ಜಿಲ್ಲಾ ಸುದ್ದಿತಾಜಾ ಸುದ್ದಿ

ಅಹಿಂಸೆಯ ಮಾರ್ಗದಲ್ಲಿ ನಡೆಯೋಣ :ಡಿಸಿ

Share Below Link

ಶಿವಮೊಗ್ಗ :ಅಹಿಂಸೆಯ ತತ್ವ ವನ್ನು ಅಳವಡಿಸಿಕೊಂಡು ಲೋಕಕ್ಕೇ ಪ್ರತಿಪಾದಿಸಿದ ದೊಡ್ಡ ತತ್ವeನಿ ಮಹಾತ್ಮಾಗಾಂಧೀಜಿಯ ವರು. ಅವರ ಈ ತತ್ವವನ್ನು ನಾವೆಲ್ಲ ಅಳವಡಿಸಿಕೊಂಡು ಇತರರಿಗೂ ಬೋಧಿಸೋಣ ಎಂದು ಡಿಸಿ ಡಾ.ಸೆಲ್ವಮಣಿ ತಿಳಿಸಿದರು.
ಜಿಡಳಿತ, ಜಿ. ಪಂ. ಮಹಾ ನಗರಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಇವರ ಸಂಯು ಕ್ತಾಶ್ರಯದಲ್ಲಿ ಇಂದು ಅಂಬೇಡ್ಕರ್ ಭವನದಲ್ಲಿ ಏರ್ಪಡಿ ಸಲಾಗಿದ್ದ ಮಹಾತ್ಮಾ ಗಾಂಧೀಜಿಯವರ ೧೫೪ ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರಪಿತ ಗಾಂಧೀಜಿಯ ವರು ಕೇವಲ ಸ್ವಾತಂತ್ರ್ಯ ಓರ್ವ ಹೋರಾಟಗಾರರಲ್ಲ. ಸತ್ಯ, ಅಹಿಂಸೆ, ಸಮಾನತೆ ಮಾರ್ಗದಲ್ಲಿ ಸಾಗಬೇಕೆಂದು ತೋರಿಸಿಕೊಟ್ಟ ತತ್ವeನಿಗಳು. ಸ್ವಾತಂತ್ರ್ಯ ಚಳವಳಿ ವೇಳೆ ಬ್ರಿಟಿಷರು ಗುಂಡಿ ಗಿಂತ ಗಾಂಧೀಜಿಯವರ ಅಹಿಂಸಾ ತತ್ವಕ್ಕೆ ಹೆಚ್ಚು ಹೆದರುತ್ತಿದ್ದರು. ವಿದ್ಯಾರ್ಥಿಗಳೆಲ್ಲರೂ ವಿನ್ಸೆಂಟ್ ಚರ್ಚಿಲ್‌ರವರು ಗಾಂಧೀಜಿ ಬಗ್ಗೆ ಹೇಳಿರುವುದನ್ನು ಓದಬೇಕು.


