪಾತ್ರೆ ತುಂಬಿ ತುಳುಕುತ್ತಿದೆ, ಸಿದ್ದರಾಮಯ್ಯ ಅವರನ್ನು ಹೀಯಾಳಿಸಿದ ಮರುಕ್ಷಣವೇ ಅವರ ಸೋಲಿನ ಮೂಟೆ ಹೆಗಲೇರಿದೆ ಎಂದರು.
ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ನೂರಾರು ಕ್ಷೇತ್ರಗಳಿವೆ ಆದರೆ ಈಶ್ವರಪ್ಪನವರಿಗೆ ಎಲ್ಲಿದೆ ಕ್ಷೇತ್ರ? ಶಿವಮೊಗ್ಗದಲ್ಲಿ ಈಗಾಗಲೇ ತನಗೆ ಸೀಟು ಸಿಗುವುದಿಲ್ಲ ಎಂದು ಮಗನನ್ನು ಕರೆತರಲು ಹೊರಟಿzರೆ, ಕಾಲ ಇನ್ನೂ ಇನ್ನು ಮಿಂಚಿಲ್ಲ ಧರ್ಮವನ್ನು ಸ್ವಾರ್ಥಕ್ಕೆ ಬಳಸಿ ಕೊಂಡ ಅಮಲು ಇಳಿಯಲಿ ,ಅವರು ಚುನಾವಣೆ ಕಣದಿಂದ ದೂರ ಸರಿಯಲಿ, ಇಡೀ ಶಿವಮೊಗ್ಗದಲ್ಲಿ ಅಶಾಂತಿ ಹುಟ್ಟಿಸಿ ಶಾಂತಿ ಕದಡಿದ್ದ ಅವರ ಮಲಿನ ಮನಸ್ಸನ್ನು ಈಗಲಾದರೂ ಶುದ್ಧಗೊಳಿಸಿಕೊಳ್ಳಲಿ. ಸಿದ್ದರಾಮಯ್ಯ ಯೋಚನೆ ಬಿಟ್ಟು ಜೊತೆಗೆ ಮಗನ ಪ್ರೀತಿ ಬಿಟ್ಟು ನೆಮ್ಮದಿಯಿಂದ ಜೀವನ ನಡೆಸಲಿ ಎಂದು ವೈ ಎಚ್ ನಾಗರಾಜ್ ಹೇಳಿzರೆ.