ಜಿಲ್ಲಾ ಸುದ್ದಿತಾಜಾ ಸುದ್ದಿ

ವಿಶ್ವಕರ್ಮ ಜನಾಂಗದ ಉಪಕಸಬು ನಡೆಸುವ ಪಂಚ ಕೆಲಸದವರೆಲ್ಲ ಒಂದೆಂಬ ಒಗ್ಗಟ್ಟಿನ ಶಕ್ತಿ ನಿರ್ಮಾಣವಾಗಲಿ: ಸ್ವಾಮೀಜಿ

Share Below Link

ಹೊನ್ನಾಳಿ : ವಿಶ್ವಕರ್ಮದ ಸಮಾಜದವರು ಜೀವನ ನಿರ್ವಹಣೆಗೆ ಪಂಚ ಕೆಲಸಗಳಲ್ಲಿ ತೊಡಗಿದವರಾಗಿದ್ದು. ತಾವೆ ಒಂದೇ ಎಂಬ ವಿಶಾಲ ಭಾವನೆ ಹೋಂದಿ ವಿಶ್ವಕರ್ಮ ಜನಾಂಗವು ಸಧೃಡವಾಗಿ ಸಂಘಟನೆಗೊಳ್ಳ ಬೆಕಿದೆ ಎಂದು ಚನ್ನಗಿರಿ ತಾಲೂಕು ವಡ್ನಾಳ್ ಶ್ರೀ ವಿಶ್ವಕರ್ಮ ಮಹಾ ಸಂಸ್ಥಾನ ಸಾವಿತ್ರೀ ಪೀಠದ ಅಷ್ಟೋತ್ತರ ಶತಶ್ರೀ ಶಂಕರಾತ್ಮಾ ನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮ ಸಮೂದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಮಹಾಸಂಸ್ಥಾನ ಶ್ರೀಗಳವರ ೬ನೇ ವರ್ಷದ ಚಾತುರ್ಮಾಸ ಸಿಮೋಲ್ಲಂಘನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸರ್ಕಾರವೇನು ವಿಶ್ವಕರ್ಮ ಜಯಂತಿಯನ್ನು ಆರಂಭದಲ್ಲಿ ಸರ್ಕಾರಿ ಕಛೇರಿ, ಸ್ಥಳಿಯ ಸಂಸ್ಥೆಗಳು ಇದೀಗ ಶಾಲಾ-ಕಾಲೇಜುಗಳಲ್ಲೂ ಆಚರಿಸಲು ವಿಸ್ತರಿಸಿದೆ. ಶಾಲೆಯಲ್ಲಿ ವಿಶ್ವಕರ್ಮ ಗುರುವಿನ ಪೋಟೋ ಇಲ್ಲವಾದಲ್ಲಿ ಅಲ್ಲಿನ ಸಮಾಜದವರೇ ಒಂದು ಪೋಟೋ ಕೊಡುವಂತೆ ಸಲಹೆ ನೀಡಿ, ಆದಿ- ಅಂತ್ಯ ಹಾಗೂ ಹುಟ್ಟು ಸಾವಿಲ್ಲದ ವಿಶ್ವಕರ್ಮ ಗುರುಗಳು ಯಜ್ಞದಲ್ಲಿ ಅವಿರ್ಭವಿಸಿದವರಾಗಿದ್ದು. ಜಯಂತಿ ಆಚರಣೆ ಬಗ್ಗೆ ಚರ್ಚೆ ಹಾಗೂ ಜಿeಸೆಯಲ್ಲಿದ್ದು ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ವಿವರಿಸಿದರು.
ಹೊನ್ನಾಳಿ ತಾಲೂಕಿನ ವಿಶ್ವಕರ್ಮ ಬಂಧುಗಳು ನಮ್ಮ ಪಟ್ಟಾಧಿಕಾರದಲ್ಲಿ ಹೆಚ್ಚು ಆಸಕ್ತಿ ತೋರಿದಂತೆ ಇದೀಗ ಚತುರ್ಮಾಸದ ಆಚರಣೆಗಳಲ್ಲೂ ಮುಂಚೂಣಿಯಲ್ಲಿದ್ದು. ಗುರುಗಳ ನಂಬಿಕೆಗೆ ಚುತಿ ಬರದ ರೀತಿಯಲ್ಲಿ ೬ನೇ ಚತುರ್ಮಾಸ ಸಿಮೋಲ್ಲಂಘನ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಿದ್ದರ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಇದೇರೀತಿ ಹರಿಹರದ ವಿಶ್ವಕರ್ಮ ಸಮಾಜದ ಭಂದುಗಳು ಮಠಕ್ಕೆ ಜಮೀನು ಕೊಳ್ಳುಲು ಹೆಚ್ಚು ಸಹಕರಿಸಿದ್ದರು ಎಂಬುದನ್ನು ಸ್ಮರಿಸಿದರು.