ಶಾಂತಿ, ಸರ್ಮಧರ್ಮ ಸಮಾನತೆಯಿಂದ ಸೌಹಾರ್ಧತೆ ನೆಲೆಸಬೇಕೆಂದು ಹೋರಾಡುತ್ತಿದ್ದ ಗಾಂಧಿಯವರು ನನ್ನ ಜೀವನವೇ ನನ್ನ ಸಂದೇಶವೆಂಬಂತೆ ಬದುಕಿದ ವರು. ಅವರ ಸತ್ಯ ಮಾರ್ಗ ಮತ್ತು ಅಹಿಂಸೆಯ ತತ್ವಗಳನ್ನು ನಾವು ಅಳವಡಿಸಿಕೊಂಡು, ಸುತ್ತಮುತ್ತಲಿ ನವರಿಗೆ ಬೋಧಿಸಬೇಕು. ಬೇರೊ ಬ್ಬರಿಗೆ ಹಿಂಸೆ ಮಾಡಿದರೆ ಆ ಹಿಂಸೆ ಎಲ್ಲರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಅದನ್ನು ಗಮನದ ಲ್ಲಿಟ್ಟುಕೊಂಡು ಅಹಿಂಸೆಯ ಮಾರ್ಗದಲ್ಲಿ ನಾವೆಲ್ಲ ನಡೆಯೋಣ ಎಂದು ಕರೆ ಕೊಟ್ಟರು.
ಜಿ ಕಸಾಪ ಅಧ್ಯಕ್ಷ ಮಂಜುನಾಥ್ ಡಿ, ಉಪನ್ಯಾಸ ನೀಡಿ ಮಾತನಾಡಿ, ಮಹಾತ್ಮ ಅನ್ನಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಮಹಾತ್ಮನಾಗುವ ಹಿಂದೆ ಬಹಳ ದೊಡ್ಡ ತ್ಯಾಗ, ಬಲಿದಾನವಿರುತ್ತದೆ.
ಇಡೀ ವಿಶ್ಚದಲ್ಲಿ ಒಬ್ಬ ನಾಯಕನ ಕುರಿತು ಅತಿ ಹೆಚ್ಚು ಸಾಹಿತ್ಯ ರಚನೆಯಾಗಿರುವುದು ಗಾಂಧೀಜಿ ಬಗ್ಗೆ ಎಂಬುದು ಹೆಮ್ಮೆ. ಅವರ ಜೀವನವೇ ತೆರೆದ ಪುಸ್ತಕವಿ ದ್ದಂತೆ. ಅವರೊಂದು ಬೆಳಕು. ನಮ್ಮ ಬದುಕಿಗೆ ಮಾತ್ರವಲ್ಲ ಇಡೀ ಜಗತ್ತಿಗೇ ಗಾಂಧೀಜಿಯವರು ಆದರ್ಶಪ್ರಾಯರಾಗಿzರೆ. ನಮ್ಮ ಸುತ್ತಲಿನ ಅನೇಕ ಸಮಸ್ಯೆಗಳಿಗೆ ಅವರು ಪರಿಹಾರವಾಗಿzರೆ.
ಇಂತಹ ನಾಯಕನ ಕುರಿತು ಅಧ್ಯಯನ, ಓದಿನ ಕೊರತೆ ಇದೆ. ಒಬ್ಬರ ಬಗ್ಗೆ ಏನೂ ಅಧ್ಯಯನ ನಡೆಸದೆ, ತಿಳಿಯದೆ ಟೀಕೆ ಮಾಡು ವುದು, ತಪ್ಪಾಗಿ ಮಾತನಾಡುವುದು ಸರಿಯಲ್ಲ. ಓದಿನ ಅರಿವಿನ ಕೊರತೆಯನ್ನು ನೀಗಿಸಬೇಕು. ವಿದ್ಯಾರ್ಥಿಗಳು ಬಾಫೂಜಿ ಬಗ್ಗೆ ಚೆನ್ನಾಗಿ ಅಧ್ಯಯನ ಮಾಡಬೇಕು. ತಮ್ಮ ನಡೆ-ನುಡಿಯಲ್ಲಿ ಅಹಿಂಸೆ ಯನ್ನು ಅಳವಡಿಸಿಕೊಂಡಿದ್ದ ಬಾಪೂಜಿಯವರು ವಿದ್ಯಾರ್ಥಿ ಗಳಿಗೂ ಹೊಡೆಯದೆ, ಹಿಂಸೆ ಮಾಡದೆ ವಿದ್ಯೆ ಕಲಿಸಬೇಕು ಎನ್ನುತ್ತಿ ದ್ದರು. ಒಂದೊಮ್ಮೆ ಶಿಕ್ಷಿಸಲೇ ಬೇಕಾದಲ್ಲಿ ತಂದೆಯ ಪ್ರೀತಿಯ ಅಂತಃಕರಣದಿಂದ ಶಿಕ್ಷಿಸಬೇಕೆನ್ನುತ್ತಿದ್ದರು. ಜಿಯಲ್ಲಿ ಎರಡು ಬಾರಿ ಶಾಸಕಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ರತ್ನಮ್ಮ ಮಾಧವಾಚಾರ್ ಅವರು ತಮ್ಮ ಬಾಣಂತನವನ್ನು ಜೈಲಿನಲ್ಲಿಯೇ ಕಳೆದಿದ್ದರು ಎನ್ನುವ ವಿಷಯ ಎಷ್ಟೋ ಜನರಿಗೆ ಗೊತ್ತಿಲ್ಲ. ಜಿಯ, ನಾಡಿದ, ದೇಶದ ಹೋರಾಟಗಾರರು ಹಾಗೂ ಗಾಂಧಿ ಕುರಿತು ಹೆಚ್ಚೆಚ್ಚು ಓದಿ ತಿಳಿದುಕೊಳ್ಳಬೇಕು ಎಂದರು.
ಗಾಂಧಿ ಜಯಂತಿ ಕಾರ್‍ಯ ಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ ಮಾಡಲಾಯಿತು. ಶ್ರೀ ಮಂಜು ನಾಥ ಭಟ್‌ರವರು ಭಗವದ್ಗೀತೆ ಯನ್ನು, ಶ್ರೀ ಲತೀಫ್ ಸಾ ಅದಿರವರು ಖುರಾನ್‌ನ್ನು ಹಾಗೂ ಫಾ.ಸ್ಟ್ಯಾನಿ ಡಿಸೋಜ ರವರು ಬೈಬಲ್ ಪಠನ ಮಾಡಿದರು.
ಮಹಾತ್ಮಾಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಜೀವನ ಕುರಿತು ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ/ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾ ಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ(ಪ್ರ) ಮಾರುತಿ ಆರ್ ಸ್ವಾಗತಿಸಿದರು.
ಅಲ್ಪಸಂಖ್ಯಾತರ ಇಲಾಖೆಯ ತಾಲ್ಲೂಕು ವಿಸ್ತರಣಾ ಧಿಕಾರಿ ಶ್ರೀಪತಿ ನಿರೂಪಿಸಿದರು.
ಜಿ.ಪಂ ಉಪ ಕಾರ್ಯದರ್ಶಿ ಸುಜತ ಕೆ.ಆರ್, ಡಿಡಿಪಿಯು ಕೃಷ್ಣಪ್ಪ, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.