ಹಿರೇಕಲ್ಮಠದ ಡಾ.ಒಡೆಯರ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ಮಠದ ಹಿರಿಯ ಸ್ವಾಮೀಜಿಗಳಾದ ಶ್ರೀಚಂದ್ರಶೇಖರ ಸ್ವಾಮೀಜಿ ಶ್ರೀಮಠದಿಂದ ವಿಶ್ವಕರ್ಮ ಸಮಾಜಕ್ಕೆ ಸಮೂದಾಯ ಭವನದ ನಿವೇಶನವನ್ನು ನೀಡಿದ್ದು. ಸಮಾಜವು ಇದನ್ನು ಸಮರ್ಪಕ ವಾಗಿ ಸದುಪಯೋಗ ಪಡಿಸಿ ಕೊಂಡಿದೆ. ಅದರಂತೆ ವಿಶ್ವಕರ್ಮದ ಸ್ವಾಮೀಜಿಗಳು ಚತುರ್ಮಾಸದ ಸಿಮೋಲ್ಲಂಘನೆ ಮುಕ್ತಯದ ಶ್ರೇಷ್ಠ ಹಾಗೂ ಶಕ್ತಿಯುತವಾದ ಸಮಯದ ದಿನವನ್ನು ಹೊನ್ನಾಳಿಗೆ ಕೊಟ್ಟಿzರೆ ಇದರ ಸಾಫಲ್ಯ ಹಾಗೂ ಸಾರ್ಥಕತೆ ಸಮಾಜದ ಭಂಧುಗಳು ಪಡೆಯುಂತಾಗಲಿ ಎಂದು ಶುಭಹಾರೈಸಿದರು.
ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ ೫೫ ವರ್ಷಗಳಿಂದ ಸಮಾಜದ ಅಧ್ಯಕ್ಷ ಪಾಲಾಕ್ಷಚಾರ್ ಹಾಗೂ ಸಮಾಜದ ಬಂಧುಗಲು ನಿಕಟ ಸಂಪರ್ಕ ಹೊಂದಿದವರಾಗಿದ್ದು. ೨೦೦೪ರಲ್ಲಿ ವಿಶ್ವಕರ್ಮ ಸಮಾಜದ ಸಮೂದಾಯ ಭವನಕ್ಕೆ ೧೦ ಲಕ್ಷ ರೂ. ಮಂಜೂರು ಮಾಡಿಸಲಾ ಗಿದ್ದು. ಆದಾಗ್ಯೂ ಕೆಲಸ ಏಕೆ ತ್ವರಿತಗತಿಯಲ್ಲಿ ಸಾಗಿಲ್ಲವಾದ ಕಾರಣ ಸಮಾಜದ ಭಂಧುಗಳು ಇದಕ್ಕೆ ಕೈ ಜೋಡಿಸ ಬೇಕಿದೆ ಸರ್ಕಾರದಿಂದ ಸಮೂದಾಯ ಭವನಕ್ಕೆ ಅವಕಾಶ ವಿದ್ದಲ್ಲಿ ಹೆಚ್ಚಿನ ಹಣ ಮಂಜೂರು ಮಾಡಿಸಿಕೊ ಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಎಂ.ಪಿ. ರೇಣು ಕಾಚಾರ್‍ಯ ಮಾತನಾಡಿ ರಾಜಕಾರಣಿ ಗಳಿಗೆ ಖುರ್ಚಿ ಹಾಗೂ ಸ್ಥಾನ ಮಾನ ಶಾಶ್ವತವಲ್ಲದಿದ್ದರೂ, ಗುರುಗಳು ಹಾಗೂ ಪೀಠಕ್ಕೆ ಸ್ಥಾನಮಾನಗಳು ಶಾಶ್ವಾತ ಎಂದು ರಾಜಕಾರಣಿಗಳು ಹಾಗೂ ನಾಡಿನ ಸ್ವಾಮೀಜಿಗಳ ಬಗ್ಗೆ ಇರುವ ಸಾರ್ವಜನಿಕರ ಅಭಿಪ್ರಾವನ್ನು ಮಾರ್ಮಿಕವಾಗಿ ಹಂಚಿಕೊಂ ಡರು.ಕಾರ್‍ಯಕ್ರಮದಲ್ಲಿ ವಿಶ್ವ ಕರ್ಮ ಗುರುಗಳ ಬಗ್ಗೆ ಶಿವಮೊಗ್ಗದ ಭಾಗ್ಯ ಲಕ್ಷ್ಮೀ ಅವರು ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯ ಕ್ಷತೆಯನ್ನು ಎ. ಪಾಲಾಕ್ಷಚಾರ್ ವಹಿಸಿದ್ದರು.
ಈ ಸಂದರ್ಭದಲ್ಲಿ ವಡ್ನಾಳ್ ಮಠದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಟಿ.ಮಹೇಂದ್ರಚಾರ್, ಶಿವಮೊಗ್ಗ ವಿಶ್ವ ಬ್ರಾಹ್ಮಣರ ಜಿ ಖಜಂಚಿ ಕೆ.ಬಿ. ಮಂಜಪ್ಪಾ ಚಾರ್, ಉದ್ಯಮಿ ಜೆ.ಎಲ್. ವಿಶ್ವೇ ಶ್ವರಾಚಾರ್, ದಾವಣಗೆರೆ ರವಿ ಕಾರ್‍ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಸಹಕಾರ್ಯದರ್ಶಿ ಬೆನಕಪ್ಪಾಚಾರ್ ಪ್ರಸ್ತಾವಿಕವಾಗಿ ಚತುರ್ಮಾಸದ ಬಗ್ಗೆ ಮಾತನಾ ಡಿದರು ಕೆ.ರುದ್ರಪ್ಪ ಸ್ವಾಗತಿಸಿ ದರು. ಶಾರದ ಕಾರ್‍ಯಕ್ರಮ ನಿರೂಪಿ ಸಿದರು ವಡ್ನಾಳ್ ಮಠದ ಭಕ್ತರು ಅವಳಿ ತಾಲೂಕುಗಳ ವಿಶ್ವಕರ್ಮ ಸಮಾಜದ ಭಂಧುಗಳು ಸಮಾಜದ ಮುಖಂಡರು ಇದ್ದರು.